ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 27-9-1961

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪಂಜಾಬಿ ಸುಬಾ ಬೇಡಿಕೆ ಬಗ್ಗೆ ಸಂಧಾನ ಭಗ್ನ
ಅಮೃತಸರ, ಸೆ. 26 - ಪಂಜಾಬಿ ಸುಬಾ ಬೇಡಿಕೆ ಬಗ್ಗೆ, ಸರ್ಕಾರದೊಡನೆ ತಾವು ನಡೆಸಿದ ಮಾತುಕತೆ ಮುರಿದು ಬಿದ್ದವು ಎಂಬುದಾಗಿ ಅಕಾಲಿದಳದ ಸಲಹೆಗಾರ ಸರ್ದಾರ್ ಗುರ‌್ನಾಂಸಿಂಗ್ ಇಂದು ಇಲ್ಲಿ ಪ್ರಕಟಿಸಿದರು. ಸರ್ಕಾರದ ಸಲಹೆಯನ್ನುಅಕಾಲಿದಳ ಕಾರ್ಯನಿರ್ವಾಹಕ ಸಮಿತಿಯು  ತಿರಸ್ಕರಿಸಿದೆ.

ಅರಸೀಕೆರೆಗೆ ನಟನಟಿಯರು
ಅರಸೀಕೆರೆ, ಸೆ. 26 - ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ನಿಧಿ ಸಂಗ್ರಹಿಸಲು ರಾಜ್ಯಾದ್ಯಂತ ಪ್ರವಾಸ ಹೊರಟಿರುವ ಕನ್ನಡ ಚಲನಚಿತ್ರ ಕಲಾವಿದರು ಇಂದು ಬೆಳಿಗ್ಗೆ ಮೈಸೂರು ನಗರದ ಸಯ್ಯಾಜಿರಾವ್ ರಸ್ತೆ, ಸಂತೆಪೇಟೆ, ಶ್ರೀರಾಮಪೇಟೆ ಹಾಗೂ ಧನ್ವಂತರಿ ರಸ್ತೆಗಳಲ್ಲಿ ನಿಧಿ ಸಂಗ್ರಹಿಸಿದ ಬಳಿಕ ಕೃಷ್ಣರಾಜಪೇಟೆ, ಚನ್ನರಾಯಪಟ್ಟಣ, ಹಾಸನಗಳಿಗೆ ಭೇಟಿಯಿತ್ತು, ಸಂಜೆ ಇಲ್ಲಿಗೆ ಆಗಮಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT