<p><strong>ಬೆಂಗಳೂರು:</strong> ಮಹಾನಗರದಲ್ಲಿ ಕಳೆದ ಬಾರಿ ಮಳೆ ಸುರಿದಾಗ ಪ್ರವಾಹ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣ ಹೂಳು ತುಂಬಿದ್ದ ರಾಜಕಾಲುವೆಗಳು. ಈ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದುಹೋಗದ ಪರಿಣಾಮ ಜನ ಸಂಕಷ್ಟ ಎದುರಿಸಬೇಕಾಯಿತು. ಮಳೆಗೂ ಮುನ್ನವೇ ಈ ಬಾರಿ ಹೂಳೆತ್ತಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬುದು ರಾಜಕಾಲುವೆಗಳ ಆಸುಪಾಸಿನ ನಿವಾಸಿಗಳ ದೂರು.</p>.<p>‘ರಾಜಕಾಲುವೆ ಅಥವಾ ಕೆರೆಗಳ ಹೂಳೆತ್ತುವ ಕಾರ್ಯದ ಗುತ್ತಿಗೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ನೀಡಬೇಕು. ಅವರಿಗೆ ಈ ವಿಚಾರದಲ್ಲಿ ಹೆಚ್ಚು ತಿಳಿವಳಿಕೆ ಇರುತ್ತದೆ. ಆದರೆ, ರಸ್ತೆ ಮಾಡುವವರು, ಫುಟ್ಪಾತ್ ನಿರ್ಮಿಸುವಂತಹ ಕಂಟ್ರಾಕ್ಟರ್ಗಳಿಗೆ ಇದರ ಗುತ್ತಿಗೆ ನೀಡಲಾಗಿದೆ. ಹೀಗಾಗಿ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ದೂರುತ್ತಾರೆ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್. </p>.<p>‘ರಾಜಕಾಲುವೆಗಳಿಂದ ತೆಗೆದ ಹೂಳನ್ನು ಎಲ್ಲಿ ಹಾಕಲಾಗುತ್ತಿದೆ ಎಂಬ ಮಾಹಿತಿಯೂ ಇಲ್ಲ. ಹೂಳನ್ನು ಕ್ವಾರಿಯಲ್ಲಿ ಸುರಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಅಲ್ಲದೆ, ಸ್ಥಳೀಯರ ಅನುಮತಿಯನ್ನೂ ಪಡೆಯಬೇಕು. ಈ ಅಂಶಗಳನ್ನು ಪಾಲಿಸದೆಯೇ 2.3 ಲಕ್ಷ ಟನ್ ಹೂಳನ್ನು ಕಾಲುವೆಗಳಿಂದ ಎತ್ತಿ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವ ಗಮನಿಸಿದರೆ, ಇಷ್ಟು ಹೂಳು ವಿಲೇವಾರಿ ಆಗಿಲ್ಲದಿರುವುದು ಗಮನಕ್ಕೆ ಬರುತ್ತದೆ’ ಎಂದು ಅವರು ಹೇಳುತ್ತಾರೆ.</p>.<p><strong>ವಾರ್ಷಿಕ ನಿರ್ವಹಣಾ ಕೇಂದ್ರ:</strong>ಹೂಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗಿದೆ. ಜೋರು ಮಳೆಯಾದರೂ, ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.</p>.<p>‘ಎಲ್ಲ ವಲಯಗಳಲ್ಲಿಯೂ ಪ್ರತಿದಿನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈಗಾಗಲೇ 11,700ಕ್ಕೂ ಹೆಚ್ಚು ಟ್ರಕ್ ಲೋಡ್ಗಳಷ್ಟು ಹೂಳನ್ನು ಹೊರತೆಗೆಯಲಾಗಿದೆ. ಇದಕ್ಕಾಗಿಯೇ ವಾರ್ಷಿಕ ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ಕಳೆದ ಬಾರಿ ನಾಯಂಡಹಳ್ಳಿ, ಓಕಳಿಪುರ ಜಂಕ್ಷನ್ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಬಾರಿ ಈ ಪ್ರದೇಶಗಳಲ್ಲಿ ಅಂತಹ ಸಮಸ್ಯೆಯಾಗಿಲ್ಲ’ ಎಂದು ಅವರು ತಿಳಿಸಿದರು.</p>.<p>‘ಮಡಿವಾಳ, ಸಿಲ್ಕ್ಬೋರ್ಡ್ ಜಂಕ್ಷನ್, ಅಗರಕೆರೆ, ಜಕ್ಕಸಂದ್ರದಲ್ಲಿಯೂ ಹೂಳು ತೆಗೆಯಲಾಗಿದೆ. ಆದರೆ, ಜನ ಮತ್ತೆ ಕಸ ಸುರಿಯುತ್ತಿರುವುದರಿಂದ ಸಮಸ್ಯೆಯಾಗಿದೆ’ ಎಂದು ಅವರು ಹೇಳಿದರು.</p>.<p>‘ಮಹಾನಗರದ ಉತ್ತರ ಭಾಗದ ಹೂಳು ಅಥವಾ ತ್ಯಾಜ್ಯವನ್ನು ಯಲಹಂಕದ ಬೆಟ್ಟಹಲಸೂರು ಪ್ರದೇಶದಲ್ಲಿ ಹಾಕಲಾಗುತ್ತಿದೆ. ಬೆಲ್ಲಹಳ್ಳಿ ಕ್ವಾರಿಯಲ್ಲಿ ಪ್ಲಾಸ್ಟಿಕ್, ಕಸ, ಬಟ್ಟೆ ಮುಂತಾದ ಘನತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ದಕ್ಷಿಣ ಭಾಗದಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಅಂಜನಾಪುರ ಕ್ವಾರಿಗೆ ಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದರು.</p>.<p><strong>‘ತೆಗೆದ ಹೂಳು ರಾಮನಗರ ಬೆಟ್ಟದಂತಾಗಬೇಕಿತ್ತು’</strong><br />‘135 ದಿನಗಳಲ್ಲಿ 11,733 ಟ್ರಕ್ ಲೋಡ್ಗಳಷ್ಟು ಅಂದರೆ, 2.3 ಲಕ್ಷ ಟನ್ಗಳಷ್ಟು ಹೂಳನ್ನು ತೆಗೆದು ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂದರೆ, ಈ ಹೂಳನ್ನು ಹಾಕಿದ ಪ್ರದೇಶ ರಾಮನಗರ ಬೆಟ್ಟದಂತೆ ಕಾಣಬೇಕು. ಆದರೆ, ಇಷ್ಟು ಹೂಳು ಎಲ್ಲಿಯೂ ಕಾಣುತ್ತಿಲ್ಲ’ ಎನ್ನುತ್ತಾರೆ ಅಮರೇಶ್.</p>.<p>‘135 ದಿನಗಳಲ್ಲಿ ಇಷ್ಟು ಪ್ರಮಾಣದ ಹೂಳು ತೆಗೆದಿರಬೇಕೆಂದರೆ, ಪ್ರತಿ ದಿನ 85 ಲೋಡ್ ಸಾಗಿಸಬೇಕು. ಬೆಂಗಳೂರಿನಲ್ಲಿ ಇಷ್ಟು ಟಿಪ್ಪರ್ಗಳು ಇಲ್ಲ. ಇದ್ದರೂ, ಇಷ್ಟು ಹೂಳು ಸಾಗಣೆಯಾಗಿದ್ದರೆ ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಆದರೆ, ಇದು ಯಾರ ಗಮನಕ್ಕೂ ಬಂದಿಲ್ಲ. ರಾಜಕಾಲುವೆಗಳ ನಿರ್ವಹಣೆಗೆಂದೇ ₹38 ಕೋಟಿಯನ್ನು ವ್ಯಯಿಸಲಾಗಿದೆ’ ಎಂದರು.</p>.