<p>ಮೈಸೂರು: ‘ಜೀ ಕನ್ನಡ’ ವಾಹಿನಿಯ ಹೊಸ ಮಿನಿ ಧಾರಾವಾಹಿ ‘ಅತಿಮಧುರ ಅನುರಾಗ’ ಡಿ. 30ರಿಂದ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.<br /> <br /> ‘ಪ್ರತಿ ಸೋಮವಾರದಿಂದ ಗುರುವಾರದವರೆಗೆ ಪ್ರಸಾರವಾಗುವ ಈ ಧಾರಾವಾಹಿಯು 13 ವಾರಗಳ, 65 ಕಂತುಗಳಲ್ಲಿ ಮಾತ್ರ ಪ್ರಸಾರವಾಗಲಿದೆ. ಮೆಗಾ ಧಾರವಾಹಿಗಳ ಏಕತಾನತೆ ಮುರಿಯಲು ಇದು ನೆರವಾಗಲಿದೆ’ ಎಂದು ಧಾರಾವಾಹಿಯ ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ‘ಈ ಧಾರಾವಾಹಿ ಕಥೆ ಮೈಸೂರಿನಲ್ಲಿಯೇ ನಡೆಯುತ್ತದೆ. ಮುಖ್ಯವಾಗಿ ಇದು ನನ್ನದೇ ಕಥೆ. ಹೀಗಾಗಿ ಮೈಸೂರಲ್ಲಿ ಅಲ್ಲದೆ, ಬಲಮುರಿಯಲ್ಲಿಯೂ ಚಿತ್ರೀಕರಣ ನಡೆಯಲಿದೆ. ಭಿನ್ನವಾದ ಪ್ರೇಮಕಥೆಯನ್ನು ಹೊಸಬಗೆಯಾಗಿ ಕಟ್ಟಿಕೊಡಲಾಗುತ್ತದೆ. ಸುಂದರ ಅನುಭವವನ್ನು ಇದು ನೀಡಲಿದೆ.<br /> <br /> ಸಿನಿಮಾದಲ್ಲಿ ನಟಿಸಿದ್ದ ಸ್ಪೂರ್ತಿ ಹಾಗೂ ವಿಶ್ವಾಸ್ ನಾಯಕ ಹಾಗೂ ನಾಯಕಿ. ಉಳಿದಂತೆ ರಾಮೇಶ್ವರಿ ವರ್ಮಾ, ನಾಗೇಂದ್ರ ಷಾ, ಕೃಷ್ಣ ಅಡಿಗ, ಹರಿಕೃಷ್ಣ, ಆಶಾಲತಾ, ದಮಯಂತಿ ನಾಗರಾಜ್ ನಟಿಸುತ್ತಿದ್ದಾರೆ’ ಎಂದು ವಿವರಿಸಿದರು.<br /> <br /> ಧಾರವಾಹಿ ನಾಯಕಿ ಸ್ಫೂರ್ತಿ, ಇದುವರೆಗೆ ಒಂದು ತಿಂಗಳವರೆಗೆ ಚಿತ್ರೀಕರಣ ನಡೆದಿದೆ. ಆದರೆ, ಅಳಲು ಗ್ಲಿಸರಿನ್ ಬಳಸಿಲ್ಲ. ಅಂದರೆ ಅಳುವ ಪಾತ್ರವಿಲ್ಲ ಎಂದರು.<br /> <br /> ‘ಈಗಾಗಲೇ ಜೀ ಕನ್ನಡದಲ್ಲಿ ಭಲೆ ಬಸವ ಹಾಗೂ ನಿತ್ಯೋತ್ಸವ ಮಿನಿ ಧಾರಾವಾಹಿಗಳಾಗಿ ಜನಪ್ರಿಯವಾಗಿವೆ. ಈ ಸಾಲಿಗೆ ಅತಿಮಧುರ ಅನುರಾಗ ಕೂಡಾ ಸೇರಲಿದೆ’ ಎಂದು ಧಾರಾವಾಹಿ ವಿಭಾಗದ ವ್ಯವಸ್ಥಾಪಕ ಸುಧನ್ವಾ ದೇರಾಜೆ ಹೇಳಿದರು.<br /> ಕಲಾವಿದರಾದ ರಾಮೇಶ್ವರಿ ವರ್ಮಾ, ಸುಂದರ್, ಜೀ ಟಿವಿ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಂ. ಗೌತಮ್ ಮಾಚಯ್ಯ ಹಾಗೂ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಜೀ ಕನ್ನಡ’ ವಾಹಿನಿಯ ಹೊಸ ಮಿನಿ ಧಾರಾವಾಹಿ ‘ಅತಿಮಧುರ ಅನುರಾಗ’ ಡಿ. 