<p>ಭಿಲ್ವಾರ, ರಾಜಸ್ತಾನ (ಪಿಟಿಐ): ಕರ್ನಾಟಕ ಪುರುಷರ ತಂಡದವರು ಇಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಗುರುವಾರ ರಾತ್ರಿ ನಡೆದ ‘ಬಿ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ 62–93ರಲ್ಲಿ ಪಂಜಾಬ್ ಎದುರು ಸೋತಿತು. ವಿಜಯೀ ತಂಡದ ಪಲ್ಪ್ರೀತ್ ಸಿಂಗ್ 37 ಪಾಯಿಂಟ್ಸ್ ಕಲೆಹಾಕಿದರೆ, ಸತ್ನಮ್ ಸಿಂಗ್ 29 ಪಾಯಿಂಟ್ಸ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.<br /> <br /> ಪ್ರಮುಖ ಆಟಗಾರ ಎ.ಅರವಿಂದ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ರಾಜ್ಯ ತಂಡದ ಪರ ಧೀರಜ್ ಶೆಟ್ಟಿ 13 ಹಾಗೂ ಅನಿಲ್ ಕುಮಾರ್ ಮತ್ತು ಶಶಿ ಕುಮಾರ್ ತಲಾ 8 ಪಾಯಿಂಟ್ಸ್ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.<br /> <br /> ಈ ಪಂದ್ಯದಲ್ಲಿ ಎದುರಾದ ಸೋಲಿನ ಹೊರತಾಗಿಯೂ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದ್ದರಿಂದ ಎಂಟರ ಘಟ್ಟಕ್ಕೆ ಪ್ರವೇಶ ತನ್ನದಾಗಿಸಿಕೊಂಡಿತು.<br /> <br /> <strong>ಮಹಿಳಾ ತಂಡಕ್ಕೆ ನಿರಾಸೆ: </strong>ಮಹಿಳಾ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕರ್ನಾಟಕ 69–94ರಲ್ಲಿ ಛತ್ತೀಸಗಡದ ಎದುರು ಸೋಲು ಅನುಭವಿಸಿತು.<br /> ಛತ್ತೀಸಗಡ ತಂಡದ ಪೂನಂ ಚತುರ್ವೇದಿ 37 ಪಾಯಿಂಟ್ಸ್ ಕಲೆಹಾಕಿದರೆ, ಸಂಗೀತಾ ಕೌರ್ ಹಾಗೂ ಎಲ್.ದೀಪಾ ಕ್ರಮವಾಗಿ 29 ಮತ್ತು 12 ಪಾಯಿಂಟ್ಸ್ ಸಂಗ್ರಹಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.<br /> <br /> ರಾಜ್ಯ ತಂಡದ ಎಲ್.ಎಸ್.ಸವಿತಾ 25, ಪಿ.ಯು.ನವನೀತಾ 14 ಹಾಗೂ ಎಚ್.ಎಂ.ಬಾಂಧವ್ಯ 12 ಪಾಯಿಂಟ್ಸ್ ಗಳಿಸಿ ಪ್ರಬಲ ಪೈಪೋಟಿ ಒಡ್ಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಿಲ್ವಾರ, ರಾಜಸ್ತಾನ (ಪಿಟಿಐ): ಕರ್ನಾಟಕ ಪುರುಷರ ತಂಡದವರು ಇಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಗುರುವಾರ ರಾತ್ರಿ ನಡೆದ ‘ಬಿ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ 62–93ರಲ್ಲಿ ಪಂಜಾಬ್ ಎದುರು ಸೋತಿತು. ವಿಜಯೀ ತಂಡದ ಪಲ್ಪ್ರೀತ್ ಸಿಂಗ್ 37 ಪಾಯಿಂಟ್ಸ್ ಕಲೆಹಾಕಿದರೆ, ಸತ್ನಮ್ ಸಿಂಗ್ 29 ಪಾಯಿಂಟ್ಸ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.<br /> <br /> ಪ್ರಮುಖ ಆಟಗಾರ ಎ.ಅರವಿಂದ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ರಾಜ್ಯ ತಂಡದ ಪರ ಧೀರಜ್ ಶೆಟ್ಟಿ 13 ಹಾಗೂ ಅನಿಲ್ ಕುಮಾರ್ ಮತ್ತು ಶಶಿ ಕುಮಾರ್ ತಲಾ 8 ಪಾಯಿಂಟ್ಸ್ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.<br /> <br /> ಈ ಪಂದ್ಯದಲ್ಲಿ ಎದುರಾದ ಸೋಲಿನ ಹೊರತಾಗಿಯೂ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದ್ದರಿಂದ ಎಂಟರ ಘಟ್ಟಕ್ಕೆ ಪ್ರವೇಶ ತನ್ನದಾಗಿಸಿಕೊಂಡಿತು.<br /> <br /> <strong>ಮಹಿಳಾ ತಂಡಕ್ಕೆ ನಿರಾಸೆ: </strong>ಮಹಿಳಾ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕರ್ನಾಟಕ 69–94ರಲ್ಲಿ ಛತ್ತೀಸಗಡದ ಎದುರು ಸೋಲು ಅನುಭವಿಸಿತು.<br /> ಛತ್ತೀಸಗಡ ತಂಡದ ಪೂನಂ ಚತುರ್ವೇದಿ 37 ಪಾಯಿಂಟ್ಸ್ ಕಲೆಹಾಕಿದರೆ, ಸಂಗೀತಾ ಕೌರ್ ಹಾಗೂ ಎಲ್.ದೀಪಾ ಕ್ರಮವಾಗಿ 29 ಮತ್ತು 12 ಪಾಯಿಂಟ್ಸ್ ಸಂಗ್ರಹಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.<br /> <br /> ರಾಜ್ಯ ತಂಡದ ಎಲ್.ಎಸ್.ಸವಿತಾ 25, ಪಿ.ಯು.ನವನೀತಾ 14 ಹಾಗೂ ಎಚ್.ಎಂ.ಬಾಂಧವ್ಯ 12 ಪಾಯಿಂಟ್ಸ್ ಗಳಿಸಿ ಪ್ರಬಲ ಪೈಪೋಟಿ ಒಡ್ಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>