<p><strong>ಬೆಂಗಳೂರು:</strong> ‘ಜಿಎಸ್ಎಸ್ ಅವರ ನಡೆ ಅಥವಾ ನುಡಿಯಲ್ಲಿ ಎಂದಿಗೂ ಕೃತ್ರಿಮತೆ ಇರಲಿಲ್ಲ. ಅವರು ನುಡಿದಂತೆ ನಡೆದವರು’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು.<br /> <br /> ಜಯನಗರದ ವಿಜಯ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ದೀಪಧಾರಿ’ ಡಾ.ಜಿಎಸ್ಎಸ್ ಅವರ ಸಾಹಿತ್ಯವನ್ನು ಕುರಿತ ರಾಜ್ಯಮಟ್ಟದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ‘ಜಿಎಸ್ಎಸ್ ಅವರು ಮಹಾ ಸ್ವಾಭಿಮಾನಿ. ಕುವೆಂಪು ಅವರಂತೆ ವೈಚಾರಿಕ ಮನೋಭಾವದವರು. ಅವರು ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಬೆಂಬಲ ನೀಡಿದವರು. ಅನ್ಯಾಯವನ್ನು ಯುವಕರು ವಿರೋಧಿಸಬೇಕು ಎಂದು ಹೇಳುತ್ತಿದ್ದರು. ಪ್ರತಿಭಟನೆ, ಚಳವಳಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಬೆನ್ನು ತಟ್ಟಿದವರು’ ಎಂದು ನೆನಪಿಸಿಕೊಂಡರು.<br /> <br /> ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹೊನ್ನು ಸಿದ್ದಾರ್ಥ ಮಾತನಾಡಿ, ‘ಜಿಎಸ್ಎಸ್ ಸಾಂಸ್ಕೃತಿಕ, ಸಾಮಾಜಿಕ ಹಾಗೂ ವೈಚಾರಿಕ ಈ ಮೂರು ಗುಣಗಳ ಸಂಗಮವಾಗಿದ್ದವರು. ಅವರು ಪ್ರತಿಭೆಗೆ, ಪ್ರಬುದ್ಧತೆಗೆ ಆದ್ಯತೆ ನೀಡಿದ್ದವರು’ ಎಂದರು.<br /> ‘ಕೆಲವು ಸ್ವಯಂಘೋಷಿತ ವಿಮರ್ಶಕರು ಹಾಗೂ ವಿದ್ವಾಂಸರೆನಿಸಿ ಕೊಂಡವರು ಕನ್ನಡ ಅಧ್ಯಯನ ಕೇಂದ್ರದ ಕುರಿತು ಇಲ್ಲ ಸಲ್ಲದ ಟೀಕೆ ಮಾಡುತ್ತಾರೆ. ಆದರೆ, ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಚಟವಟಿಕೆಗಳನ್ನು ಪರಾಮರ್ಶಿಸಲಿ. ವೃಥಾ ಟೀಕೆ ಮಾಡುವುದು ಸರಿಯಲ್ಲ’ ಎಂದು ಹೇಳಿದರು.<br /> <br /> ವಿಜಯ ಕಾಲೇಜಿನ ಡೀನ್ ಪ್ರೊ.ಆರ್.ವಿ.ಪ್ರಭಾಕರ ಅವರು, ‘ಇಂದಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಿಎಸ್ಎಸ್ ಅವರಿಂದ ಮತ್ತು ಅವರ ಸಾಹಿತ್ಯದಿಂದ ಕಲಿಯಬೇಕು. ಅವರ ಜೀವನಶೈಲಿ, ಪ್ರತಿಭೆ ಎಲ್ಲರಿಗೂ ಮಾದರಿಯಾಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜಿಎಸ್ಎಸ್ ಅವರ ನಡೆ ಅಥವಾ ನುಡಿಯಲ್ಲಿ ಎಂದಿಗೂ ಕೃತ್ರಿಮತೆ ಇರಲಿಲ್ಲ. ಅವರು ನುಡಿದಂತೆ ನಡೆದವರು’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು.<br /> <br /> ಜಯನಗರದ ವಿಜಯ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ದೀಪಧಾರಿ’ ಡಾ.ಜಿಎಸ್ಎಸ್ ಅವರ ಸಾಹಿತ್ಯವನ್ನು ಕುರಿತ ರಾಜ್ಯಮಟ್ಟದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ‘ಜಿಎಸ್ಎಸ್ ಅವರು ಮಹಾ ಸ್ವಾಭಿಮಾನಿ. ಕುವೆಂಪು ಅವರಂತೆ ವೈಚಾರಿಕ ಮನೋಭಾವದವರು. ಅವರು ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಬೆಂಬಲ ನೀಡಿದವರು. ಅನ್ಯಾಯವನ್ನು ಯುವಕರು ವಿರೋಧಿಸಬೇಕು ಎಂದು ಹೇಳುತ್ತಿದ್ದರು. ಪ್ರತಿಭಟನೆ, ಚಳವಳಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಬೆನ್ನು ತಟ್ಟಿದವರು’ ಎಂದು ನೆನಪಿಸಿಕೊಂಡರು.<br /> <br /> ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹೊನ್ನು ಸಿದ್ದಾರ್ಥ ಮಾತನಾಡಿ, ‘ಜಿಎಸ್ಎಸ್ ಸಾಂಸ್ಕೃತಿಕ, ಸಾಮಾಜಿಕ ಹಾಗೂ ವೈಚಾರಿಕ ಈ ಮೂರು ಗುಣಗಳ ಸಂಗಮವಾಗಿದ್ದವರು. ಅವರು ಪ್ರತಿಭೆಗೆ, ಪ್ರಬುದ್ಧತೆಗೆ ಆದ್ಯತೆ ನೀಡಿದ್ದವರು’ ಎಂದರು.<br /> ‘ಕೆಲವು ಸ್ವಯಂಘೋಷಿತ ವಿಮರ್ಶಕರು ಹಾಗೂ ವಿದ್ವಾಂಸರೆನಿಸಿ ಕೊಂಡವರು ಕನ್ನಡ ಅಧ್ಯಯನ ಕೇಂದ್ರದ ಕುರಿತು ಇಲ್ಲ ಸಲ್ಲದ ಟೀಕೆ ಮಾಡುತ್ತಾರೆ. ಆದರೆ, ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಚಟವಟಿಕೆಗಳನ್ನು ಪರಾಮರ್ಶಿಸಲಿ. ವೃಥಾ ಟೀಕೆ ಮಾಡುವುದು ಸರಿಯಲ್ಲ’ ಎಂದು ಹೇಳಿದರು.<br /> <br /> ವಿಜಯ ಕಾಲೇಜಿನ ಡೀನ್ ಪ್ರೊ.ಆರ್.ವಿ.ಪ್ರಭಾಕರ ಅವರು, ‘ಇಂದಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಿಎಸ್ಎಸ್ ಅವರಿಂದ ಮತ್ತು ಅವರ ಸಾಹಿತ್ಯದಿಂದ ಕಲಿಯಬೇಕು. ಅವರ ಜೀವನಶೈಲಿ, ಪ್ರತಿಭೆ ಎಲ್ಲರಿಗೂ ಮಾದರಿಯಾಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>