‘ಪರಿಚಯನೇ ಇಲ್ಲ ಅಂದ್ಮೇಲೆ, ನಿಮ್ ಹತ್ರ ನಾನ್ಯಾಕ್ ಮಾತಾಡ್ಬೇಕು’ ಎಂದು ಹೇಳಿ ಜಾವೀದ್ ಮುಂದೆ ಸಾಗಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು, ಚಾಕುವಿನಿಂದ ಹೊಟ್ಟೆ ಹಾಗೂ ತೊಡೆಗೆ ಇರಿದು ಪರಾರಿಯಾಗಿದ್ದರು. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದ ಜಾವೀದ್, ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.