‘ಸರ್ಕಾರವು ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆ ಪ್ರಮಾಣವನ್ನು ತೀರಾ ಹೆಚ್ಚಿನ ಮಟ್ಟಕ್ಕೆ ಏರಿಸಿದೆ. ಈ ಪ್ರಮಾಣದ ತೆರಿಗೆ ಸಮರ್ಥನೀಯವಲ್ಲ. ನಾವು ಮೂರನೆಯ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಕೈಹಾಕುವುದಿಲ್ಲ. ಏಕೆಂದರೆ, ನಾವು ಈಗಿರುವ ಘಟಕಗಳ ಸಾಮರ್ಥ್ಯವನ್ನೇಪೂರ್ಣವಾಗಿ ಬಳಸಿಕೊಂಡಿಲ್ಲ. ಈಗಿರುವ ತೆರಿಗೆ ಪ್ರಮಾಣದಿಂದಾಗಿ, ಇಷ್ಟು ತೆರಿಗೆ ಒಪ್ಪಿಕೊಳ್ಳಿ, ಇಲ್ಲವೇ ಸುಮ್ಮನಿರಿ ಎಂಬ ಸಂದೇಶ ರವಾನೆ ಆಗುತ್ತಿದೆ’ ಎಂದು ಟಿಕೆಎಂನ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಹೇಳಿದರು.