<p>ಚಿಕ್ಕಮಗಳೂರು: ವಂಶವಾಹಿನಿಯಾಗಿ ಬರುವ ಅನೇಕ ರೋಗಗಳನ್ನು ಯೋಗದಿಂದ ನಿಯಂತ್ರಿಸಬಹುದು ಎಂದು ಬಾಗಲಕೋಟೆ ಕೃಷ್ಣಾಶ್ರಮದ ಯೋಗಗುರು ಬಸವರಾಜ ಹಡಗಲಿ ತಿಳಿಸಿದರು.<br /> <br /> ನಗರದ ಯುರೇಕಾ ಅಕಾಡೆಮಿಯಲ್ಲಿ ಉದ್ಭವ ಪ್ರಕಾಶನ ಮತ್ತು ಯುರೇಕಾ ಅಕಾಡೆಮಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯೋಗ ಮತ್ತು ಆರೋಗ್ಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಹಲವರು ಆಸನಗಳನ್ನೆ ಯೋಗ ಎಂದು ತಪ್ಪಾಗಿ ಭಾವಿಸಿದ್ದಾರೆ. ಆಸನ, ಪ್ರಾಣಾಯಾಮ, ಧ್ಯಾನ ಇವುಗಳ ಯೋಗಾಸನದ ಅಂಗಗಳು. ಯೋಗ ಎಂಬುದು ಆಂತರಿಕ ಅನುಭೂತಿ, ಸ್ವಅನುಭವದಿಂದ ಪಡೆಯುವ ಸಿದ್ಧಿ ಎಂದು ಹೇಳಿದರು.<br /> <br /> ಇಂದಿನ ಯಾಂತ್ರಿಕ ಬದುಕು ಮನುಷ್ಯನನ್ನು ಆವರಿಸಿದೆ. ಹಣ ಗಳಿಸುವ ಕಾತರ ಹೆಚ್ಚಿದೆ. ಲೌಕಿಕ ಸಂಪತ್ತನ್ನೆ ಸುಖ ಎಂದು ಜನರು ಭ್ರಮಿಸಿದ್ದಾರೆ ಎಂದರು.<br /> <br /> ಸಾವಧಾನವಾಗಿ ಬದುಕನ್ನು ಸಿಂಹಾವಲೋಕನ ಮಾಡಿದಾಗ ಮಾತ್ರ ನಾವು ಎಷ್ಟು ಸಮಯ ವ್ಯರ್ಥವಾಗಿ ಕಳೆದಿದ್ದೇವೆ ಎಂಬುದು ಅರಿವಾಗುತ್ತದೆ. ಆಸನಗಳು ದೇಹದ ತೂಕ ಕಡಿಮೆ ಮಾಡುವುದರೊಂದಿಗೆ ಆರೋಗ್ಯಮಯ ಸಂದೇಶ ಉಂಟು ಮಾಡುತ್ತವೆ ಎಂದರು.<br /> <br /> ಆಂತರಿಕ ಜ್ಞಾನಸಿದ್ಧಿಯೇ ಯೋಗ. ಮನಸ್ಸನ್ನು ನಿಯಂತ್ರಿಸುವ ಅಂತರಂಗದ ಘನತ ಅರಿಯುವ ಸಿದ್ಧಿಗೆ ನಿರಂತರ ಸಾಧನೆ ಮುಖ್ಯ ಎಂದರು.<br /> <br /> ಉದ್ಭವ ಪ್ರಕಾಶನದ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಆರೋಗ್ಯವೆ ಮಾನವನ ದೊಡ್ಡ ಆಸ್ತಿ. ಅದು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.<br /> <br /> ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಉದ್ಘಾಟಿಸಿದರು. ದಾನಿ ಗೌರಮ್ಮಬಸವೇಗೌಡ, ಕೆ.ಮೋಹನ್, ಡಾ.ಸಿ.ಕೆ.