<p><strong>ಬೆಂಗಳೂರು:</strong> ‘ಮಾನಸಿಕವಾಗಿ ಗಟ್ಟಿತನ ಇದ್ದರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಬಿ.ಕೆ.ಸುಮಿತ್ರ ಅವರು ಅಂತಹ ಸಾಧನೆ ಮಾಡಿದ್ದಾರೆ’ ಎಂದು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶ್ಲಾಘಿಸಿದರು.<br /> <br /> ಸುಂದರ ಪ್ರಕಾಶನವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೌರಿ ಸುಂದರ್ ಸಂಪಾದಿಸಿರುವ ಗಾಯಕಿ ಬಿ.ಕೆ.ಸುಮಿತ್ರ ಅವರ ಸಂಗೀತ ಪಯಣದ ಕುರಿತ ‘ಗಾನ ಯಾನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ‘ಗಾಯನ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿರುವ ಅವರು ಅಭಿನಂದನೆಗೆ ಅರ್ಹರು. ಅವರ ಜೊತೆಗೆ ‘ಮದುವೆ ಮದುವೆ ಮದುವೆ’ ಎಂಬ ಚಲನಚಿತ್ರದಲ್ಲಿ ಹಾಡಿದ್ದೇನೆ. ಅವರೊಬ್ಬ ಸಂಗೀತದ ಅನನ್ಯ ಸಾಧಕಿ’ ಎಂದರು.<br /> ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾಜೋಯಿಸ್ ಮಾತನಾಡಿ, ‘ಸಂಗೀತ ಕಲಿಸಿದ ಆರಂಭಿಕ ಗುರುಗಳಾದ ಎಂ.ಪ್ರಭಾಕರ್, ಮಂಜಪ್ಪ, ತನ್ನ ಜೊತೆಗೆ ಹಾಡಿದ, ಸಹಕಾರ ನೀಡಿದ ಎಲ್ಲರನ್ನು ಸುಮಿತ್ರಾ ಅವರು ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.<br /> <br /> ಇದು ಅವರ ಸರಳತೆ, ದೊಡ್ಡತನಕ್ಕೆ ಸಾಕ್ಷಿ’ ಎಂದರು.<br /> <br /> ಕೃತಿ: ‘ಗಾನಯಾನ’<br /> ಸಂಪಾದನೆ: ಗೌರಿ ಸುಂದರ್<br /> ಬೆಲೆ: ರೂ 260</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಾನಸಿಕವಾಗಿ ಗಟ್ಟಿತನ ಇದ್ದರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಬಿ.ಕೆ.ಸುಮಿತ್ರ ಅವರು ಅಂತಹ ಸಾಧನೆ ಮಾಡಿದ್ದಾರೆ’ ಎಂದು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶ್ಲಾಘಿಸಿದರು.<br /> <br /> ಸುಂದರ ಪ್ರಕಾಶನವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೌರಿ ಸುಂದರ್ ಸಂಪಾದಿಸಿರುವ ಗಾಯಕಿ ಬಿ.ಕೆ.ಸುಮಿತ್ರ ಅವರ ಸಂಗೀತ ಪಯಣದ ಕುರಿತ ‘ಗಾನ ಯಾನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ‘ಗಾಯನ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿರುವ ಅವರು ಅಭಿನಂದನೆಗೆ ಅರ್ಹರು. ಅವರ ಜೊತೆಗೆ ‘ಮದುವೆ ಮದುವೆ ಮದುವೆ’ ಎಂಬ ಚಲನಚಿತ್ರದಲ್ಲಿ ಹಾಡಿದ್ದೇನೆ. ಅವರೊಬ್ಬ ಸಂಗೀತದ ಅನನ್ಯ ಸಾಧಕಿ’ ಎಂದರು.<br /> ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾಜೋಯಿಸ್ ಮಾತನಾಡಿ, ‘ಸಂಗೀತ ಕಲಿಸಿದ ಆರಂಭಿಕ ಗುರುಗಳಾದ ಎಂ.ಪ್ರಭಾಕರ್, ಮಂಜಪ್ಪ, ತನ್ನ ಜೊತೆಗೆ ಹಾಡಿದ, ಸಹಕಾರ ನೀಡಿದ ಎಲ್ಲರನ್ನು ಸುಮಿತ್ರಾ ಅವರು ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.<br /> <br /> ಇದು ಅವರ ಸರಳತೆ, ದೊಡ್ಡತನಕ್ಕೆ ಸಾಕ್ಷಿ’ ಎಂದರು.<br /> <br /> ಕೃತಿ: ‘ಗಾನಯಾನ’<br /> ಸಂಪಾದನೆ: ಗೌರಿ ಸುಂದರ್<br /> ಬೆಲೆ: ರೂ 260</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>