<p><strong>ನವದೆಹಲಿ (ಪಿಟಿಐ): </strong>ಕಾಮನ್ವೆಲ್ತ್ ಕ್ರೀಡಾಕೂಟದ ನೇರ ಪ್ರಸಾರದ ಹಕ್ಕು ಪಡೆದಿದ್ದ ಎಸ್ಐಎಸ್ ಲೈವ್/ಜೂಮ್ ಕಮ್ಯುನಿಕೇಷನ್ ಖಾಸಗಿ ಪ್ರಸಾರ ಸಂಸ್ಥೆಗೆ ನೀಡಬೇಕಾಗಿದ್ದ 98.4 ಕೋಟಿ ರೂಪಾಯಿ ಹಣವನ್ನು ಪ್ರಸಾರ ಭಾರತಿ ತಡೆಹಿಡಿದಿದೆ.<br /> <br /> ನೇರ ಪ್ರಸಾರದ ಒಡಂಬಡಿಕೆ ಉಲ್ಲಂಘನೆ ಮತ್ತು ಅವ್ಯವಹಾರಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ನೇಮಕ ಮಾಡಲಾಗಿದ್ದ ಉನ್ನತಾಧಿಕಾರಿ ಸಮಿತಿ ಮಾಡಿದ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಲೋಕಸಭೆಗೆ ತಿಳಿಸಿದರು. <br /> <br /> ನೇರ ಪ್ರಸಾರದ ಹಕ್ಕು ಪಡೆದ ಖಾಸಗಿ ಪ್ರಸಾರ ಕಂಪೆನಿಗೆ ಹೆಚ್ಚುವರಿ ಹಣ ಪಾವತಿಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ಕಾರ್ಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು. <br /> <br /> ಅವ್ಯವಹಾರದಲ್ಲಿ ದೂರದರ್ಶನ ಪ್ರಧಾನ ನಿರ್ದೇಶಕ ಅರುಣಾ ಶರ್ಮಾ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.ಪ್ರಸಾರ ಭಾರತಿ ಮುಖ್ಯ ಅಧಿಕಾರಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಸೋನಿ ಮಂಗಳವಾರ ಲೋಕಸಭೆಗೆ ತಿಳಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕಾಮನ್ವೆಲ್ತ್ ಕ್ರೀಡಾಕೂಟದ ನೇರ ಪ್ರಸಾರದ ಹಕ್ಕು ಪಡೆದಿದ್ದ ಎಸ್ಐಎಸ್ ಲೈವ್/ಜೂಮ್ ಕಮ್ಯುನಿಕೇಷನ್ ಖಾಸಗಿ ಪ್ರಸಾರ ಸಂಸ್ಥೆಗೆ ನೀಡಬೇಕಾಗಿದ್ದ 98.4 ಕೋಟಿ ರೂಪಾಯಿ ಹಣವನ್ನು ಪ್ರಸಾರ ಭಾರತಿ ತಡೆಹಿಡಿದಿದೆ.<br /> <br /> ನೇರ ಪ್ರಸಾರದ ಒಡಂಬಡಿಕೆ ಉಲ್ಲಂಘನೆ ಮತ್ತು ಅವ್ಯವಹಾರಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ನೇಮಕ ಮಾಡಲಾಗಿದ್ದ ಉನ್ನತಾಧಿಕಾರಿ ಸಮಿತಿ ಮಾಡಿದ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಲೋಕಸಭೆಗೆ ತಿಳಿಸಿದರು. <br /> <br /> ನೇರ ಪ್ರಸಾರದ ಹಕ್ಕು ಪಡೆದ ಖಾಸಗಿ ಪ್ರಸಾರ ಕಂಪೆನಿಗೆ ಹೆಚ್ಚುವರಿ ಹಣ ಪಾವತಿಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ಕಾರ್ಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು. <br /> <br /> ಅವ್ಯವಹಾರದಲ್ಲಿ ದೂರದರ್ಶನ ಪ್ರಧಾನ ನಿರ್ದೇಶಕ ಅರುಣಾ ಶರ್ಮಾ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.ಪ್ರಸಾರ ಭಾರತಿ ಮುಖ್ಯ ಅಧಿಕಾರಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಸೋನಿ ಮಂಗಳವಾರ ಲೋಕಸಭೆಗೆ ತಿಳಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>