<p><strong>ಬೆಂಗಳೂರು: </strong>‘ರಾಜಕೀಯ ಪ್ರಣಾಳಿಕೆ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸವಿದೆ. ಇದನ್ನು ಸಾಹಿತಿಗಳು ಕಂಡುಕೊಳ್ಳಬೇಕು’ ಎಂದು ಸಾಹಿತಿ ಬಿ.ಎ.ವಿವೇಕ ರೈ ಹೇಳಿದರು.<br /> <br /> ಅಭಿನವ ಹಾಗೂ ಪಲ್ಲವ ಪ್ರಕಾಶನವು ನಗರದ ಕನ್ನಡ ಭವನದ ನಾಟಕ ಅಕಾಡೆಮಿಯ ಚಾವಡಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅವರದೇ ಕೃತಿಗಳಾದ ‘ಅರಿವು ಸಾಮಾನ್ಯವೆ’, ‘ನೆತ್ತರ ಮದುವೆ’, ‘ಇರುಳ ಕಣ್ಣು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ರಾಜಕೀಯದ ಪ್ರಣಾಳಿಕೆಗಳಿಗೂ ಹಾಗೂ ಸಾಹಿತ್ಯದ ಆಲೋಚನೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಇದರಿಂದ ಸಾಹಿತ್ಯ ಮತ್ತು ರಾಜಕೀಯವನ್ನು ಒಂದು ಅಂತರವಿಟ್ಟುಕೊಂಡೇ ನೋಡಬೇಕು. ಸಾಹಿತಿಗಳು ರಾಜಕೀಯ ಪ್ರಣಾಳಿಕೆಯ ದಾಸರಾಗಬಾರದು’ ಎಂದು ನುಡಿದರು.<br /> <br /> ‘ಎಲ್ಲರೊಂದಿಗೆ ಸ್ನೇಹಿತರಂತೆ ಇರಬೇಕು. ಯಾರೊಂದಿಗೂ ದ್ವೇಷವನ್ನು ಸಾಧಿಸುವುದು ಸರಿಯಲ್ಲ. ನಮ್ಮ ನಿರ್ಧಾರಗಳ ಬಗ್ಗೆ ಖಚಿತತೆ ಇರಬೇಕು’ ಎಂದು ಹೇಳಿದರು.<br /> <br /> ‘ನನ್ನ ಬರವಣಿಗೆಯಿಂದ ಕೆಲವರು ನನ್ನನ್ನು ಎಡ ಪಂಥೀಯನೆಂದು ಗುರುತಿಸುತ್ತಾರೆ. ಆದರೆ. ನನಗೆ ನನ್ನ ಬರವಣಿಗೆ ಬಗೆಗೆ ಖಚಿತತೆಯಿದೆ’ ಎಂದು ಪ್ರತಿಪಾದಿಸಿದರು.<br /> <br /> ‘ಎಲ್ಲಾ ನೋವುಗಳ ನಡುವೆ ನಮ್ಮನ್ನು ಕಾಪಾಡುವುದು ಬರವಣಿಗೆ. ನನ್ನ ಮುಂದಿನ ಜೀವನವನ್ನು ಬರವಣಿಗೆಗಾಗಿ ಮೀಸಲಿಡುತ್ತೇನೆ’ ಎಂದರು<br /> <br /> ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ‘ಅರಿವು ಸಾಮಾನ್ಯವೆ’ ಕೃತಿಯ ಕುರಿತು ಮಾತನಾಡಿ, ‘ಇತಿಹಾಸ- ಜನಪದದ ನಡುವಿನ ಭಿನ್ನತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಭಿನ್ನ ಸಂಸ್ಕೃತಿ, ಭಿನ್ನ ಸಾಹಿತ್ಯಗಳ ವಿದ್ವತ್ತು, ಭಿನ್ನ ವಿಚಾರಗಳು ಕೂಡುವ ತಾಣವಾಗಿದ್ದು, ಇದೊಂದು ವೈಚಾರಿಕ ಲೇಖನಗಳ ಸಂಕಲನವಾಗಿದೆ’ ಎಂದರು.<br /> <br /> ಲೇಖಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಇರುಳ ಕಣ್ಣು’ ಕೃತಿಯಲ್ಲಿ ‘ಧಾರ್ಮಿಕ ಮೂಲಭೂತವಾದದ ಬಗ್ಗೆ ವಿಸ್ತಾರತೆಯನ್ನು ಹೊಂದಿದೆ. ಕನ್ನಡ ಭಾಷೆ, ಸಾಹಿತ್ಯದ ಕುರಿತಾದ ಒಂದು ಉತ್ತಮ ಕೈಪಿಡಿಯಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ರಾಜಕೀಯ ಪ್ರಣಾಳಿಕೆ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸವಿದೆ. ಇದನ್ನು ಸಾಹಿತಿಗಳು ಕಂಡುಕೊಳ್ಳಬೇಕು’ ಎಂದು ಸಾಹಿತಿ ಬಿ.