<p>ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಂತರ್ಜಾಲ ಆಧಾರಿತ ನಕ್ಷೆ ವ್ಯವಸ್ಥೆ ‘ದೃಷ್ಟಿ’ಯನ್ನು ಸುಧಾರಿಸಲು ಮುಂದಾಗಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಮೀಕ್ಷೆ ಆರಂಭಿಸಿದೆ.<br /> <br /> ಗೂಗಲ್ ಅರ್ಥ್ ನೆರವಿನಿಂದ ನಗರದ ಸಂಪೂರ್ಣ ನಕ್ಷೆ, ಜಮೀನಿನ ವಿವರ ತೋರಿಸುವ ವ್ಯವಸ್ಥೆ ಇದಾಗಿದೆ.<br /> ದೃಷ್ಟಿ ವ್ಯವಸ್ಥೆಯ ನಿರಂತರ ಬಳಕೆದಾರರಿಗೆ ಇ– ಮೇಲ್ ಕಳಿಸಿರುವ ನಿರ್ವಾಹಕರು, ಈ ವ್ಯವಸ್ಥೆ ಸುಧಾರಣೆಗೆ ಸಲಹೆಗಳನ್ನು ಕೇಳಿದ್ದಾರೆ. ಸೇವೆ ತೃಪ್ತಿ ತಂದಿದೆಯೇ, ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಸಾಧ್ಯವೆ, ಈ ಬಗ್ಗೆ ಇತರೆ ಸಲಹೆಗಳನ್ನು ನೀಡಿ ಎಂಬ ಕಾಲಂಗಳನ್ನು ಸಲಹಾಪಟ್ಟಿಯಲ್ಲಿ ಕೇಳಲಾಗಿದೆ. ಕೆಲ ತಿಂಗಳ ಹಿಂದೆ ಈ ಸೇವೆ ಸ್ಥಗಿತಗೊಂಡಿತ್ತು.<br /> <br /> ಈ ಸೇವೆಯಿಂದ ಸರ್ಕಾರಿ ಜಮೀನು ಗುರುತಿಸಿ, ಒತ್ತುವರಿ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಸರ್ಕಾರದಲ್ಲಿರುವ ಕೆಲವರು ದೂರಿದ್ದರು. ಹೀಗಾಗಿ ಈ ಸೇವೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.<br /> <br /> ದೃಷ್ಟಿ ವ್ಯವಸ್ಥೆಯನ್ನು ಖಾಸಗಿ ಕಂಪೆನಿನಿರ್ವಹಿಸುತ್ತಿದೆ. ಕಂಪೆನಿಗೆ ಗುತ್ತಿಗೆ ಆಧಾರದಲ್ಲಿ ಈ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ವರ್ಷವೂ ಗುತ್ತಿಗೆ ನವೀಕರಣವಾಗುತ್ತದೆ. ಈ ವರ್ಷ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಂತರ್ಜಾಲ ಆಧಾರಿತ ನಕ್ಷೆ ವ್ಯವಸ್ಥೆ ‘ದೃಷ್ಟಿ’ಯನ್ನು ಸುಧಾರಿಸಲು ಮುಂದಾಗಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಮೀಕ್ಷೆ ಆರಂಭಿಸಿದೆ.<br /> <br /> ಗೂಗಲ್ ಅರ್ಥ್ ನೆರವಿನಿಂದ ನಗರದ ಸಂಪೂರ್ಣ ನಕ್ಷೆ, ಜಮೀನಿನ ವಿವರ ತೋರಿಸುವ ವ್ಯವಸ್ಥೆ ಇದಾಗಿದೆ.<br /> ದೃಷ್ಟಿ ವ್ಯವಸ್ಥೆಯ ನಿರಂತರ ಬಳಕೆದಾರರಿಗೆ ಇ– ಮೇಲ್ ಕಳಿಸಿರುವ ನಿರ್ವಾಹಕರು, ಈ ವ್ಯವಸ್ಥೆ ಸುಧಾರಣೆಗೆ ಸಲಹೆಗಳನ್ನು ಕೇಳಿದ್ದಾರೆ. ಸೇವೆ ತೃಪ್ತಿ ತಂದಿದೆಯೇ, ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಸಾಧ್ಯವೆ, ಈ ಬಗ್ಗೆ ಇತರೆ ಸಲಹೆಗಳನ್ನು ನೀಡಿ ಎಂಬ ಕಾಲಂಗಳನ್ನು ಸಲಹಾಪಟ್ಟಿಯಲ್ಲಿ ಕೇಳಲಾಗಿದೆ. ಕೆಲ ತಿಂಗಳ ಹಿಂದೆ ಈ ಸೇವೆ ಸ್ಥಗಿತಗೊಂಡಿತ್ತು.<br /> <br /> ಈ ಸೇವೆಯಿಂದ ಸರ್ಕಾರಿ ಜಮೀನು ಗುರುತಿಸಿ, ಒತ್ತುವರಿ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಸರ್ಕಾರದಲ್ಲಿರುವ ಕೆಲವರು ದೂರಿದ್ದರು. ಹೀಗಾಗಿ ಈ ಸೇವೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.<br /> <br /> ದೃಷ್ಟಿ ವ್ಯವಸ್ಥೆಯನ್ನು ಖಾಸಗಿ ಕಂಪೆನಿನಿರ್ವಹಿಸುತ್ತಿದೆ. ಕಂಪೆನಿಗೆ ಗುತ್ತಿಗೆ ಆಧಾರದಲ್ಲಿ ಈ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ವರ್ಷವೂ ಗುತ್ತಿಗೆ ನವೀಕರಣವಾಗುತ್ತದೆ. ಈ ವರ್ಷ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>