<p><strong>ಹುಕ್ಕೇರಿ:</strong> ‘ಸದ್ಭಾವನೆ, ಸನ್ಮಾರ್ಗ, ಸರಳ ತೆಯ ಭಕ್ತಿಮಾರ್ಗದಲ್ಲಿ ನಡೆದರೆ ದೈವತ್ವ ಪ್ರಾಪ್ತವಾಗುತ್ತದೆ’ ಎಂದು ಸಾವಳಗಿ ಸಿದ್ದ ಸಂಸ್ಥಾನ ಪೀಠದ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಹೇಳಿದರು.<br /> <br /> ತಾಲ್ಲೂಕಿನ ಬಡಕುಂದ್ರಿಯಲ್ಲಿ ಈಚೆಗೆ ನಡೆದ ರಾಮಾರೂಢ ಮಹಾಂತ ಯಲ್ಲಾರೂಢ ಸ್ವಾಮಿ 'ಚೈತನ್ಯ' ಆಶ್ರಮದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.<br /> <br /> ಭಾರತೀಯರು ಧರ್ಮ, ನೀತಿ, ಸಂಸ್ಕೃತಿ, ನಂಬಿಕೆಯ ತಳಹದಿಯ ಮೇಲೆ ಬದುಕಿದವರು. ಸಮಾಜದ ಏಳಿಗೆಗೆ ಮನುಷ್ಯನ ನಿಸ್ವಾರ್ಥ ಸೇವೆ ಪರಮ ಶ್ರೇಷ್ಠವಾದದ್ದು ಎಂದ ಅವರು ಪರರ ಸಂಪತ್ತು, ಯಶಸ್ಸು ಕಂಡು ಅಸೂಯೆ ಪಡದೆ, ವಿಶಾಲ ಮನೋಭಾವನೆಯಿಂದ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.<br /> <br /> ಭಕ್ತರ ಕಲ್ಯಾಣಕ್ಕಾಗಿ ಚೈತನ್ಯ ಆಶ್ರಮದ ಪೀಠಾಧಿಪತಿ ಯಲ್ಲಾರೂಢ ಸ್ವಾಮೀಜಿ ನಿರ್ಮಿಸುತ್ತಿರುವ ನೂತನ ಆಶ್ರಮ ಸರ್ವಸ್ವವನ್ನು ಸಾಧಿಸಲಿ ಎಂದು ಶುಭ ಕೋರಿದರು.<br /> <br /> ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆಯ ಸಿಮಿಕೆೇರಿಯ ಪರಮ ರಾಮಾರೂಢ ಸ್ವಾಮೀಜಿ ಮಾತನಾಡಿ, ಮಾನವ ಇಂದಿನ ಒತ್ತಡದ ಜೀವನದಲ್ಲಿ ಸೂಕ್ಷ್ಮ ಶರೀರದಲ್ಲಿನ ರೋಗ, ಅಶಾಂತಿ ನಿವಾರ ಣೆಗೆ ಮಠ-, ಮಂದಿರ, ಆಶ್ರಮಗಳ ಅವಶ್ಯಕತೆ ಇದೆ ಎಂದರು. ನೂತನ ಆಶ್ರಮ ದೊಡ್ಡ ಶಾಂತಿ ನೀಡುವ ಧಾಮ ವಾಗಲಿ ಎಂದು ಶುಭ ಹಾರೈಸಿದರು.<br /> <br /> ರಾಮಾರೂಢ ಮಹಾಂತ ಯಲ್ಲಾರೂಢ ಸ್ವಾಮಿ ಚೈತನ್ಯ ಆಶ್ರಮದ ಪೀಠಾಧಿಪತಿ ಯಲ್ಲಾರೂಢ ಸ್ವಾಮೀಜಿ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ರವಿ ಕೊಟಾರಗಸ್ತಿ, ಎನ್. ಎನ್.ಹಲಗತ್ತಿ, ಅವಿನಾಶ ಧಾಮಣೆಕರ, ಎಚ್.ಎಲ್.ಪೂಜೇರಿ, ಮುಜರಾಯಿ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.<br /> <br /> ಶಿವನಗೌಡ ಪಾಟೀಲ ಸ್ವಾಗತಿಸಿದರು. ಎಚ್.ಎಲ್.ಪೂಜೇರಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ:</strong> ‘ಸದ್ಭಾವನೆ, ಸನ್ಮಾರ್ಗ, ಸರಳ ತೆಯ ಭಕ್ತಿಮಾರ್ಗದಲ್ಲಿ ನಡೆದರೆ ದೈವತ್ವ ಪ್ರಾಪ್ತವಾಗುತ್ತದೆ’ ಎಂದು ಸಾವಳಗಿ ಸಿದ್ದ ಸಂಸ್ಥಾನ ಪೀಠದ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಹೇಳಿದರು.<br /> <br /> ತಾಲ್ಲೂಕಿನ ಬಡಕುಂದ್ರಿಯಲ್ಲಿ ಈಚೆಗೆ ನಡೆದ ರಾಮಾರೂಢ ಮಹಾಂತ ಯಲ್ಲಾರೂಢ ಸ್ವಾಮಿ 'ಚೈತನ್ಯ' ಆಶ್ರಮದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.<br /> <br /> ಭಾರತೀಯರು ಧರ್ಮ, ನೀತಿ, ಸಂಸ್ಕೃತಿ, ನಂಬಿಕೆಯ ತಳಹದಿಯ ಮೇಲೆ ಬದುಕಿದವರು. ಸಮಾಜದ ಏಳಿಗೆಗೆ ಮನುಷ್ಯನ ನಿಸ್ವಾರ್ಥ ಸೇವೆ ಪರಮ ಶ್ರೇಷ್ಠವಾದದ್ದು ಎಂದ ಅವರು ಪರರ ಸಂಪತ್ತು, ಯಶಸ್ಸು ಕಂಡು ಅಸೂಯೆ ಪಡದೆ, ವಿಶಾಲ ಮನೋಭಾವನೆಯಿಂದ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.<br /> <br /> ಭಕ್ತರ ಕಲ್ಯಾಣಕ್ಕಾಗಿ ಚೈತನ್ಯ ಆಶ್ರಮದ ಪೀಠಾಧಿಪತಿ ಯಲ್ಲಾರೂಢ ಸ್ವಾಮೀಜಿ ನಿರ್ಮಿಸುತ್ತಿರುವ ನೂತನ ಆಶ್ರಮ ಸರ್ವಸ್ವವನ್ನು ಸಾಧಿಸಲಿ ಎಂದು ಶುಭ ಕೋರಿದರು.<br /> <br /> ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆಯ ಸಿಮಿಕೆೇರಿಯ ಪರಮ ರಾಮಾರೂಢ ಸ್ವಾಮೀಜಿ ಮಾತನಾಡಿ, ಮಾನವ ಇಂದಿನ ಒತ್ತಡದ ಜೀವನದಲ್ಲಿ ಸೂಕ್ಷ್ಮ ಶರೀರದಲ್ಲಿನ ರೋಗ, ಅಶಾಂತಿ ನಿವಾರ ಣೆಗೆ ಮಠ-, ಮಂದಿರ, ಆಶ್ರಮಗಳ ಅವಶ್ಯಕತೆ ಇದೆ ಎಂದರು. ನೂತನ ಆಶ್ರಮ ದೊಡ್ಡ ಶಾಂತಿ ನೀಡುವ ಧಾಮ ವಾಗಲಿ ಎಂದು ಶುಭ ಹಾರೈಸಿದರು.<br /> <br /> ರಾಮಾರೂಢ ಮಹಾಂತ ಯಲ್ಲಾರೂಢ ಸ್ವಾಮಿ ಚೈತನ್ಯ ಆಶ್ರಮದ ಪೀಠಾಧಿಪತಿ ಯಲ್ಲಾರೂಢ ಸ್ವಾಮೀಜಿ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ರವಿ ಕೊಟಾರಗಸ್ತಿ, ಎನ್. ಎನ್.ಹಲಗತ್ತಿ, ಅವಿನಾಶ ಧಾಮಣೆಕರ, ಎಚ್.ಎಲ್.ಪೂಜೇರಿ, ಮುಜರಾಯಿ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.<br /> <br /> ಶಿವನಗೌಡ ಪಾಟೀಲ ಸ್ವಾಗತಿಸಿದರು. ಎಚ್.ಎಲ್.ಪೂಜೇರಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>