`ಹಿಂದೆ ಗ್ರಾಮಾಂತರ ಪ್ರದೇಶದ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವಿರಳವಾಗಿದ್ದವು. ಆದರೆ ಅಂಕಿ ಅಂಶಗಳ ಪ್ರಕಾರ (2008) ಶೇಕಡಾ 7ರಷ್ಟು ಗ್ರಾಮಾಂತರ ಪ್ರದೇಶದ ಜನರೂ ಈ ಮರಣ ಹೊಂದುತ್ತಿದ್ದಾರೆ ಎಂದು ತಿಳಿದು ಬಂದಿದೆ~ ಎಂದರು. `ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ನಾಗರಿಕರು ಮುಖ್ಯವಾಗಿ ಒತ್ತಡ ರಹಿತವಾಗಿ ಕೆಲಸ ಮಾಡಬೇಕು. ಅಲ್ಲದೆ ಸಹ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು. ಎಸ್.ಎಸ್.ಗ್ರೂಪ್ನ ಟ್ರಸ್ಟಿ ರವೀಂದ್ರ ಪ್ರಸಾದ್, ಮಲ್ಯ ಆಸ್ಪತ್ರೆಯ ಮುಖ್ಯ ಆಹಾರತಜ್ಞೆ ಡಾ.ತಾರಾ ಮುರುಳಿ ಇತರರು ಉಪಸ್ಥಿತರಿದ್ದರು.