<p>ಹೂಳು ತೆಗೆಯುವ ಕಾರ್ಯದಲ್ಲಿ ಖಂಡಿತಾ ಅವ್ಯವಹಾರವಾಗಿದೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಅವರು ದೂರು ನೀಡಿದ್ದಾರೆ.</p>.<p>‘ಹೂಳೆತ್ತುವ ಕಾರ್ಯದ ಗುತ್ತಿಗೆ ಪಡೆದವರು, ಪ್ರತಿಯೊಂದು ವಲಯಕ್ಕೂ ಸುಮಾರು 800 ಕಾರ್ಮಿಕರನ್ನು ಒದಗಿಸಿ ಕೆಲಸ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದರೆ, ಒಟ್ಟು 8 ವಲಯಗಳಿಂದ 6,400 ಮಂದಿ ಈ ಕಾರ್ಯ ನಿರ್ವಹಿಸಿದಂತಾಗುತ್ತದೆ. ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು’ ಎಂದು ಅವರು ಒತ್ತಾಯಿಸಿದರು.<br />ಜಿಯೊ ಸ್ಟ್ಯಾಂಪ್–ಸೆನ್ಸರ್ ನೆರವು</p>.<p>ಮಳೆ ಹಾನಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕಾರಿಗಳು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.</p>.<p>‘ಮಳೆ ಹಾನಿ ಪರಿಹಾರ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಒಂದನ್ನು ರಚಿಸಲಾಗಿದೆ. ಜಿಯೊ ಸ್ಟ್ಯಾಂಪ್ ಆ್ಯಪ್ ಮೂಲಕ ಫೋಟೊ ತೆಗೆದು ಈ ಗ್ರೂಪ್ನಲ್ಲಿ ಹಾಕಲಾಗುತ್ತಿದೆ. ಈ ಆ್ಯಪ್ ಮೂಲಕ ತೆಗೆದ ಫೋಟೊದಲ್ಲಿ ಸ್ಥಳದ ಮಾಹಿತಿ, ಸಮಯ ಎಲ್ಲವೂ ದಾಖಲಾಗುತ್ತಿದೆ. ಯಾವ ಮೋರಿ ಮೊದಲು ಹೇಗಿತ್ತು, ಹೂಳು ಎತ್ತಿದ ಮೇಲೆ ಹೇಗಾಗಿದೆ ಎಂಬ ಚಿತ್ರಣ ಇದರಲ್ಲಿ ಸಿಗುತ್ತದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಹೇಳಿದರು.</p>.<p><strong>ಸೆನ್ಸರ್ ಅಳವಡಿಕೆ:</strong>‘ನಗರದ ನಾಲ್ಕು ದಿಕ್ಕುಗಳಲ್ಲಿ ಸೆನ್ಸರ್ ಅಳವಡಿಸಿ, ಮೊಬೈಲ್ ಫೋನ್ಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ನಗರದ ದಕ್ಷಿಣ ಭಾಗದಲ್ಲಿ ಮಳೆ ಬಂದಾಗ, ಉತ್ತರದಲ್ಲಿ ಇರುವುದಿಲ್ಲ. ಅದೇ ರೀತಿ, ಪೂರ್ವ ಭಾಗದಲ್ಲಿ ಮಳೆ ಇರದಿದ್ದರೂ, ಪಶ್ಚಿಮದಲ್ಲಿ ಸುರಿಯುತ್ತಿರುತ್ತದೆ. ಈ ಸೆನ್ಸರ್ಗಳನ್ನು ಅಳವಡಿಸುವುದರಿಂದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಮೊಬೈಲ್ಗೆ ರವಾನೆಯಾಗುತ್ತದೆ. ಒಂದೊಂದು ವಲಯದಲ್ಲಿ 10 ಕಾರ್ಮಿಕರನ್ನು ನಿಯೋಜಿಸುವ ಬದಲು, ಯಾವ ಭಾಗದಲ್ಲಿ ಮಳೆ ಬರುತ್ತದೆಯೋ ಎಲ್ಲರನ್ನೂ ಅಲ್ಲಿಗೇ ಕಳುಹಿಸಿದರೆ ಪರಿಹಾರ ಕಾರ್ಯ ಸುಲಭವಾಗುತ್ತದೆ’ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹಾನಗರದಲ್ಲಿ ಕಳೆದ ಬಾರಿ ಮಳೆ ಸುರಿದಾಗ ಪ್ರವಾಹ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣ ಹೂಳು ತುಂಬಿದ್ದ ರಾಜಕಾಲುವೆಗಳು. ಈ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದುಹೋಗದ ಪರಿಣಾಮ ಜನ ಸಂಕಷ್ಟ ಎದುರಿಸಬೇಕಾಯಿತು. ಮಳೆಗೂ ಮುನ್ನವೇ ಈ ಬಾರಿ ಹೂಳೆತ್ತಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬುದು ರಾಜಕಾಲುವೆಗಳ ಆಸುಪಾಸಿನ ನಿವಾಸಿಗಳ ದೂರು.</p>.<p>‘ರಾಜಕಾಲುವೆ ಅಥವಾ ಕೆರೆಗಳ ಹೂಳೆತ್ತುವ ಕಾರ್ಯದ ಗುತ್ತಿಗೆಯನ್ನು ಹಿನ್ನೀರು ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ನೀಡಬೇಕು. ಅವರಿಗೆ ಈ ವಿಚಾರದಲ್ಲಿ ಹೆಚ್ಚು ತಿಳಿವಳಿಕೆ ಇರುತ್ತದೆ. ಆದರೆ, ರಸ್ತೆ ಮಾಡುವವರು, ಫುಟ್ಪಾತ್ ನಿರ್ಮಿಸುವಂತಹ ಕಂಟ್ರಾಕ್ಟರ್ಗಳಿಗೆ ಇದರ ಗುತ್ತಿಗೆ ನೀಡಲಾಗಿದೆ. ಹೀಗಾಗಿ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ದೂರುತ್ತಾರೆ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್. </p>.<p>‘ರಾಜಕಾಲುವೆಗಳಿಂದ ತೆಗೆದ ಹೂಳನ್ನು ಎಲ್ಲಿ ಹಾಕಲಾಗುತ್ತಿದೆ ಎಂಬ ಮಾಹಿತಿಯೂ ಇಲ್ಲ. ಹೂಳನ್ನು ಕ್ವಾರಿಯಲ್ಲಿ ಸುರಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಅಲ್ಲದೆ, ಸ್ಥಳೀಯರ ಅನುಮತಿಯನ್ನೂ ಪಡೆಯಬೇಕು. ಈ ಅಂಶಗಳನ್ನು ಪಾಲಿಸದೆಯೇ 2.3 ಲಕ್ಷ ಟನ್ ಹೂಳನ್ನು ಕಾಲುವೆಗಳಿಂದ ಎತ್ತಿ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವ ಗಮನಿಸಿದರೆ, ಇಷ್ಟು ಹೂಳು ವಿಲೇವಾರಿ ಆಗಿಲ್ಲದಿರುವುದು ಗಮನಕ್ಕೆ ಬರುತ್ತದೆ’ ಎಂದು ಅವರು ಹೇಳುತ್ತಾರೆ.</p>.<p><strong>ವಾರ್ಷಿಕ ನಿರ್ವಹಣಾ ಕೇಂದ್ರ:</strong>ಹೂಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗಿದೆ. ಜೋರು ಮಳೆಯಾದರೂ, ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.