ಸುಬ್ಬರಾಯ, ಲೇಖಕರಾದ ಬೆಳವಾಡಿ ಮಂಜುನಾಥ, ರಮೇಶ್ ಬೊಂಗಾಳೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ವಂಶವಾಹಿನಿಯಾಗಿ ಬರುವ ಅನೇಕ ರೋಗಗಳನ್ನು ಯೋಗದಿಂದ ನಿಯಂತ್ರಿಸಬಹುದು ಎಂದು ಬಾಗಲಕೋಟೆ ಕೃಷ್ಣಾಶ್ರಮದ ಯೋಗಗುರು ಬಸವರಾಜ ಹಡಗಲಿ ತಿಳಿಸಿದರು.<br /> <br /> ನಗರದ ಯುರೇಕಾ ಅಕಾಡೆಮಿಯಲ್ಲಿ ಉದ್ಭವ ಪ್ರಕಾಶನ ಮತ್ತು ಯುರೇಕಾ ಅಕಾಡೆಮಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯೋಗ ಮತ್ತು ಆರೋಗ್ಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ಹಲವರು ಆಸನಗಳನ್ನೆ ಯೋಗ ಎಂದು ತಪ್ಪಾಗಿ ಭಾವಿಸಿದ್ದಾರೆ. ಆಸನ, ಪ್ರಾಣಾಯಾಮ, ಧ್ಯಾನ ಇವುಗಳ ಯೋಗಾಸನದ ಅಂಗಗಳು. ಯೋಗ ಎಂಬುದು ಆಂತರಿಕ ಅನುಭೂತಿ, ಸ್ವಅನುಭವದಿಂದ ಪಡೆಯುವ ಸಿದ್ಧಿ ಎಂದು ಹೇಳಿದರು.<br /> <br /> ಇಂದಿನ ಯಾಂತ್ರಿಕ ಬದುಕು ಮನುಷ್ಯನನ್ನು ಆವರಿಸಿದೆ. ಹಣ ಗಳಿಸುವ ಕಾತರ ಹೆಚ್ಚಿದೆ. ಲೌಕಿಕ ಸಂಪತ್ತನ್ನೆ ಸುಖ ಎಂದು ಜನರು ಭ್ರಮಿಸಿದ್ದಾರೆ ಎಂದರು.<br /> <br /> ಸಾವಧಾನವಾಗಿ ಬದುಕನ್ನು ಸಿಂಹಾವಲೋಕನ ಮಾಡಿದಾಗ ಮಾತ್ರ ನಾವು ಎಷ್ಟು ಸಮಯ ವ್ಯರ್ಥವಾಗಿ ಕಳೆದಿದ್ದೇವೆ ಎಂಬುದು ಅರಿವಾಗುತ್ತದೆ. ಆಸನಗಳು ದೇಹದ ತೂಕ ಕಡಿಮೆ ಮಾಡುವುದರೊಂದಿಗೆ ಆರೋಗ್ಯಮಯ ಸಂದೇಶ ಉಂಟು ಮಾಡುತ್ತವೆ ಎಂದರು.<br /> <br /> ಆಂತರಿಕ ಜ್ಞಾನಸಿದ್ಧಿಯೇ ಯೋಗ. ಮನಸ್ಸನ್ನು ನಿಯಂತ್ರಿಸುವ ಅಂತರಂಗದ ಘನತ ಅರಿಯುವ ಸಿದ್ಧಿಗೆ ನಿರಂತರ ಸಾಧನೆ ಮುಖ್ಯ ಎಂದರು.<br /> <br /> ಉದ್ಭವ ಪ್ರಕಾಶನದ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಆರೋಗ್ಯವೆ ಮಾನವನ ದೊಡ್ಡ ಆಸ್ತಿ. ಅದು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.<br /> <br /> ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಉದ್ಘಾಟಿಸಿದರು. ದಾನಿ ಗೌರಮ್ಮಬಸವೇಗೌಡ, ಕೆ.ಮೋಹನ್, ಡಾ.ಸಿ.ಕೆ.ಸುಬ್ಬರಾಯ, ಲೇಖಕರಾದ ಬೆಳವಾಡಿ ಮಂಜುನಾಥ, ರಮೇಶ್ ಬೊಂಗಾಳೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>