<p><strong>ಶಿರಾ: </strong>ವಿಧಾನಸೌದದಲ್ಲಿ ಬಟ್ಟೆ ಹರಿದುಕೊಂಡರು ಎಂದೇ ಬಿಂಬಿಸಲಾಗುತ್ತಿದೆ. ಆದರೆ ಅದರ ಹಿಂದಿನ ಸತ್ಯವೇ ಬೇರೆ. ನನ್ನ ಬಟ್ಟೆ ಹರಿದವರು ಮಾರ್ಷಲ್ಗಳು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ತಿಳಿಸಿದರು.</p>.<p>ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗಾದ ಅನ್ಯಾಯ ಪ್ರತಿಭಟಿಸಿ ವಿಧಾನಸಭೆಯಲ್ಲಿ ಬೆಂಚ್ ಮೇಲೆ ನಿಂತಿದ್ದೇ ತಪ್ಪಾಯಿತು ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ನಾನು ಮೂಲತಃ ದೇವೇಗೌಡರ ಗರಡಿಯಲ್ಲೇ ಪಳಗಿದವ ಎಂದ ಅವರು, ಐದು ವರ್ಷಕ್ಕೆ ಐದು ಪ್ರಶ್ನೆ ಕೇಳಿದ್ದೇ ಸಂಸದ ಜನಾರ್ದನಸ್ವಾಮಿ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.<br /> <br /> <strong>ಮೇಲ್ ಮಾಡಿ... ಸ್ವಾಮಿ!<br /> ಶಿರಾ</strong>: ಸಮಸ್ಯೆ ಹೊತ್ತು ಸಂಸದ ಜನಾರ್ದನ ಸ್ವಾಮಿ ಬಳಿ ತೆರಳಿದರೆ ಮೇಲ್ ಮಾಡಿ ಚೆಕ್ ಮಾಡುವೆ ಎನ್ನುತ್ತಿದ್ದರು.<br /> ಈಗ ಮತದಾರರು ನಿಮ್ಮ ಸಾಧನೆ ಮೇಲ್ ಮಾಡಿ. ಚೆಕ್ ಮಾಡಿ ಮತ ಹಾಕುತ್ತೇವೆ ಎಂದು ಹೇಳಿ... ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿ ಗೋವಿಂದರಾಜು ಮತದಾರರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ: </strong>ವಿಧಾನಸೌದದಲ್ಲಿ ಬಟ್ಟೆ ಹರಿದುಕೊಂಡರು ಎಂದೇ ಬಿಂಬಿಸಲಾಗುತ್ತಿದೆ. ಆದರೆ ಅದರ ಹಿಂದಿನ ಸತ್ಯವೇ ಬೇರೆ. ನನ್ನ ಬಟ್ಟೆ ಹರಿದವರು ಮಾರ್ಷಲ್ಗಳು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ತಿಳಿಸಿದರು.</p>.<p>ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗಾದ ಅನ್ಯಾಯ ಪ್ರತಿಭಟಿಸಿ ವಿಧಾನಸಭೆಯಲ್ಲಿ ಬೆಂಚ್ ಮೇಲೆ ನಿಂತಿದ್ದೇ ತಪ್ಪಾಯಿತು ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ನಾನು ಮೂಲತಃ ದೇವೇಗೌಡರ ಗರಡಿಯಲ್ಲೇ ಪಳಗಿದವ ಎಂದ ಅವರು, ಐದು ವರ್ಷಕ್ಕೆ ಐದು ಪ್ರಶ್ನೆ ಕೇಳಿದ್ದೇ ಸಂಸದ ಜನಾರ್ದನಸ್ವಾಮಿ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.<br /> <br /> <strong>ಮೇಲ್ ಮಾಡಿ... ಸ್ವಾಮಿ!<br /> ಶಿರಾ</strong>: ಸಮಸ್ಯೆ ಹೊತ್ತು ಸಂಸದ ಜನಾರ್ದನ ಸ್ವಾಮಿ ಬಳಿ ತೆರಳಿದರೆ ಮೇಲ್ ಮಾಡಿ ಚೆಕ್ ಮಾಡುವೆ ಎನ್ನುತ್ತಿದ್ದರು.<br /> ಈಗ ಮತದಾರರು ನಿಮ್ಮ ಸಾಧನೆ ಮೇಲ್ ಮಾಡಿ. ಚೆಕ್ ಮಾಡಿ ಮತ ಹಾಕುತ್ತೇವೆ ಎಂದು ಹೇಳಿ... ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿ ಗೋವಿಂದರಾಜು ಮತದಾರರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>