<p><strong>ಹಾವೇರಿ: </strong>ಯುವಕರು ಮದ್ಯ, ಬಿಡಿ, ಸಿಗರೇಟ್ ಸೇರಿದಂತೆ ಇತ್ಯಾದಿ ಮಾದಕ ವಸ್ತುಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಕಳೆದುಕೊಳ್ಳದೇ, ಸದೃಢ ದೇಹ ಹಾಗೂ ಮನಸ್ಸು ಹೊಂದಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿ.ಪಂ. ಸದಸ್ಯೆ ವಿರೇಶ್ವರಿ ಸುಳ್ಳಳ್ಳಿ ಹೇಳಿದರು.<br /> <br /> ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಅನ್ನಪೂರ್ಣ ಆಸ್ಪತ್ರೆಯ ಮಾದಕ ವಸ್ತುಗಳ ಪುನರ್ ವಸತಿ ಕೇಂದ್ರ ಮತ್ತು ಕರ್ಜಗಿ ಗ್ರಾಮ ಪಂಚಾಯಿತಿ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.<br /> <br /> ಸುಂದರವಾದ ಬದುಕು ಕಟ್ಟಿಕೊಳ್ಳಬೇಕಾದ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದಾಗ ಪಾಲಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ತಿದ್ದಿ ಬುದ್ದಿ ಹೇಳಿ ಸರಿಯಾದ ದಾರಿಯಲ್ಲಿ ನಡೆಸುವ ಕೆಲಸ ಮಾಡಬೇಕು ಎಂದು ಹೇಳಿದರು.<br /> ತಾ.ಪಂ.ಸದಸ್ಯೆ ಬಸವಣ್ಣೆವ್ವ ಹಿರೇಮಠ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿರಬೇಕು. ದುಶ್ಚಟಕ್ಕೆ ಅಂಟಿಕೊಂಡವರು ಮಾದಕ ವಸ್ತು ಸೇವನೆಗಳ ಪುನರ್ ವಸತಿ ಕೇಂದ್ರದ ಅಧಿಕಾರಿಗಳ ಸಲಹೆ, ಸೂಚನೆಯಂತೆ ನಡೆದ ಮಾದಕ ವಸ್ತುಗಳನ್ನು ಸೇವಿಸುವುದು ಬಿಡಬೇಕು ಎಂದರು.<br /> <br /> ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೇವಲ ಒಂದು ಹಳ್ಳಿಗೆ ಸೀಮಿತಗೊಳ್ಳದೇ, ರಾಜ್ಯದ ಎಲ್ಲ ಹಳ್ಳಿಗಳ್ಳಲಿಯೂ ನಡೆದಾಗ ಮಾತ್ರ ಕರ್ನಾಟಕ ಮಾದಕ ವಸ್ತು ಮುಕ್ತ ರಾಜ್ಯವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.<br /> <br /> ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರ ವಿದ್ಯಾಲಯದ ಲೀಲಾಜಿ ಅಕ್ಕ, ಹನುಮಂತಪ್ಪ ಹಾಗೂ ಕರ್ಜಗಿ ಪ್ರೌಢ ಶಾಲೆ ಉಪನ್ಯಾಸಕ ಮಾತನಾಡಿದರು.<br /> <br /> ಜಾಗೃತಿ ಜಾಥಾದಲ್ಲಿ ಅನ್ನಪೂರ್ಣ ಆಸ್ಪತ್ರೆಯ ವ್ಯವಸ್ಥಾಪಕ ಸಿ.