<p><strong>ನ್ಯೂಯಾರ್ಕ್, (ಐಎಎನ್ಎಸ್):</strong> ಭಯೋತ್ಪಾದಕರ ದಾಳಿಯಲ್ಲಿ ನೆಲಸಮಗೊಂಡ ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡವಿದ್ದ ಸ್ಥಳದಲ್ಲಿ ನಿರ್ಮಿಸಲಾಗಿರುವ 9/11 ಸ್ಮಾರಕವನ್ನು ಸೋಮವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.<br /> <br /> ದುರಂತ ಸಂಭವಿಸಿ ದಶಕ ಸಂದ ಸಂದರ್ಭದಲ್ಲಿ ಇದೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಸ್ಮಾರಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರಿಂದ ಜನಸಾಗರವೇ ಇಲ್ಲಿಗೆ ಹರಿದುಬಂತು.</p>.<p>ದುರಂತದಲ್ಲಿ ಮಡಿದವರನ್ನು ನೆನೆದು ಭಾವಪರವಶರಾದ ಅನೇಕರ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಸ್ಮಾರಕ ರಾಶಿ ರಾಶಿ ಹೂಗುಚ್ಛ ಹಾಗೂ ಸಂದೇಶಗಳಿಂದ ತುಂಬಿತ್ತು. ನ್ಯೂಯಾರ್ಕ್ ಮೇಯರ್ ಮೈಕಲ್ ಬ್ಲೂಮ್ಬರ್ಗ್ ಹಾಗೂ ಸಿಬ್ಬಂದಿ ಖುದ್ದಾಗಿ ಜನರನ್ನು ಬರಮಾಡಿಕೊಂಡರು. <br /> <br /> ಹುಲ್ಲಿನ ಹಾಸಿಗೆ ಮತ್ತು ಮರಗಳಿಂದ ಕಂಗೊಳಿಸುತ್ತಿರುವ ಸ್ಮಾರಕದ ಸ್ಥಳದಲ್ಲಿ ಕೊಳಗಳನ್ನು ನಿರ್ಮಿಸಲಾಗಿದೆ. ದುರಂತದಲ್ಲಿ ಮಡಿದ 2,983 ಜನರ ಸ್ಮರಣಾರ್ಥ ಅವರ ಹೆರುಗಳನ್ನು ಕಂಚಿನ ಫಲಕಗಳಲ್ಲಿ ಕೆತ್ತಿ ಕೊಳಗಳ ಸುತ್ತ ನೇತು ಹಾಕಲಾಗಿದೆ. <br /> <br /> ಪ್ರವೇಶ ಉಚಿತವಾಗಿದ್ದು ಮೊದಲ ದಿನ ಏಳು ಸಾವಿರ ಜನರು ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದರು. ಮುಂದಿನ ತಿಂಗಳಿಗೆ ಸುಮಾರು ನಾಲ್ಕು ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್, (ಐಎಎನ್ಎಸ್):</strong> ಭಯೋತ್ಪಾದಕರ ದಾಳಿಯಲ್ಲಿ ನೆಲಸಮಗೊಂಡ ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡವಿದ್ದ ಸ್ಥಳದಲ್ಲಿ ನಿರ್ಮಿಸಲಾಗಿರುವ 9/11 ಸ್ಮಾರಕವನ್ನು ಸೋಮವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.<br /> <br /> ದುರಂತ ಸಂಭವಿಸಿ ದಶಕ ಸಂದ ಸಂದರ್ಭದಲ್ಲಿ ಇದೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಸ್ಮಾರಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರಿಂದ ಜನಸಾಗರವೇ ಇಲ್ಲಿಗೆ ಹರಿದುಬಂತು.</p>.<p>ದುರಂತದಲ್ಲಿ ಮಡಿದವರನ್ನು ನೆನೆದು ಭಾವಪರವಶರಾದ ಅನೇಕರ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಸ್ಮಾರಕ ರಾಶಿ ರಾಶಿ ಹೂಗುಚ್ಛ ಹಾಗೂ ಸಂದೇಶಗಳಿಂದ ತುಂಬಿತ್ತು. ನ್ಯೂಯಾರ್ಕ್ ಮೇಯರ್ ಮೈಕಲ್ ಬ್ಲೂಮ್ಬರ್ಗ್ ಹಾಗೂ ಸಿಬ್ಬಂದಿ ಖುದ್ದಾಗಿ ಜನರನ್ನು ಬರಮಾಡಿಕೊಂಡರು. <br /> <br /> ಹುಲ್ಲಿನ ಹಾಸಿಗೆ ಮತ್ತು ಮರಗಳಿಂದ ಕಂಗೊಳಿಸುತ್ತಿರುವ ಸ್ಮಾರಕದ ಸ್ಥಳದಲ್ಲಿ ಕೊಳಗಳನ್ನು ನಿರ್ಮಿಸಲಾಗಿದೆ. ದುರಂತದಲ್ಲಿ ಮಡಿದ 2,983 ಜನರ ಸ್ಮರಣಾರ್ಥ ಅವರ ಹೆರುಗಳನ್ನು ಕಂಚಿನ ಫಲಕಗಳಲ್ಲಿ ಕೆತ್ತಿ ಕೊಳಗಳ ಸುತ್ತ ನೇತು ಹಾಕಲಾಗಿದೆ. <br /> <br /> ಪ್ರವೇಶ ಉಚಿತವಾಗಿದ್ದು ಮೊದಲ ದಿನ ಏಳು ಸಾವಿರ ಜನರು ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದರು. ಮುಂದಿನ ತಿಂಗಳಿಗೆ ಸುಮಾರು ನಾಲ್ಕು ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>