<p><strong>ಹ್ಯಾಂಡ್ಪೋಸ್ಟ್ (ಮೂಡಿಗೆರೆ):</strong> ದಿನದಿಂದ ದಿನಕ್ಕೆ ನಷ್ಟದಂಚಿಗೆ ತಲುಪುತ್ತಿರುವ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರೈತರ ಆರ್ಥಿಕ ಮಟ್ಟ ಸುಧಾರಣೆಯತ್ತ ಸೂಕ್ತ ಚಿಂತನೆ ನಡೆಯಬೇಕಿದೆ ಎಂದು ತಾ.ಪಂ. ಅಧ್ಯಕ್ಷ ಎಂ.ಎ.ಶೇಷಗಿರಿ ಕಳಸ ಅಭಿಪ್ರಾಯಪಟ್ಟರು.<br /> <br /> ಗ್ರಾಮದ ವಲಯ ತೋಟಗಾರಿಕಾ ಕಾಲೇಜು ಆವರಣದಲ್ಲಿ ಶುಕ್ರವಾರ ಪ್ರಾರಂಭವಾದ ಕೃಷಿ ಮೇಳ 2013 ಅನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಗಣನೀಯವಾಗಿ ಕುಂಠಿತಗೊಳ್ಳ ತೊಡಗಿದ್ದು ಕಳವಳ ಕಾರಿಯಾಗಿದೆ. ಭತ್ತ ಬೆಳೆಯಲ್ಲಿ ಇಂದು ರೈತರು ಬೆಳೆಗಾಗಿ ಸುರಿಯುವ ಬಂಡವಾಳಕ್ಕಿಂತ ಆದಾಯದ ಪ್ರಮಾಣ ಕಡಿಮೆ ಗೊಂಡಿರುವುದು ಭತ್ತದ ಬೆಳೆಯಲ್ಲಿ ರೈತರಿಗೆ ನಿರಾಸಕ್ತಿ ಮೂಡಲು ಪ್ರಮುಖ ಕಾರಣವಾಗಿದೆ, ಇಂತಹ ಪರಿಸ್ಥಿತಿಯೇ ಮುಂದುವೆರೆದರೆ ಭವಿಷ್ಯದಲ್ಲಿ ಆಹಾರಕ್ಕಾಗಿ ಪರೆದಾಡಬೇಕಾಗುತ್ತದೆ ಎಂದರು.<br /> <br /> ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ. ನಾಗೇಶ್ ಮಾತನಾಡಿ, ಸಮಾಜದ ಕೆಳ ಹಂತದ ರೈತರಿಗೆ ಸೂಕ್ತ ಮಾಹಿತಿ ಕೊರತೆಯಿಂದ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗುವಂತಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಸೂಕ್ತವಾಗಿ ಕಾರ್ಯನಿರ್ವಹಿಸಿ, ಮೊದಲ ಹಂತದ ರೈತರೂ ಕೃಷಿಯಿಂದ ಲಾಭ ಪಡೆಯುವಂತಾಗಬೇಕು ಎಂದರು.<br /> <br /> ಜಿ.ಪಂ. ಸದಸ್ಯ ಎಂ.ಎಸ್. ಅನಂತ್ ಮಾತನಾಡಿ, ವಿಜ್ಞಾನಿಗಳು ಮತ್ತು ರೈತರ ನಡುವಿನ ಸಂಪರ್ಕ ಗಣನೀಯ ಪ್ರಮಾಣದಲ್ಲಿ ಬಲಗೊಳ್ಳಬೇಕಿದೆ, ಸಂಶೋಧನೆಗಳು, ಮಾಹಿತಿಗಳು ಸಂಶೋಧನಾ ಕೇಂದ್ರಗಳಲ್ಲಿಯೇ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ವಿಜ್ಞಾನಿಗಳ ಮೇಲಿದೆ ಎಂದರು. ಕೃಷಿ ಚಟುವಟಿಕೆಯಲ್ಲಿ ಪ್ರಗತಿಯತ್ತ ಸಾಗಬೇಕಾದರೆ ಯಾಂತ್ರೀಕರಣ ಅಗತ್ಯವಾಗಿದ್ದು, ತಂತ್ರಜ್ಞಾನಗಳನ್ನು ಸೂಕ್ತವಾಗಿ ರೈತರ ಬಳಿಗೆ ಕೊಂಡೊಯ್ಯಬೇಕಿದೆ ಎಂದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಡಾ. ಪಿ.