ಎಂ. ಕೊಟ್ರೇಶ, ಶಿಲ್ಪಾ ಪಾರಮ್ಮನವರ, ಶಿವಗಂಗಾ ಪೂಜಾರ, ಗ್ರಾಮದ ಅನೇಕ ಗಣ್ಯರು , ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ರಮೇಶ ಸ್ವಾಗತಿಸಿದರು. ಪುಟ್ಟಪ್ಪ ನಿರೂಪಿಸಿದರು. ಅಂಜನಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ಯುವಕರು ಮದ್ಯ, ಬಿಡಿ, ಸಿಗರೇಟ್ ಸೇರಿದಂತೆ ಇತ್ಯಾದಿ ಮಾದಕ ವಸ್ತುಗಳಿಗೆ ಬಲಿಯಾಗಿ ಅಮೂಲ್ಯ ಜೀವನ ಕಳೆದುಕೊಳ್ಳದೇ, ಸದೃಢ ದೇಹ ಹಾಗೂ ಮನಸ್ಸು ಹೊಂದಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿ.ಪಂ. ಸದಸ್ಯೆ ವಿರೇಶ್ವರಿ ಸುಳ್ಳಳ್ಳಿ ಹೇಳಿದರು.<br /> <br /> ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಅನ್ನಪೂರ್ಣ ಆಸ್ಪತ್ರೆಯ ಮಾದಕ ವಸ್ತುಗಳ ಪುನರ್ ವಸತಿ ಕೇಂದ್ರ ಮತ್ತು ಕರ್ಜಗಿ ಗ್ರಾಮ ಪಂಚಾಯಿತಿ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.<br /> <br /> ಸುಂದರವಾದ ಬದುಕು ಕಟ್ಟಿಕೊಳ್ಳಬೇಕಾದ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದಾಗ ಪಾಲಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ತಿದ್ದಿ ಬುದ್ದಿ ಹೇಳಿ ಸರಿಯಾದ ದಾರಿಯಲ್ಲಿ ನಡೆಸುವ ಕೆಲಸ ಮಾಡಬೇಕು ಎಂದು ಹೇಳಿದರು.<br /> ತಾ.ಪಂ.ಸದಸ್ಯೆ ಬಸವಣ್ಣೆವ್ವ ಹಿರೇಮಠ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿರಬೇಕು. ದುಶ್ಚಟಕ್ಕೆ ಅಂಟಿಕೊಂಡವರು ಮಾದಕ ವಸ್ತು ಸೇವನೆಗಳ ಪುನರ್ ವಸತಿ ಕೇಂದ್ರದ ಅಧಿಕಾರಿಗಳ ಸಲಹೆ, ಸೂಚನೆಯಂತೆ ನಡೆದ ಮಾದಕ ವಸ್ತುಗಳನ್ನು ಸೇವಿಸುವುದು ಬಿಡಬೇಕು ಎಂದರು.<br /> <br /> ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೇವಲ ಒಂದು ಹಳ್ಳಿಗೆ ಸೀಮಿತಗೊಳ್ಳದೇ, ರಾಜ್ಯದ ಎಲ್ಲ ಹಳ್ಳಿಗಳ್ಳಲಿಯೂ ನಡೆದಾಗ ಮಾತ್ರ ಕರ್ನಾಟಕ ಮಾದಕ ವಸ್ತು ಮುಕ್ತ ರಾಜ್ಯವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.<br /> <br /> ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರ ವಿದ್ಯಾಲಯದ ಲೀಲಾಜಿ ಅಕ್ಕ, ಹನುಮಂತಪ್ಪ ಹಾಗೂ ಕರ್ಜಗಿ ಪ್ರೌಢ ಶಾಲೆ ಉಪನ್ಯಾಸಕ ಮಾತನಾಡಿದರು.<br /> <br /> ಜಾಗೃತಿ ಜಾಥಾದಲ್ಲಿ ಅನ್ನಪೂರ್ಣ ಆಸ್ಪತ್ರೆಯ ವ್ಯವಸ್ಥಾಪಕ ಸಿ.ಎಂ. ಕೊಟ್ರೇಶ, ಶಿಲ್ಪಾ ಪಾರಮ್ಮನವರ, ಶಿವಗಂಗಾ ಪೂಜಾರ, ಗ್ರಾಮದ ಅನೇಕ ಗಣ್ಯರು , ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ರಮೇಶ ಸ್ವಾಗತಿಸಿದರು. ಪುಟ್ಟಪ್ಪ ನಿರೂಪಿಸಿದರು. ಅಂಜನಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>