<p>ನೆಲಮಂಗಲ: ‘ವಿದ್ಯಾರ್ಥಿಗಳಿಗೆ ಇತಿಹಾಸದ ವಿಶೇಷತೆಗಳನ್ನು ಪರಿಚಯಿಸುವ ಕೆಲಸ ಆಗಬೇಕಿದೆ’ ಎಂದು ಕೆಂಪೇಗೌಡ ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಎಚ್.ಆಂಜನಪ್ಪ ಹೇಳಿದರು.<br /> <br /> ಪಟ್ಟಣದ ವಿಘ್ನೇಶ್ವರ ನಾಗರಿಕ ಕ್ಷೇಮಾಭಿವೃದ್ಧಿ ಸಂಘವು ವಿಶಾಲ್ ಆಂಗ್ಲ ಶಾಲೆಯ ಅವರಣದಲ್ಲಿ ಆಯೊಜಿಸಿದ್ದ ರಾಜ್ಯೋತ್ಸವ ಮತ್ತು ಜನಪದ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಕೃತಿ ಬಿಡುಗಡೆ ಮಾಡಿದ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ‘ಸಾಹಿತ್ಯ ಕೃತಿಗಳು ಅನುಭಾವದ ಪರಿಪಾಕಗಳು. ಕವಿ ದೈಹಿಕವಾಗಿ ನಶ್ವರನಾದರೂ ರಚಿಸಿದ ಪುಸ್ತಕಗಳಿಂದ ಅಮರನಾಗುತ್ತಾನೆ’ ಎಂದರು.<br /> <br /> ನಾಗಮಂಗಲ ಆದಿಚುಂಚನಗಿರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಡಿ.ಯೋಗರಾಜು ‘ಸೊನ್ನಲಗೆಯ ಸಿದ್ಧಪುರುಷ’, ‘ಭೋವಿ ಜನಾಂಗ ನಡೆದುಬಂದ ದಾರಿ’, ‘ಗಂಗಾ ಭೋವಿ – ಪ್ರತಿಭಾವಂತ ಸಂಸದೀಯ ಪಟು’ ಕೃತಿಗಳನ್ನು ಪರಿಚಯಿಸಿದರು.<br /> <br /> ಬಡಾವಣೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಬಿ.ಎಸ್.ಪರಿಣಿತಾ, ಮಧುಸೂದನ್ ಮತ್ತು ನಗರ ಗ್ರಂಥಾಲಯದ ಪ್ರೇಮಮೂರ್ತಿ ಅವರನ್ನು ಪುರಸಭಾ ಸದಸ್ಯ ಶಿವಕುಮಾರ್ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಬಿ.ಎಸ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ.ವೀರೇಶ್ ಬಳ್ಳಾರಿ ತಂಡದವರಿಂದ ಜನಪದ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೆಲಮಂಗಲ: ‘ವಿದ್ಯಾರ್ಥಿಗಳಿಗೆ ಇತಿಹಾಸದ ವಿಶೇಷತೆಗಳನ್ನು ಪರಿಚಯಿಸುವ ಕೆಲಸ ಆಗಬೇಕಿದೆ’ ಎಂದು ಕೆಂಪೇಗೌಡ ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಎಚ್.ಆಂಜನಪ್ಪ ಹೇಳಿದರು.<br /> <br /> ಪಟ್ಟಣದ ವಿಘ್ನೇಶ್ವರ ನಾಗರಿಕ ಕ್ಷೇಮಾಭಿವೃದ್ಧಿ ಸಂಘವು ವಿಶಾಲ್ ಆಂಗ್ಲ ಶಾಲೆಯ ಅವರಣದಲ್ಲಿ ಆಯೊಜಿಸಿದ್ದ ರಾಜ್ಯೋತ್ಸವ ಮತ್ತು ಜನಪದ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಕೃತಿ ಬಿಡುಗಡೆ ಮಾಡಿದ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ‘ಸಾಹಿತ್ಯ ಕೃತಿಗಳು ಅನುಭಾವದ ಪರಿಪಾಕಗಳು. ಕವಿ ದೈಹಿಕವಾಗಿ ನಶ್ವರನಾದರೂ ರಚಿಸಿದ ಪುಸ್ತಕಗಳಿಂದ ಅಮರನಾಗುತ್ತಾನೆ’ ಎಂದರು.<br /> <br /> ನಾಗಮಂಗಲ ಆದಿಚುಂಚನಗಿರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಡಿ.ಯೋಗರಾಜು ‘ಸೊನ್ನಲಗೆಯ ಸಿದ್ಧಪುರುಷ’, ‘ಭೋವಿ ಜನಾಂಗ ನಡೆದುಬಂದ ದಾರಿ’, ‘ಗಂಗಾ ಭೋವಿ – ಪ್ರತಿಭಾವಂತ ಸಂಸದೀಯ ಪಟು’ ಕೃತಿಗಳನ್ನು ಪರಿಚಯಿಸಿದರು.<br /> <br /> ಬಡಾವಣೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಬಿ.ಎಸ್.ಪರಿಣಿತಾ, ಮಧುಸೂದನ್ ಮತ್ತು ನಗರ ಗ್ರಂಥಾಲಯದ ಪ್ರೇಮಮೂರ್ತಿ ಅವರನ್ನು ಪುರಸಭಾ ಸದಸ್ಯ ಶಿವಕುಮಾರ್ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಬಿ.ಎಸ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ.ವೀರೇಶ್ ಬಳ್ಳಾರಿ ತಂಡದವರಿಂದ ಜನಪದ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>