ಎಂ. ಸಾಲಿಮಠ ಮಾತನಾಡಿ, ಮಲೆನಾಡನ್ನು ಬಾದಿಸುತ್ತಿರುವ ಅಡಿಕೆ ಬೆಳೆಯ ಹಳದಿ ರೋಗ, ಕೊಳೆರೋಗಕ್ಕೆ ಸಂಬಂದಿಸಿದಂತೆ ಸಂಶೋಧನೆಗಳು ನಡೆಯುತ್ತಿದ್ದು, ಯಶಸ್ವಿಯತ್ತ ಸಾಗಿದ್ದೇವೆ ಮುಂದಿನ ದಿನಗಳಲ್ಲಿ ಈ ರೋಗಗಳಿಂದ ಮುಕ್ತ ಹೊಂದುವ ದಿನಗಳು ಎದುರಾಗಲಿವೆ, ರೈತರು ಮತ್ತು ವಿಜ್ಞಾನಿಗಳ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರಥ ಸಂಪರ್ಕ ಕೇಂದ್ರಗಳಿಗೂ ತಿಂಗಳಿಗೆ ಎರಡು ಬಾರಿ ವಿಜ್ಞಾನಿಗಳು ಭೇಟಿ ನೀಡಿ ಇಡೀ ದಿನ ಕಾರ್ಯನಿರ್ವಹಿಸಿ, ರೈತರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು. ಕಾಳು ಮೆಣಸಿನ ಕೃಷಿಯಲ್ಲಿ ಸಾಧನೆಗೈದ ದಾರದಹಳ್ಳಿ ಸುಧಾ ರಮೇಶ್ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಎಂ.ಎಸ್. ಅನಂತ್, ಜ್ಯೋತಿಹೇಮಶೇಖರ್, ಗ್ರಾ.ಪಂ. ಸದಸ್ಯ ಪ್ರಭಾಕರ ಮುಂತಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹ್ಯಾಂಡ್ಪೋಸ್ಟ್ (ಮೂಡಿಗೆರೆ):</strong> ದಿನದಿಂದ ದಿನಕ್ಕೆ ನಷ್ಟದಂಚಿಗೆ ತಲುಪುತ್ತಿರುವ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರೈತರ ಆರ್ಥಿಕ ಮಟ್ಟ ಸುಧಾರಣೆಯತ್ತ ಸೂಕ್ತ ಚಿಂತನೆ ನಡೆಯಬೇಕಿದೆ ಎಂದು ತಾ.ಪಂ. ಅಧ್ಯಕ್ಷ ಎಂ.ಎ.ಶೇಷಗಿರಿ ಕಳಸ ಅಭಿಪ್ರಾಯಪಟ್ಟರು.<br /> <br /> ಗ್ರಾಮದ ವಲಯ ತೋಟಗಾರಿಕಾ ಕಾಲೇಜು ಆವರಣದಲ್ಲಿ ಶುಕ್ರವಾರ ಪ್ರಾರಂಭವಾದ ಕೃಷಿ ಮೇಳ 2013 ಅನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಗಣನೀಯವಾಗಿ ಕುಂಠಿತಗೊಳ್ಳ ತೊಡಗಿದ್ದು ಕಳವಳ ಕಾರಿಯಾಗಿದೆ. ಭತ್ತ ಬೆಳೆಯಲ್ಲಿ ಇಂದು ರೈತರು ಬೆಳೆಗಾಗಿ ಸುರಿಯುವ ಬಂಡವಾಳಕ್ಕಿಂತ ಆದಾಯದ ಪ್ರಮಾಣ ಕಡಿಮೆ ಗೊಂಡಿರುವುದು ಭತ್ತದ ಬೆಳೆಯಲ್ಲಿ ರೈತರಿಗೆ ನಿರಾಸಕ್ತಿ ಮೂಡಲು ಪ್ರಮುಖ ಕಾರಣವಾಗಿದೆ, ಇಂತಹ ಪರಿಸ್ಥಿತಿಯೇ ಮುಂದುವೆರೆದರೆ ಭವಿಷ್ಯದಲ್ಲಿ ಆಹಾರಕ್ಕಾಗಿ ಪರೆದಾಡಬೇಕಾಗುತ್ತದೆ ಎಂದರು.<br /> <br /> ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ. ನಾಗೇಶ್ ಮಾತನಾಡಿ, ಸಮಾಜದ ಕೆಳ ಹಂತದ ರೈತರಿಗೆ ಸೂಕ್ತ ಮಾಹಿತಿ ಕೊರತೆಯಿಂದ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗುವಂತಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಸೂಕ್ತವಾಗಿ ಕಾರ್ಯನಿರ್ವಹಿಸಿ, ಮೊದಲ ಹಂತದ ರೈತರೂ ಕೃಷಿಯಿಂದ ಲಾಭ ಪಡೆಯುವಂತಾಗಬೇಕು ಎಂದರು.<br /> <br /> ಜಿ.ಪಂ. ಸದಸ್ಯ ಎಂ.ಎಸ್. ಅನಂತ್ ಮಾತನಾಡಿ, ವಿಜ್ಞಾನಿಗಳು ಮತ್ತು ರೈತರ ನಡುವಿನ ಸಂಪರ್ಕ ಗಣನೀಯ ಪ್ರಮಾಣದಲ್ಲಿ ಬಲಗೊಳ್ಳಬೇಕಿದೆ, ಸಂಶೋಧನೆಗಳು, ಮಾಹಿತಿಗಳು ಸಂಶೋಧನಾ ಕೇಂದ್ರಗಳಲ್ಲಿಯೇ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ವಿಜ್ಞಾನಿಗಳ ಮೇಲಿದೆ ಎಂದರು. ಕೃಷಿ ಚಟುವಟಿಕೆಯಲ್ಲಿ ಪ್ರಗತಿಯತ್ತ ಸಾಗಬೇಕಾದರೆ ಯಾಂತ್ರೀಕರಣ ಅಗತ್ಯವಾಗಿದ್ದು, ತಂತ್ರಜ್ಞಾನಗಳನ್ನು ಸೂಕ್ತವಾಗಿ ರೈತರ ಬಳಿಗೆ ಕೊಂಡೊಯ್ಯಬೇಕಿದೆ ಎಂದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಡಾ. ಪಿ.ಎಂ. ಸಾಲಿಮಠ ಮಾತನಾಡಿ, ಮಲೆನಾಡನ್ನು ಬಾದಿಸುತ್ತಿರುವ ಅಡಿಕೆ ಬೆಳೆಯ ಹಳದಿ ರೋಗ, ಕೊಳೆರೋಗಕ್ಕೆ ಸಂಬಂದಿಸಿದಂತೆ ಸಂಶೋಧನೆಗಳು ನಡೆಯುತ್ತಿದ್ದು, ಯಶಸ್ವಿಯತ್ತ ಸಾಗಿದ್ದೇವೆ ಮುಂದಿನ ದಿನಗಳಲ್ಲಿ ಈ ರೋಗಗಳಿಂದ ಮುಕ್ತ ಹೊಂದುವ ದಿನಗಳು ಎದುರಾಗಲಿವೆ, ರೈತರು ಮತ್ತು ವಿಜ್ಞಾನಿಗಳ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರಥ ಸಂಪರ್ಕ ಕೇಂದ್ರಗಳಿಗೂ ತಿಂಗಳಿಗೆ ಎರಡು ಬಾರಿ ವಿಜ್ಞಾನಿಗಳು ಭೇಟಿ ನೀಡಿ ಇಡೀ ದಿನ ಕಾರ್ಯನಿರ್ವಹಿಸಿ, ರೈತರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು. ಕಾಳು ಮೆಣಸಿನ ಕೃಷಿಯಲ್ಲಿ ಸಾಧನೆಗೈದ ದಾರದಹಳ್ಳಿ ಸುಧಾ ರಮೇಶ್ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಎಂ.ಎಸ್. ಅನಂತ್, ಜ್ಯೋತಿಹೇಮಶೇಖರ್, ಗ್ರಾ.ಪಂ. ಸದಸ್ಯ ಪ್ರಭಾಕರ ಮುಂತಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>