<p>ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸದ ಶುಕ್ಲಪಕ್ಷದಲ್ಲಿ ‘ಮಾಘ ಶುದ್ಧ ಏಕಾದಶಿ’ ಅಥವಾ ‘ಜಯ ಏಕಾದಶಿ’ಯನ್ನು ಆಚರಿಸಲಾಗುತ್ತದೆ. 2025ರ ಜನವರಿ 29ರಂದು ಜಯ ಏಕಾದಶಿಯ ದಿನವಾಗಿದೆ. ಹಾಗಾದರೆ ಜಯ ಏಕಾದಶಿಯ ಮಹತ್ವ, ಪೂಜಾ ವಿಧಾನ ಹಾಗೂ ಲಾಭಗಳ ಕುರಿತು ತಿಳಿಯೋಣ.</p><p><strong>ಪೂಜಾ ವಿಧಾನ</strong></p><p>ಏಕಾದಶಿ ವಿಷ್ಣುವಿನ ಆರಾಧನೆಯ ದಿನ. ಈ ದಿನ ವಿಷ್ಣುವಿನ ಪೂಜೆ ಮಾಡಲು ವಿಗ್ರಹಕ್ಕೆ ನೀರಿನಿಂದ ಅಭಿಷೇಕ ಮಾಡಿ. ಫೋಟೊ ಇಟ್ಟಿದ್ದರೆ ಗಂಗಾಜಲವನ್ನು ಚಿಮುಕಿಸಿರಿ. ವಿಷ್ಣುವಿಗೆ ಶ್ರೀಗಂಧ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ ತುಪ್ಪದ ದೀಪವನ್ನು ಹಚ್ಚಿ.<br>ಈ ದಿನ ಉಪವಾಸ ವ್ರತ ಮಾಡುವುದಾಗಿ ಸಂಕಲ್ಪ ತೆಗೆದುಕೊಂಡು ವ್ರತವನ್ನು ಪ್ರಾರಂಭಿಸಿ.<br>ವಿಷ್ಣುವಿಗೆ ಆರತಿಯನ್ನು ಬೆಳಗಿ. ಜೊತೆಗೆ ಲಕ್ಷ್ಮೀಯನ್ನು ಪೂಜಿಸಿ. ನಂತರ ಮನೆಯಲ್ಲಿರುವ ತುಳಸಿಗೆ ನೈವೇದ್ಯ ಮಾಡಿ ಪೂಜೆ ಕೊನೆಗೊಳಿಸಿ.</p><p><strong>ಪೂಜಾ ಸಮಯ</strong></p><p>ಏಕಾದಶಿಯ ಹಿಂದಿನ ದಿನ ರಾತ್ರಿ 12.47 ರಿಂದ 29ರ ಮಧ್ಯಾಹ್ನ 11.59ರ ವರೆಗೆ ಶುಭ ಕಾಲವಿರುತ್ತದೆ. ಈ ಸಮಯದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.</p><p>ಈ ದಿನ ನಾರಾಯಣನಿಗೆ ಪೂಜೆಯನ್ನು ಸಲ್ಲಿಸಿ, ಹರಿ ನಾಮ ಸ್ಮರಣೆ ಮಾಡಿದರೆ ಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸಲಿದೆ ಎಂಬ ನಂಬಿಕೆ ಇದೆ. ಈ ದಿನ ಮಾಂಸಹಾರವನ್ನು ಸೇವಿಸಬಾರದು. ಕೂದಲು ಹಾಗೂ ಉಗುರನ್ನು ಕತ್ತರಿಸಬಾರದು.</p><p><strong>ಏಕಾದಶಿಯಂದು ಈ ಮಂತ್ರ ಜಪಿಸಿ:</strong></p><p>‘<em>ಓಂ ಶ್ರೀ ಕೃಷ್ಣಾಯ ವಾಸುದೇವಾಯ ಹರೇ ಪರಮಾತ್ಮನೇ’</em></p><p><em>‘ಪ್ರಣತ: ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ ’</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸದ ಶುಕ್ಲಪಕ್ಷದಲ್ಲಿ ‘ಮಾಘ ಶುದ್ಧ ಏಕಾದಶಿ’ ಅಥವಾ ‘ಜಯ ಏಕಾದಶಿ’ಯನ್ನು ಆಚರಿಸಲಾಗುತ್ತದೆ. 