30ರಿಂದ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.<br /> <br /> ‘ಪ್ರತಿ ಸೋಮವಾರದಿಂದ ಗುರುವಾರದವರೆಗೆ ಪ್ರಸಾರವಾಗುವ ಈ ಧಾರಾವಾಹಿಯು 13 ವಾರಗಳ, 65 ಕಂತುಗಳಲ್ಲಿ ಮಾತ್ರ ಪ್ರಸಾರವಾಗಲಿದೆ. ಮೆಗಾ ಧಾರವಾಹಿಗಳ ಏಕತಾನತೆ ಮುರಿಯಲು ಇದು ನೆರವಾಗಲಿದೆ’ ಎಂದು ಧಾರಾವಾಹಿಯ ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ‘ಈ ಧಾರಾವಾಹಿ ಕಥೆ ಮೈಸೂರಿನಲ್ಲಿಯೇ ನಡೆಯುತ್ತದೆ. ಮುಖ್ಯವಾಗಿ ಇದು ನನ್ನದೇ ಕಥೆ. ಹೀಗಾಗಿ ಮೈಸೂರಲ್ಲಿ ಅಲ್ಲದೆ, ಬಲಮುರಿಯಲ್ಲಿಯೂ ಚಿತ್ರೀಕರಣ ನಡೆಯಲಿದೆ. ಭಿನ್ನವಾದ ಪ್ರೇಮಕಥೆಯನ್ನು ಹೊಸಬಗೆಯಾಗಿ ಕಟ್ಟಿಕೊಡಲಾಗುತ್ತದೆ. ಸುಂದರ ಅನುಭವವನ್ನು ಇದು ನೀಡಲಿದೆ.<br /> <br /> ಸಿನಿಮಾದಲ್ಲಿ ನಟಿಸಿದ್ದ ಸ್ಪೂರ್ತಿ ಹಾಗೂ ವಿಶ್ವಾಸ್ ನಾಯಕ ಹಾಗೂ ನಾಯಕಿ. ಉಳಿದಂತೆ ರಾಮೇಶ್ವರಿ ವರ್ಮಾ, ನಾಗೇಂದ್ರ ಷಾ, ಕೃಷ್ಣ ಅಡಿಗ, ಹರಿಕೃಷ್ಣ, ಆಶಾಲತಾ, ದಮಯಂತಿ ನಾಗರಾಜ್ ನಟಿಸುತ್ತಿದ್ದಾರೆ’ ಎಂದು ವಿವರಿಸಿದರು.<br /> <br /> ಧಾರವಾಹಿ ನಾಯಕಿ ಸ್ಫೂರ್ತಿ, ಇದುವರೆಗೆ ಒಂದು ತಿಂಗಳವರೆಗೆ ಚಿತ್ರೀಕರಣ ನಡೆದಿದೆ. ಆದರೆ, ಅಳಲು ಗ್ಲಿಸರಿನ್ ಬಳಸಿಲ್ಲ. ಅಂದರೆ ಅಳುವ ಪಾತ್ರವಿಲ್ಲ ಎಂದರು.<br /> <br /> ‘ಈಗಾಗಲೇ ಜೀ ಕನ್ನಡದಲ್ಲಿ ಭಲೆ ಬಸವ ಹಾಗೂ ನಿತ್ಯೋತ್ಸವ ಮಿನಿ ಧಾರಾವಾಹಿಗಳಾಗಿ ಜನಪ್ರಿಯವಾಗಿವೆ. ಈ ಸಾಲಿಗೆ ಅತಿಮಧುರ ಅನುರಾಗ ಕೂಡಾ ಸೇರಲಿದೆ’ ಎಂದು ಧಾರಾವಾಹಿ ವಿಭಾಗದ ವ್ಯವಸ್ಥಾಪಕ ಸುಧನ್ವಾ ದೇರಾಜೆ ಹೇಳಿದರು.<br /> ಕಲಾವಿದರಾದ ರಾಮೇಶ್ವರಿ ವರ್ಮಾ, ಸುಂದರ್, ಜೀ ಟಿವಿ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಂ. ಗೌತಮ್ ಮಾಚಯ್ಯ ಹಾಗೂ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>