ರಾಜರಾಜೇಶ್ವರಿನಗರ: ವೈಕುಂಠ ಏಕಾದಶಿ ಪ್ರಯುಕ್ತ ಮುದ್ದಿನಪಾಳ್ಯದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಬೆಳಿಗ್ಗೆ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನ ಟ್ರಸ್ಟ್ ವತಿಯಿಂದ ಲಡ್ಡು ಹಾಗೂ ಪ್ರಸಾದ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಎಂ.ವಿ.ಜಯಪ್ರಕಾಶ್ಬಾಬು, ಪ್ರಧಾನ ಅರ್ಚಕ ಮಧುಸೂಧನಭಟ್ ಟ್ರಸ್ಟಿಗಳಾದ ಎಂ.ವಿ.ವೆಂಕಟೇಶ್, ಕೇಶವ, ಹರ್ಷ, ಪಾಲಿಕೆ ಸದಸ್ಯ ಡಿ.ರಾಜಣ್ಣ ಇತರರು ಇದ್ದರು.
ಕೆಂಗುಂಟೆ: ಇಲ್ಲಿನ ವೆಂಕಟೇಶ್ವರಸ್ವಾಮಿಗೆ ಉಯ್ಯಾಲೆ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿದವು. ಲಕ್ಷ್ಮೀವೆಂಕಟೇಶ್ವರ ಗುಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪಿ.ಕಾಳೇಗೌಡ, ಹನುಮಂತರಾಯಪ್ಪ, ಹನುಮೇಗೌಡ, ಮೋಹನ್ ಕುಮಾರ್, ಎಂ.ಪಿ.ಪದ್ಮನಾಭ ಇತರರು ಇದ್ದರು.