ಕಾಸರಗೋಡು: ಇಲ್ಲಿನ ಸಿಪಿಸಿಆರ್ಐಯಲ್ಲಿ ಓಣಂ ಆಚರಣೆ ಕಾರ್ಯಕ್ರಮವನ್ನು ಭಾನುವಾರ ಸಾಹಿತಿ ವಾಸು ಚೇರೋಡ್ ಉದ್ಘಾಟಿಸಿದರು. ಸಿಪಿಸಿಆರ್ಐ ನಿರ್ದೇಶಕ ಡಾ.ಜಾರ್ಜ್ ವಿ.ಥಾಮಸ್ ಅಧ್ಯಕ್ಷತೆ ವಹಿಸಿದರು.
ಗೋವಾದ ಐಸಿಎಆರ್ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎನ್.ಪಿ.ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಿಸಿಆರ್ಐ ಸಿಬ್ಬಂದಿಗಳಿಂದ ಓಣಂ ಹಾಡು ಮತ್ತು ತಿರುವಾದಿರ ನೃತ್ಯ ಪ್ರದರ್ಶನ ರಂಜಿಸಿತು. ಹೂಗಳ ರಂಗೋಲಿ, ಹಗ್ಗಜಗ್ಗಾಟ, ಸಾಂಪ್ರದಾಯಿಕ ‘ಓಣಂ ಔತಣ ಕೂಟ’ ನಡೆಯಿತು.