<p>ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಉಡುಪಿ ಮತ್ತು ಸೊಲ್ಲಾಪುರಕ್ಕೆ ಇದೇ 18ರಿಂದ ಹೊಸ ಬಸ್ ಸೇವೆ ಆರಂಭಿಸಲಿದೆ. ಉಡುಪಿಗೆ ಸಾಗುವ ಬಸ್ಸು ಹಾಸನ, ಧರ್ಮಸ್ಥಳ, ಕಾರ್ಕಳ ಮಾರ್ಗವಾಗಿ ಸಾಗಲಿದೆ. ಸೊಲ್ಲಾಪುರಕ್ಕೆ ಹೋಗುವ ಬಸ್ಸು ಚಿತ್ರದುರ್ಗ, ಹೊಸಪೇಟೆ, ವಿಜಾಪುರ ಮಾರ್ಗವಾಗಿ ತೆರಳಲಿದೆ.<br /> <br /> ಮೂವತ್ತು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ವಿವರಗಳಿಗೆ 7760990562, 7760990561 ಅಥವಾ 080-22870099 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.<br /> <br /> <strong>ದಂಡ ವಸೂಲಿ</strong>: ವಿವಿಧ ಮಾರ್ಗಗಳಲ್ಲಿ ಸಾಗುವ ನಿಗಮದ ಬಸ್ಸುಗಳಲ್ಲಿ ಟಿಕೆಟ್ ಇಲ್ಲದೆ ಸಂಚರಿಸುತ್ತಿದ್ದ 8,351 ಮಂದಿ ಪ್ರಯಾಣಿಕರಿಂದ 7,33,518 ರೂಪಾಯಿಗಳನ್ನು ಅಧಿಕಾರಿಗಳು ಡಿಸೆಂಬರ್ ತಿಂಗಳಲ್ಲಿ ವಸೂಲು ಮಾಡಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ಉಡುಪಿ ಮತ್ತು ಸೊಲ್ಲಾಪುರಕ್ಕೆ ಇದೇ 18ರಿಂದ ಹೊಸ ಬಸ್ ಸೇವೆ ಆರಂಭಿಸಲಿದೆ. ಉಡುಪಿಗೆ ಸಾಗುವ ಬಸ್ಸು ಹಾಸನ, ಧರ್ಮಸ್ಥಳ, ಕಾರ್ಕಳ ಮಾರ್ಗವಾಗಿ ಸಾಗಲಿದೆ. ಸೊಲ್ಲಾಪುರಕ್ಕೆ ಹೋಗುವ ಬಸ್ಸು ಚಿತ್ರದುರ್ಗ, ಹೊಸಪೇಟೆ, ವಿಜಾಪುರ ಮಾರ್ಗವಾಗಿ ತೆರಳಲಿದೆ.<br /> <br /> ಮೂವತ್ತು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ವಿವರಗಳಿಗೆ 7760990562, 7760990561 ಅಥವಾ 080-22870099 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.<br /> <br /> <strong>ದಂಡ ವಸೂಲಿ</strong>: ವಿವಿಧ ಮಾರ್ಗಗಳಲ್ಲಿ ಸಾಗುವ ನಿಗಮದ ಬಸ್ಸುಗಳಲ್ಲಿ ಟಿಕೆಟ್ ಇಲ್ಲದೆ ಸಂಚರಿಸುತ್ತಿದ್ದ 8,351 ಮಂದಿ ಪ್ರಯಾಣಿಕರಿಂದ 7,33,518 ರೂಪಾಯಿಗಳನ್ನು ಅಧಿಕಾರಿಗಳು ಡಿಸೆಂಬರ್ ತಿಂಗಳಲ್ಲಿ ವಸೂಲು ಮಾಡಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>