<p><strong>ಬೆಂಗಳೂರು:</strong> ‘ಭಾರತದ ಪ್ರಗತಿಯನ್ನು ನಿರ್ಧರಿಸುವ ಉತ್ತರದಾಯಿತ್ವ ಯುವ ಮತದಾರರ ಮೇಲಿದೆ. ಜಾಗೃತ, ಸಕ್ರಿಯ, ಮಾಹಿತಿಯುಳ್ಳ ಮತ್ತು ಯೋಗ್ಯ ನಿರ್ಣಯ ತೆಗೆದುಕೊಳ್ಳಬಲ್ಲ ಯುವಶಕ್ತಿಯೇ ಭಾರತಕ್ಕೆ ಬದಲಾವಣೆ ತರಬಲ್ಲವರು’ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.<br /> <br /> ನಗರದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಶಕ್ತಿಯ ಪಾತ್ರ ಮತ್ತು ಮಹತ್ವದ ಕುರಿತು ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.<br /> <br /> ‘ಕಲುಷಿತಗೊಳ್ಳದ ಯುವ ಸಮುದಾಯದ ಮನಸ್ಸುಗಳು ಯೋಗ್ಯ ನಿರ್ಧಾರ ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ. ಭ್ರಷ್ಟಾಚಾರ, ಹಗರಣಗಳ ವಿರುದ್ದ ಸೆಣಸಲು ಯುವಸಮುದಾಯ ಟೊಂಕ ಕಟ್ಟಿ ನಿಲ್ಲಬೇಕು. ಯುವಸಮುದಾಯದಿಂದಲೇ ದೇಶದ ನಿಜವಾದ ಬದಲಾವಣೆ ಸಾಧ್ಯ. ಆದ್ದರಿಂದ, ಯುವ ಸಮುದಾಯ ಯೋಚಿಸಿ, ವಿಶ್ಲೇಷಿಸಿ, ನಿರ್ಧಾರ ತೆಗೆದುಕೊಳ್ಳಬೇಕು. ಅದು ಖಂಡಿತ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.<br /> <br /> ‘ಪ್ರಾದೇಶಿಕ ಆಕಾಂಕ್ಷೆಗಳನ್ನು ನಿಭಾಯಿಸಿಕೊಂಡು ರಾಷ್ಟ್ರೀಯ ಆಲೋಚನೆಗಳನ್ನು ಜಾರಿಗೆ ತರಬಲ್ಲ ಮುನ್ನೋಟವಿರುವ ನಾಯಕನನ್ನು ಆರಿಸಬೇಕಾಗಿದೆ. ಅಭ್ಯರ್ಥಿಗಳಿಗೆ ನಿಮ್ಮ ಅಗತ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಂತರ ನಿರ್ಣಯಿಸಿ. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ತಾಣಗಳಿಂದ ಎಲ್ಲ ನಾಯಕರು ಎಟಕುತ್ತಾರೆ. ನಿಮ್ಮ ನಿರ್ಣಯ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ’ ಎಂದು ಕಿವಿ ಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಭಾರತದ ಪ್ರಗತಿಯನ್ನು ನಿರ್ಧರಿಸುವ ಉತ್ತರದಾಯಿತ್ವ ಯುವ ಮತದಾರರ ಮೇಲಿದೆ. ಜಾಗೃತ, ಸಕ್ರಿಯ, ಮಾಹಿತಿಯುಳ್ಳ ಮತ್ತು ಯೋಗ್ಯ ನಿರ್ಣಯ ತೆಗೆದುಕೊಳ್ಳಬಲ್ಲ ಯುವಶಕ್ತಿಯೇ ಭಾರತಕ್ಕೆ ಬದಲಾವಣೆ ತರಬಲ್ಲವರು’ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.<br /> <br /> ನಗರದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಶಕ್ತಿಯ ಪಾತ್ರ ಮತ್ತು ಮಹತ್ವದ ಕುರಿತು ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.<br /> <br /> ‘ಕಲುಷಿತಗೊಳ್ಳದ ಯುವ ಸಮುದಾಯದ ಮನಸ್ಸುಗಳು ಯೋಗ್ಯ ನಿರ್ಧಾರ ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ. ಭ್ರಷ್ಟಾಚಾರ, ಹಗರಣಗಳ ವಿರುದ್ದ ಸೆಣಸಲು ಯುವಸಮುದಾಯ ಟೊಂಕ ಕಟ್ಟಿ ನಿಲ್ಲಬೇಕು. ಯುವಸಮುದಾಯದಿಂದಲೇ ದೇಶದ ನಿಜವಾದ ಬದಲಾವಣೆ ಸಾಧ್ಯ. ಆದ್ದರಿಂದ, ಯುವ ಸಮುದಾಯ ಯೋಚಿಸಿ, ವಿಶ್ಲೇಷಿಸಿ, ನಿರ್ಧಾರ ತೆಗೆದುಕೊಳ್ಳಬೇಕು. ಅದು ಖಂಡಿತ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.<br /> <br /> ‘ಪ್ರಾದೇಶಿಕ ಆಕಾಂಕ್ಷೆಗಳನ್ನು ನಿಭಾಯಿಸಿಕೊಂಡು ರಾಷ್ಟ್ರೀಯ ಆಲೋಚನೆಗಳನ್ನು ಜಾರಿಗೆ ತರಬಲ್ಲ ಮುನ್ನೋಟವಿರುವ ನಾಯಕನನ್ನು ಆರಿಸಬೇಕಾಗಿದೆ. ಅಭ್ಯರ್ಥಿಗಳಿಗೆ ನಿಮ್ಮ ಅಗತ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಂತರ ನಿರ್ಣಯಿಸಿ. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ತಾಣಗಳಿಂದ ಎಲ್ಲ ನಾಯಕರು ಎಟಕುತ್ತಾರೆ. ನಿಮ್ಮ ನಿರ್ಣಯ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ’ ಎಂದು ಕಿವಿ ಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>