<p>ಈ ಫೆಬ್ರುವರಿ ಮೊದಲ ವಾರದಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ 2ನೇ ಹಂತದ ₨ 9 ಟಿಕೆಟ್ ದರವನ್ನು ಚಿಲ್ಲರೆ ಸಮಸ್ಯೆಗಾಗಿ ₨ 10 ಮಾಡಿರುವುದು ನಿಜ ಎಂದು ಸಾರಿಗೆ ಸಚಿವರು ಫೆ. 17ರ ವಿಧಾನಪರಿಷತ್ತಿನಲ್ಲಿ ಹೇಳಿರುವುದು ಪ್ರಯಾಣಿಕರಲ್ಲಿ ಬೇಸರ, ವಿಸ್ಮಯ ಮೂಡಿಸಿದೆ. <br /> <br /> ಚಿಲ್ಲರೆ ಸಮಸ್ಯೆ ಪರಿಹರಿಸಲೂ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಹಾಕಬೇಕೆ? ಏಕೆ? ಪ್ರತಿದಿನ ದುಡ್ಡು ಕೊಟ್ಟು ಪ್ರಯಾಣಿಸುವವರಿಗೆ, ಹಿರಿಯ ನಾಗರಿಕರಿಗೆ ಬೆಲೆ ಏರಿಕೆ ಬಿಸಿ ತಗುಲಿರುವುದನ್ನು ಸಾರಿಗೆ ಸಂಸ್ಥೆ, ಸಚಿವರು ಗಂಭೀರವಾಗಿ ಗಮನಿಸಲಿ, ಸೂಕ್ತವಾಗಿ ಸ್ಪಂದಿಸಲಿ.<br /> <br /> ಪ್ರತಿದಿನ ಸಾರಿಗೆ ಸಂಸ್ಥೆಗೆ ಈ ಚಿಲ್ಲರೆ ಸಮಸ್ಯೆ ಆದರೆ ಏರಿಕೆಯ ಲಾಭ ಸಿಗುತ್ತಿದೆ! ಈ ಲಾಭ ತಿಂಗಳಿಗೆ ಎಷ್ಟು! ವರ್ಷಕ್ಕೆ ಎಷ್ಟು! ಎನ್ನುವ ಅಂಕಿ ಅಂಶವನ್ನು ಸಾರಿಗೆ ಸಂಸ್ಥೆ ಸಚಿವರು ಬಹಿರಂಗಪಡಿಸುವರೆ? ಕಡೆಪಕ್ಷ ಹಿರಿಯ ನಾಗರಿಕರಿಗಾದರೂ ದರ ಏರಿಕೆಯ ಬರೆ ಬೇಡ ಎನ್ನುವ ಮಾನವೀಯತೆಯನ್ನು ಸಾರಿಗೆ ಸಂಸ್ಥೆ ಪ್ರದರ್ಶಿಸಬಾರದೆ.<br /> <br /> ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆ ಇದೇ ಮಾದರಿ ಚಿಲ್ಲರೆ ಸಮಸ್ಯೆಯ ನೆಪ ಹೇಳಿ ಪ್ರಯಾಣ ದರ, ಬಸ್ಪಾಸ್ ದರ, ಏರಿಸಿದರೆ ಪ್ರಯಾಣಿಕರ ಗತಿ! ಬಿಎಂಟಿಸಿಯ ಈ ಅನ್ಯಾಯದ ವಿರುದ್ಧ ಪ್ರಯಾಣಿಕರು ಮೌನವಾಗಿರುವುದು ಎಂತಹ ಚಿಲ್ಲರೆ ವಿಪರ್ಯಾಸ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈ ಫೆಬ್ರುವರಿ ಮೊದಲ ವಾರದಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ 2ನೇ ಹಂತದ ₨ 9 ಟಿಕೆಟ್ ದರವನ್ನು ಚಿಲ್ಲರೆ ಸಮಸ್ಯೆಗಾಗಿ ₨ 10 ಮಾಡಿರುವುದು ನಿಜ ಎಂದು ಸಾರಿಗೆ ಸಚಿವರು ಫೆ. 17ರ ವಿಧಾನಪರಿಷತ್ತಿನಲ್ಲಿ ಹೇಳಿರುವುದು ಪ್ರಯಾಣಿಕರಲ್ಲಿ ಬೇಸರ, ವಿಸ್ಮಯ ಮೂಡಿಸಿದೆ. <br /> <br /> ಚಿಲ್ಲರೆ ಸಮಸ್ಯೆ ಪರಿಹರಿಸಲೂ ಪ್ರಯಾಣಿಕರಿಗೆ ದರ ಏರಿಕೆಯ ಬರೆ ಹಾಕಬೇಕೆ? ಏಕೆ? ಪ್ರತಿದಿನ ದುಡ್ಡು ಕೊಟ್ಟು ಪ್ರಯಾಣಿಸುವವರಿಗೆ, ಹಿರಿಯ ನಾಗರಿಕರಿಗೆ ಬೆಲೆ ಏರಿಕೆ ಬಿಸಿ ತಗುಲಿರುವುದನ್ನು ಸಾರಿಗೆ ಸಂಸ್ಥೆ, ಸಚಿವರು ಗಂಭೀರವಾಗಿ ಗಮನಿಸಲಿ, ಸೂಕ್ತವಾಗಿ ಸ್ಪಂದಿಸಲಿ.<br /> <br /> ಪ್ರತಿದಿನ ಸಾರಿಗೆ ಸಂಸ್ಥೆಗೆ ಈ ಚಿಲ್ಲರೆ ಸಮಸ್ಯೆ ಆದರೆ ಏರಿಕೆಯ ಲಾಭ ಸಿಗುತ್ತಿದೆ! ಈ ಲಾಭ ತಿಂಗಳಿಗೆ ಎಷ್ಟು! ವರ್ಷಕ್ಕೆ ಎಷ್ಟು! ಎನ್ನುವ ಅಂಕಿ ಅಂಶವನ್ನು ಸಾರಿಗೆ ಸಂಸ್ಥೆ ಸಚಿವರು ಬಹಿರಂಗಪಡಿಸುವರೆ? ಕಡೆಪಕ್ಷ ಹಿರಿಯ ನಾಗರಿಕರಿಗಾದರೂ ದರ ಏರಿಕೆಯ ಬರೆ ಬೇಡ ಎನ್ನುವ ಮಾನವೀಯತೆಯನ್ನು ಸಾರಿಗೆ ಸಂಸ್ಥೆ ಪ್ರದರ್ಶಿಸಬಾರದೆ.<br /> <br /> ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆ ಇದೇ ಮಾದರಿ ಚಿಲ್ಲರೆ ಸಮಸ್ಯೆಯ ನೆಪ ಹೇಳಿ ಪ್ರಯಾಣ ದರ, ಬಸ್ಪಾಸ್ ದರ, ಏರಿಸಿದರೆ ಪ್ರಯಾಣಿಕರ ಗತಿ! ಬಿಎಂಟಿಸಿಯ ಈ ಅನ್ಯಾಯದ ವಿರುದ್ಧ ಪ್ರಯಾಣಿಕರು ಮೌನವಾಗಿರುವುದು ಎಂತಹ ಚಿಲ್ಲರೆ ವಿಪರ್ಯಾಸ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>