<p>ಪೀಣ್ಯ ಮತ್ತು ಆಸುಪಾಸಿನ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಮಾರ್ಗ ಸಂಖ್ಯೆ 252ಎಫ್ನ್ನು ಅವಲಂಬಿಸಿದ್ದಾರೆ.<br /> <br /> ಬೆಳಿಗ್ಗೆ ಮತ್ತು ಸಂಜೆ ನಿಗದಿತ ವೇಳೆಯಲ್ಲಿ ನಿಗದಿತ ವೇಳೆಯಲ್ಲಿ ಬಸ್ ಬರುವುದಿಲ್ಲ. ಲಗ್ಗೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದರೆ ಹಿಂದೆ ಬರುವ 252ಎಫ್ ನಿಲ್ಲಿಸದೆ ಮುಂದೆ ಸಾಗುತ್ತದೆ. ಪೀಣ್ಯ 2ನೇ ಸ್ಟೇಜ್ ಹೋಗುವವರು ಹೇಗೆ ತಲುಪಬೇಕು? <br /> <br /> ಕೆಲ ಸಲ 252ಎಫ್ 2 ಅಥವಾ 3 ವಾಹನವು ಒಟ್ಟಿಗೆ ಬರುತ್ತದೆ. ಎಲ್ಲರೂ ಪೈಪೋಟಿಗೆ ಬಿದ್ದವರಂತೆ ನಿಲ್ದಾಣಗಳಲ್ಲಿ ನಿಲ್ಲಿಸದೇ ಮುಂದೆ ಸಾಗುತ್ತಾರೆ. ಪ್ರಯಾಣಿಕರು ಸ್ವಲ್ಪ ದೂರ ಬೆನ್ನಟ್ಟಿ ಅಸಹಾಯಕರಾಗಿ ಇನ್ನೊಂದು ಬಸ್ಗಾಗಿ ಕಾಯಬೇಕಾಗುತ್ತದೆ. <br /> <br /> ಸಾಯಂಕಾಲ 4 ರಿಂದ 5 ವಾಹನಗಳು ಸಾಲಾಗಿ ಪೀಣ್ಯ 2ನೇ ಸ್ಟೇಜ್ನಲ್ಲಿ ನಿಂತಿರುತ್ತವೆ. ಯಾವ ಬಸ್ ಹತ್ತಿದರೂ ಮತ್ತೊಂದು ಈ ಬಸ್ ಹೊರಡುವುದಿಲ್ಲ, ಮತ್ತೊಂದು ಬಸ್ಗೆ ಹೋಗಿ ಎಂದೇ ತೋರಿಸುತ್ತಾರೆ. ಕೊನೆಗೆ ಯಾರೂ ಹೊರಡುವುದಿಲ್ಲ. ಎಲ್ಲರೂ ಹಾಳು ಹರಟೆಯಲ್ಲಿ ಮುಳುಗಿರುತ್ತಾರೆ. <br /> <br /> ಕಾರ್ಮಿಕರಿಗೆ ಬೆಳಿಗ್ಗೆ 7 ರಿಂದ 9 ಮತ್ತು ಸಂಜೆ 5 ರಿಂದ 7 ರವರೆಗೆ ನಿಗದಿತ ವೇಳೆಯಲ್ಲಿ ಸಮರ್ಪಕವಾಗಿ ಬಸ್ ಓಡಿಸಲಿ. ನಿಲ್ದಾಣದಲ್ಲಿ ಮರೆಯದೆ ಕಡ್ಡಾಯವಾಗಿ ನಿಲ್ಲಿಸಲಿ. <br /> ಸೌಜನ್ಯವಿರಲಿ:<br /> <br /> ಒಬ್ಬ ನಿರ್ವಾಹಕ ಬಸ್ನಲ್ಲಿದ್ದ ಹಿರೀಕರನ್ನು `ಸಾಯಲು ಬರುತ್ತೀರಾ~ ಎಂದು ಜರೆದರು. ಸೌಜನ್ಯದ ವರ್ತನೆಯನ್ನು ಬಸ್ ನಿರ್ವಾಹಕರಿಂದ ನಿರೀಕ್ಷಿಸಬಹುದೆ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೀಣ್ಯ ಮತ್ತು ಆಸುಪಾಸಿನ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಮಾರ್ಗ ಸಂಖ್ಯೆ 252ಎಫ್ನ್ನು ಅವಲಂಬಿಸಿದ್ದಾರೆ.<br /> <br /> ಬೆಳಿಗ್ಗೆ ಮತ್ತು ಸಂಜೆ ನಿಗದಿತ ವೇಳೆಯಲ್ಲಿ ನಿಗದಿತ ವೇಳೆಯಲ್ಲಿ ಬಸ್ ಬರುವುದಿಲ್ಲ. ಲಗ್ಗೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದರೆ ಹಿಂದೆ ಬರುವ 252ಎಫ್ ನಿಲ್ಲಿಸದೆ ಮುಂದೆ ಸಾಗುತ್ತದೆ. ಪೀಣ್ಯ 2ನೇ ಸ್ಟೇಜ್ ಹೋಗುವವರು ಹೇಗೆ ತಲುಪಬೇಕು? <br /> <br /> ಕೆಲ ಸಲ 252ಎಫ್ 2 ಅಥವಾ 3 ವಾಹನವು ಒಟ್ಟಿಗೆ ಬರುತ್ತದೆ. ಎಲ್ಲರೂ ಪೈಪೋಟಿಗೆ ಬಿದ್ದವರಂತೆ ನಿಲ್ದಾಣಗಳಲ್ಲಿ ನಿಲ್ಲಿಸದೇ ಮುಂದೆ ಸಾಗುತ್ತಾರೆ. ಪ್ರಯಾಣಿಕರು ಸ್ವಲ್ಪ ದೂರ ಬೆನ್ನಟ್ಟಿ ಅಸಹಾಯಕರಾಗಿ ಇನ್ನೊಂದು ಬಸ್ಗಾಗಿ ಕಾಯಬೇಕಾಗುತ್ತದೆ. <br /> <br /> ಸಾಯಂಕಾಲ 4 ರಿಂದ 5 ವಾಹನಗಳು ಸಾಲಾಗಿ ಪೀಣ್ಯ 2ನೇ ಸ್ಟೇಜ್ನಲ್ಲಿ ನಿಂತಿರುತ್ತವೆ. ಯಾವ ಬಸ್ ಹತ್ತಿದರೂ ಮತ್ತೊಂದು ಈ ಬಸ್ ಹೊರಡುವುದಿಲ್ಲ, ಮತ್ತೊಂದು ಬಸ್ಗೆ ಹೋಗಿ ಎಂದೇ ತೋರಿಸುತ್ತಾರೆ. ಕೊನೆಗೆ ಯಾರೂ ಹೊರಡುವುದಿಲ್ಲ. ಎಲ್ಲರೂ ಹಾಳು ಹರಟೆಯಲ್ಲಿ ಮುಳುಗಿರುತ್ತಾರೆ. <br /> <br /> ಕಾರ್ಮಿಕರಿಗೆ ಬೆಳಿಗ್ಗೆ 7 ರಿಂದ 9 ಮತ್ತು ಸಂಜೆ 5 ರಿಂದ 7 ರವರೆಗೆ ನಿಗದಿತ ವೇಳೆಯಲ್ಲಿ ಸಮರ್ಪಕವಾಗಿ ಬಸ್ ಓಡಿಸಲಿ. ನಿಲ್ದಾಣದಲ್ಲಿ ಮರೆಯದೆ ಕಡ್ಡಾಯವಾಗಿ ನಿಲ್ಲಿಸಲಿ. <br /> ಸೌಜನ್ಯವಿರಲಿ:<br /> <br /> ಒಬ್ಬ ನಿರ್ವಾಹಕ ಬಸ್ನಲ್ಲಿದ್ದ ಹಿರೀಕರನ್ನು `ಸಾಯಲು ಬರುತ್ತೀರಾ~ ಎಂದು ಜರೆದರು. ಸೌಜನ್ಯದ ವರ್ತನೆಯನ್ನು ಬಸ್ ನಿರ್ವಾಹಕರಿಂದ ನಿರೀಕ್ಷಿಸಬಹುದೆ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>