ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆಗೆ 25 ಲಕ್ಷ ರೂ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ

Last Updated 20 ಫೆಬ್ರುವರಿ 2012, 11:30 IST
ಅಕ್ಷರ ಗಾತ್ರ

ಮುಂಬೈ, (ಪಿಟಿಐ):  ದೆಹಲಿ ಮೂಲದ ಪ್ರತಿಷ್ಠಾನವೊಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಅವರಿಗೆ 25 ಲಕ್ಷ ರೂಪಾಯಿ ಪುರಸ್ಕಾರದ ಪ್ರಶಸ್ತಿ ನೀಡಿ ಗೌರವಿಸಲಿದೆ.

ಸೀತಾರಾಮ ಜಿಂದಾಲ್ ಪ್ರತಿಷ್ಠಾನವು  ಇದೇ ತಿಂಗಳು 23ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಿದೆ ಎಂದು  ರಾಳೆಗಣಸಿದ್ಧಿ ಗ್ರಾಮದಲ್ಲಿರುವ ಹಜಾರೆ ಅವರ ನಿಕಟವರ್ತಿ ದತ್ತಾ ಅವಾರಿ ಈ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆ ಸಮಾರಂಭದ ಒಂದು ದಿನ ಮೊದಲೇ ಫೆ. 22 ರಂದು ದೆಹಲಿಯಲ್ಲಿ ಆಯೋಜಿಸಲಾಗಿರುವ ಅಣ್ಣಾ ತಂಡದ ಕೋರ್ ಸಮಿತಿಯ ಸಭೆಯಲ್ಲೂ ಹಜಾರೆ ಅವರು ಪಾಲ್ಗೊಳ್ಳುವರೆಂದು ಅವಾರಿ ಅವರು ತಿಳಿಸಿದ್ದಾರೆ.

ಹಜಾರೆ ಅವರಿಗೆ ಕಫ. ಬೆನ್ನುನೋವು ಮತ್ತು ಕಾಲು, ಕೈಗಳಲ್ಲಿ ಬಾವು ಕಾಣಿಸಿಕೊಂಡಿತ್ತು. ಅದಕ್ಕಾಗಿ ಬೆಂಗಳೂರಿನ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಣ್ನಾ ಹಜಾರೆ ಅವರು ಕೋರ್ ಸಮಿತಿಯ ಸದಸ್ಯ ಅರವಿಂದ ಕ್ರೇಜ್ರಿವಾಲ್ ಅವರೊಂದಿಗೆ ಶನಿವಾರ ತಮ್ಮ ರಾಳೆಗಣಸಿದ್ಧಿ ಗ್ರಾಮಕ್ಕೆ  ಹಿಂತಿರುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT