<p><strong>ತುಮಕೂರು:</strong> ತುಮಕೂರು ವಿಶ್ವವಿದ್ಯಾಲಯ ತನ್ನ ಏಳನೇ ಘಟಿಕೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ನೋಂದಣಿಯಾದ ಎಂಟು ತಿಂಗಳಿಗೇ ಪಿಎಚ್.ಡಿ ಪದವಿ ನೀಡಲು ಮುಂದಾಗಿದೆ. ವಿ.ವಿ.ಯಲ್ಲಿ ನಡೆದ ಘಟಿಕೋತ್ಸವ ಸಿದ್ಧತೆ ಕುರಿತ ಸಭೆಯಲ್ಲಿ ವಿವಿಧ ವಿಷಯಗಳಲ್ಲಿ ಕೇವಲ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ 6 ಮಂದಿಗೆ ಪಿಎಚ್.ಡಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.<br /> <br /> ನಿಕಟಪೂರ್ವ ಕುಲಪತಿ ಡಾ.ಎಸ್.ಸಿ.ಶರ್ಮಾ ಅವಧಿಯಲ್ಲಿ ಈ ಆರು ಮಂದಿಗೂ ಸಂಶೋಧನೆಗೆ ನೋಂದಣಿಯಾದ ಎಂಟು ತಿಂಗಳಿಗೆ ಪದವಿ ನೀಡಲಾಗಿದ್ದು, ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನು (ಪಿಎಚ್.ಡಿ) ಮೌಖಿಕ ಪರೀಕ್ಷೆ ದಿವಸವೇ ತರಾತುರಿಯಲ್ಲಿ ಪ್ರದಾನ ಮಾಡಲಾಗಿದೆ. ಈ ಕ್ರಮ ರಾಜ್ಯದ ಯಾವ ವಿ.ವಿ.ಯಲ್ಲೂ ಇಲ್ಲ. ಇಂಥ ಸಂಶೋಧನೆಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡುವುದು ಹೇಗೆ? ಯಾರಾದರೂ ಪ್ರಶ್ನಿಸಿದರೆ ವಿಶ್ವವಿದ್ಯಾನಿಲಯ ತಲೆ ತಗ್ಗಿಸಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಕೆಲವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.<br /> <br /> ಡಿ.ಲಿಟ್, ಡಿ.ಎಸ್ಸಿ ಸಂಶೋಧನಾ ಪದವಿ ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಡಾ.ಎಸ್.ಸಿ.ಶರ್ಮಾ ಕುಲಪತಿ ಅವಧಿಯ ಕೇವಲ 4 ವರ್ಷಗಳಲ್ಲಿ 60ಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪ್ರದಾನ ಮಾಡಲಾಗಿದೆ. ಶೇ 70ರಷ್ಟು ಡಿಲಿಟ್ ಪದವಿ ಪಡೆದವರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಸಿಂಡಿಕೇಟ್ನ ಮಾಜಿ ಸದಸ್ಯರೊಬ್ಬರು ನೊಂದು ನುಡಿದರು.<br /> <br /> ರಾಜ್ಯದ ಹಳೆಯ, ಪ್ರಮುಖ ವಿ.ವಿ.ಯಾದ ಮೈಸೂರು ವಿ.ವಿ. ಇತಿಹಾಸದಲ್ಲಿ ಇಷ್ಟೊಂದು ಮಂದಿಗೆ ಡಿ.ಲಿಟ್ ಪ್ರದಾನ ಮಾಡಿಲ್ಲ. ಶರ್ಮಾ ಅವಧಿಯಲ್ಲಿ ಪಿಎಚ್.ಡಿ ಪದವಿ ನೀಡಿದ್ದರೂ ಆ ಕುರಿತು ತನಿಖೆ ನಡೆಸಿ ಪದವಿ ವಾಪಸ್ ಪಡೆಯಲು ವಿಶ್ವವಿದ್ಯಾನಿಲಯಕ್ಕೆ ಅಧಿಕಾರವಿದೆ. ಸಂಶೋಧನಾ ಪ್ರಬಂಧ ಮಂಡನೆಗೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಮೌಲ್ಯಮಾಪನ, ಮೌಖಿಕ ಪರೀಕ್ಷೆ ನಡೆಸಲು ತಿಂಗಳ ಕಾಲಾವಧಿ ಬೇಕಾಗುತ್ತದೆ.</p>.<p>ಕೋರ್ಸ್ ವರ್ಕ್ ಕಾಲಾವಧಿಯೇ 6 ತಿಂಗಳು. ಇದೆಲ್ಲವನ್ನು ಮೀರಿ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಅದನ್ನು ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ಮೂಡಿದೆ. ವಿಶ್ವವಿದ್ಯಾಲಯವೊಂದು 8 ತಿಂಗಳಿಗೆ ಪಿಎಚ್.ಡಿ ನೀಡಬಹುದಾದರೆ ಎಲ್ಲ ವಿ.ವಿ.ಗಳು ನೀಡಬಹುದು. ಗುಣಮಟ್ಟದ ಉನ್ನತ ಶಿಕ್ಷಣದ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿ ಇಂಥದೊಂದು ಅಧ್ವಾನ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೆಸರು ಹೇಳದ ಶಿಕ್ಷಣ ತಜ್ಞರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ತುಮಕೂರು ವಿಶ್ವವಿದ್ಯಾಲಯ ತನ್ನ ಏಳನೇ ಘಟಿಕೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ನೋಂದಣಿಯಾದ ಎಂಟು ತಿಂಗಳಿಗೇ ಪಿಎಚ್.ಡಿ ಪದವಿ ನೀಡಲು ಮುಂದಾಗಿದೆ. ವಿ.ವಿ.ಯಲ್ಲಿ ನಡೆದ ಘಟಿಕೋತ್ಸವ ಸಿದ್ಧತೆ ಕುರಿತ ಸಭೆಯಲ್ಲಿ ವಿವಿಧ ವಿಷಯಗಳಲ್ಲಿ ಕೇವಲ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ 6 ಮಂದಿಗೆ ಪಿಎಚ್.ಡಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.<br /> <br /> ನಿಕಟಪೂರ್ವ ಕುಲಪತಿ ಡಾ.ಎಸ್.ಸಿ.ಶರ್ಮಾ ಅವಧಿಯಲ್ಲಿ ಈ ಆರು ಮಂದಿಗೂ ಸಂಶೋಧನೆಗೆ ನೋಂದಣಿಯಾದ ಎಂಟು ತಿಂಗಳಿಗೆ ಪದವಿ ನೀಡಲಾಗಿದ್ದು, ತಾತ್ಪೂರ್ತಿಕ ಪದವಿ ಪ್ರಮಾಣ ಪತ್ರವನ್ನು (ಪಿಎಚ್.ಡಿ) ಮೌಖಿಕ ಪರೀಕ್ಷೆ ದಿವಸವೇ ತರಾತುರಿಯಲ್ಲಿ ಪ್ರದಾನ ಮಾಡಲಾಗಿದೆ. ಈ ಕ್ರಮ ರಾಜ್ಯದ ಯಾವ ವಿ.ವಿ.ಯಲ್ಲೂ ಇಲ್ಲ. ಇಂಥ ಸಂಶೋಧನೆಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡುವುದು ಹೇಗೆ? ಯಾರಾದರೂ ಪ್ರಶ್ನಿಸಿದರೆ ವಿಶ್ವವಿದ್ಯಾನಿಲಯ ತಲೆ ತಗ್ಗಿಸಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಕೆಲವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.<br /> <br /> ಡಿ.ಲಿಟ್, ಡಿ.ಎಸ್ಸಿ ಸಂಶೋಧನಾ ಪದವಿ ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಡಾ.ಎಸ್.ಸಿ.ಶರ್ಮಾ ಕುಲಪತಿ ಅವಧಿಯ ಕೇವಲ 4 ವರ್ಷಗಳಲ್ಲಿ 60ಕ್ಕೂ ಹೆಚ್ಚು ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪ್ರದಾನ ಮಾಡಲಾಗಿದೆ. ಶೇ 70ರಷ್ಟು ಡಿಲಿಟ್ ಪದವಿ ಪಡೆದವರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಸಿಂಡಿಕೇಟ್ನ ಮಾಜಿ ಸದಸ್ಯರೊಬ್ಬರು ನೊಂದು ನುಡಿದರು.<br /> <br /> ರಾಜ್ಯದ ಹಳೆಯ, ಪ್ರಮುಖ ವಿ.ವಿ.ಯಾದ ಮೈಸೂರು ವಿ.ವಿ. ಇತಿಹಾಸದಲ್ಲಿ ಇಷ್ಟೊಂದು ಮಂದಿಗೆ ಡಿ.ಲಿಟ್ ಪ್ರದಾನ ಮಾಡಿಲ್ಲ. ಶರ್ಮಾ ಅವಧಿಯಲ್ಲಿ ಪಿಎಚ್.ಡಿ ಪದವಿ ನೀಡಿದ್ದರೂ ಆ ಕುರಿತು ತನಿಖೆ ನಡೆಸಿ ಪದವಿ ವಾಪಸ್ ಪಡೆಯಲು ವಿಶ್ವವಿದ್ಯಾನಿಲಯಕ್ಕೆ ಅಧಿಕಾರವಿದೆ. ಸಂಶೋಧನಾ ಪ್ರಬಂಧ ಮಂಡನೆಗೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಮೌಲ್ಯಮಾಪನ, ಮೌಖಿಕ ಪರೀಕ್ಷೆ ನಡೆಸಲು ತಿಂಗಳ ಕಾಲಾವಧಿ ಬೇಕಾಗುತ್ತದೆ.</p>.<p>ಕೋರ್ಸ್ ವರ್ಕ್ ಕಾಲಾವಧಿಯೇ 6 ತಿಂಗಳು. ಇದೆಲ್ಲವನ್ನು ಮೀರಿ 8 ತಿಂಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಅದನ್ನು ಮೌಲ್ಯಮಾಪನ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ಮೂಡಿದೆ. ವಿಶ್ವವಿದ್ಯಾಲಯವೊಂದು 8 ತಿಂಗಳಿಗೆ ಪಿಎಚ್.ಡಿ ನೀಡಬಹುದಾದರೆ ಎಲ್ಲ ವಿ.ವಿ.ಗಳು ನೀಡಬಹುದು. ಗುಣಮಟ್ಟದ ಉನ್ನತ ಶಿಕ್ಷಣದ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿ ಇಂಥದೊಂದು ಅಧ್ವಾನ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೆಸರು ಹೇಳದ ಶಿಕ್ಷಣ ತಜ್ಞರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>