2025ರ ಜನವರಿ 29ರಂದು ಜಯ ಏಕಾದಶಿಯ ದಿನವಾಗಿದೆ. ಹಾಗಾದರೆ ಜಯ ಏಕಾದಶಿಯ ಮಹತ್ವ, ಪೂಜಾ ವಿಧಾನ ಹಾಗೂ ಲಾಭಗಳ ಕುರಿತು ತಿಳಿಯೋಣ.</p><p><strong>ಪೂಜಾ ವಿಧಾನ</strong></p><p>ಏಕಾದಶಿ ವಿಷ್ಣುವಿನ ಆರಾಧನೆಯ ದಿನ. ಈ ದಿನ ವಿಷ್ಣುವಿನ ಪೂಜೆ ಮಾಡಲು ವಿಗ್ರಹಕ್ಕೆ ನೀರಿನಿಂದ ಅಭಿಷೇಕ ಮಾಡಿ. ಫೋಟೊ ಇಟ್ಟಿದ್ದರೆ ಗಂಗಾಜಲವನ್ನು ಚಿಮುಕಿಸಿರಿ. ವಿಷ್ಣುವಿಗೆ ಶ್ರೀಗಂಧ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ ತುಪ್ಪದ ದೀಪವನ್ನು ಹಚ್ಚಿ.<br>ಈ ದಿನ ಉಪವಾಸ ವ್ರತ ಮಾಡುವುದಾಗಿ ಸಂಕಲ್ಪ ತೆಗೆದುಕೊಂಡು ವ್ರತವನ್ನು ಪ್ರಾರಂಭಿಸಿ.<br>ವಿಷ್ಣುವಿಗೆ ಆರತಿಯನ್ನು ಬೆಳಗಿ. ಜೊತೆಗೆ ಲಕ್ಷ್ಮೀಯನ್ನು ಪೂಜಿಸಿ. ನಂತರ ಮನೆಯಲ್ಲಿರುವ ತುಳಸಿಗೆ ನೈವೇದ್ಯ ಮಾಡಿ ಪೂಜೆ ಕೊನೆಗೊಳಿಸಿ.</p><p><strong>ಪೂಜಾ ಸಮಯ</strong></p><p>ಏಕಾದಶಿಯ ಹಿಂದಿನ ದಿನ ರಾತ್ರಿ 12.47 ರಿಂದ 29ರ ಮಧ್ಯಾಹ್ನ 11.59ರ ವರೆಗೆ ಶುಭ ಕಾಲವಿರುತ್ತದೆ. ಈ ಸಮಯದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.</p><p>ಈ ದಿನ ನಾರಾಯಣನಿಗೆ ಪೂಜೆಯನ್ನು ಸಲ್ಲಿಸಿ, ಹರಿ ನಾಮ ಸ್ಮರಣೆ ಮಾಡಿದರೆ ಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸಲಿದೆ ಎಂಬ ನಂಬಿಕೆ ಇದೆ. ಈ ದಿನ ಮಾಂಸಹಾರವನ್ನು ಸೇವಿಸಬಾರದು. ಕೂದಲು ಹಾಗೂ ಉಗುರನ್ನು ಕತ್ತರಿಸಬಾರದು.</p><p><strong>ಏಕಾದಶಿಯಂದು ಈ ಮಂತ್ರ ಜಪಿಸಿ:</strong></p><p>‘<em>ಓಂ ಶ್ರೀ ಕೃಷ್ಣಾಯ ವಾಸುದೇವಾಯ ಹರೇ ಪರಮಾತ್ಮನೇ’</em></p><p><em>‘ಪ್ರಣತ: ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ ’</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>