ಭಾರತವು ಚೀಣವನ್ನು ಧ್ವಂಸ ಮಾಡುವುದು ಸಾಧ್ಯ
ಹೈದ್ರಾಬಾದ್, ಡಿ. 16- ಭಾರತವು ಚೀಣವನ್ನು ಸಂಪೂರ್ಣವಾಗಿ ಧ್ವಂಸ ಮಾಡಬಲ್ಲುದೆಂದು ಇಂದು ಇಲ್ಲಿ ತಿಳಿಸಿದ ಅರ್ಥಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು ಸಮಯ ಬಂದರೆ ಪುಡಿ-ಪುಡಿ ಮಾಡಬಲ್ಲುದು ಎಂದೂ ಘೋಷಿಸಿದರು.
ಕರ್ನಾಟಕಕ್ಕೆ ಮಾರುಹೋದ ಬಂಗಾಳಿ!
ಬೆಂಗಳೂರು, ಡಿ. 16- ಕರ್ನಾಟಕದ ಬನವಾಸಿಯ ಬಗ್ಗೆ ತನ್ನ ಉತ್ಕಟ ಅಭಿಮಾನವನ್ನು ಕವಿ ಪಂಪ ವ್ಯಕ್ತಪಡಿಸಿ ಸಹಸ್ರ ವರ್ಷಗಳಾದವು. ಬಂಗಾಳದ ಮಂತ್ರಿಯೊಬ್ಬರು ಇಂದು ಕರ್ನಾಟಕದ ಬಗ್ಗೆ ಆಡಿದ ಮಾತು ಅದನ್ನು ನೆನಪಿಗೆ ತಂದುಕೊಟ್ಟಿತು.