ಎ.ವಿವೇಕ ರೈ ಹೇಳಿದರು.<br /> <br /> ಅಭಿನವ ಹಾಗೂ ಪಲ್ಲವ ಪ್ರಕಾಶನವು ನಗರದ ಕನ್ನಡ ಭವನದ ನಾಟಕ ಅಕಾಡೆಮಿಯ ಚಾವಡಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅವರದೇ ಕೃತಿಗಳಾದ ‘ಅರಿವು ಸಾಮಾನ್ಯವೆ’, ‘ನೆತ್ತರ ಮದುವೆ’, ‘ಇರುಳ ಕಣ್ಣು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ರಾಜಕೀಯದ ಪ್ರಣಾಳಿಕೆಗಳಿಗೂ ಹಾಗೂ ಸಾಹಿತ್ಯದ ಆಲೋಚನೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಇದರಿಂದ ಸಾಹಿತ್ಯ ಮತ್ತು ರಾಜಕೀಯವನ್ನು ಒಂದು ಅಂತರವಿಟ್ಟುಕೊಂಡೇ ನೋಡಬೇಕು. ಸಾಹಿತಿಗಳು ರಾಜಕೀಯ ಪ್ರಣಾಳಿಕೆಯ ದಾಸರಾಗಬಾರದು’ ಎಂದು ನುಡಿದರು.<br /> <br /> ‘ಎಲ್ಲರೊಂದಿಗೆ ಸ್ನೇಹಿತರಂತೆ ಇರಬೇಕು. ಯಾರೊಂದಿಗೂ ದ್ವೇಷವನ್ನು ಸಾಧಿಸುವುದು ಸರಿಯಲ್ಲ. ನಮ್ಮ ನಿರ್ಧಾರಗಳ ಬಗ್ಗೆ ಖಚಿತತೆ ಇರಬೇಕು’ ಎಂದು ಹೇಳಿದರು.<br /> <br /> ‘ನನ್ನ ಬರವಣಿಗೆಯಿಂದ ಕೆಲವರು ನನ್ನನ್ನು ಎಡ ಪಂಥೀಯನೆಂದು ಗುರುತಿಸುತ್ತಾರೆ. ಆದರೆ. ನನಗೆ ನನ್ನ ಬರವಣಿಗೆ ಬಗೆಗೆ ಖಚಿತತೆಯಿದೆ’ ಎಂದು ಪ್ರತಿಪಾದಿಸಿದರು.<br /> <br /> ‘ಎಲ್ಲಾ ನೋವುಗಳ ನಡುವೆ ನಮ್ಮನ್ನು ಕಾಪಾಡುವುದು ಬರವಣಿಗೆ. ನನ್ನ ಮುಂದಿನ ಜೀವನವನ್ನು ಬರವಣಿಗೆಗಾಗಿ ಮೀಸಲಿಡುತ್ತೇನೆ’ ಎಂದರು<br /> <br /> ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ‘ಅರಿವು ಸಾಮಾನ್ಯವೆ’ ಕೃತಿಯ ಕುರಿತು ಮಾತನಾಡಿ, ‘ಇತಿಹಾಸ- ಜನಪದದ ನಡುವಿನ ಭಿನ್ನತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಭಿನ್ನ ಸಂಸ್ಕೃತಿ, ಭಿನ್ನ ಸಾಹಿತ್ಯಗಳ ವಿದ್ವತ್ತು, ಭಿನ್ನ ವಿಚಾರಗಳು ಕೂಡುವ ತಾಣವಾಗಿದ್ದು, ಇದೊಂದು ವೈಚಾರಿಕ ಲೇಖನಗಳ ಸಂಕಲನವಾಗಿದೆ’ ಎಂದರು.<br /> <br /> ಲೇಖಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಇರುಳ ಕಣ್ಣು’ ಕೃತಿಯಲ್ಲಿ ‘ಧಾರ್ಮಿಕ ಮೂಲಭೂತವಾದದ ಬಗ್ಗೆ ವಿಸ್ತಾರತೆಯನ್ನು ಹೊಂದಿದೆ. ಕನ್ನಡ ಭಾಷೆ, ಸಾಹಿತ್ಯದ ಕುರಿತಾದ ಒಂದು ಉತ್ತಮ ಕೈಪಿಡಿಯಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>