</p>.<p>‘ಎಲ್ಲ ವಲಯಗಳಲ್ಲಿಯೂ ಪ್ರತಿದಿನ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಈಗಾಗಲೇ 11,700ಕ್ಕೂ ಹೆಚ್ಚು ಟ್ರಕ್ ಲೋಡ್ಗಳಷ್ಟು ಹೂಳನ್ನು ಹೊರತೆಗೆಯಲಾಗಿದೆ. ಇದಕ್ಕಾಗಿಯೇ ವಾರ್ಷಿಕ ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ಕಳೆದ ಬಾರಿ ನಾಯಂಡಹಳ್ಳಿ, ಓಕಳಿಪುರ ಜಂಕ್ಷನ್ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಬಾರಿ ಈ ಪ್ರದೇಶಗಳಲ್ಲಿ ಅಂತಹ ಸಮಸ್ಯೆಯಾಗಿಲ್ಲ’ ಎಂದು ಅವರು ತಿಳಿಸಿದರು.</p>.<p>‘ಮಡಿವಾಳ, ಸಿಲ್ಕ್ಬೋರ್ಡ್ ಜಂಕ್ಷನ್, ಅಗರಕೆರೆ, ಜಕ್ಕಸಂದ್ರದಲ್ಲಿಯೂ ಹೂಳು ತೆಗೆಯಲಾಗಿದೆ. ಆದರೆ, ಜನ ಮತ್ತೆ ಕಸ ಸುರಿಯುತ್ತಿರುವುದರಿಂದ ಸಮಸ್ಯೆಯಾಗಿದೆ’ ಎಂದು ಅವರು ಹೇಳಿದರು.</p>.<p>‘ಮಹಾನಗರದ ಉತ್ತರ ಭಾಗದ ಹೂಳು ಅಥವಾ ತ್ಯಾಜ್ಯವನ್ನು ಯಲಹಂಕದ ಬೆಟ್ಟಹಲಸೂರು ಪ್ರದೇಶದಲ್ಲಿ ಹಾಕಲಾಗುತ್ತಿದೆ. ಬೆಲ್ಲಹಳ್ಳಿ ಕ್ವಾರಿಯಲ್ಲಿ ಪ್ಲಾಸ್ಟಿಕ್, ಕಸ, ಬಟ್ಟೆ ಮುಂತಾದ ಘನತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ದಕ್ಷಿಣ ಭಾಗದಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಅಂಜನಾಪುರ ಕ್ವಾರಿಗೆ ಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದರು.</p>.<p><strong>‘ತೆಗೆದ ಹೂಳು ರಾಮನಗರ ಬೆಟ್ಟದಂತಾಗಬೇಕಿತ್ತು’</strong><br />‘135 ದಿನಗಳಲ್ಲಿ 11,733 ಟ್ರಕ್ ಲೋಡ್ಗಳಷ್ಟು ಅಂದರೆ, 2.3 ಲಕ್ಷ ಟನ್ಗಳಷ್ಟು ಹೂಳನ್ನು ತೆಗೆದು ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂದರೆ, ಈ ಹೂಳನ್ನು ಹಾಕಿದ ಪ್ರದೇಶ ರಾಮನಗರ ಬೆಟ್ಟದಂತೆ ಕಾಣಬೇಕು. ಆದರೆ, ಇಷ್ಟು ಹೂಳು ಎಲ್ಲಿಯೂ ಕಾಣುತ್ತಿಲ್ಲ’ ಎನ್ನುತ್ತಾರೆ ಅಮರೇಶ್.</p>.<p>‘135 ದಿನಗಳಲ್ಲಿ ಇಷ್ಟು ಪ್ರಮಾಣದ ಹೂಳು ತೆಗೆದಿರಬೇಕೆಂದರೆ, ಪ್ರತಿ ದಿನ 85 ಲೋಡ್ ಸಾಗಿಸಬೇಕು. ಬೆಂಗಳೂರಿನಲ್ಲಿ ಇಷ್ಟು ಟಿಪ್ಪರ್ಗಳು ಇಲ್ಲ. ಇದ್ದರೂ, ಇಷ್ಟು ಹೂಳು ಸಾಗಣೆಯಾಗಿದ್ದರೆ ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಆದರೆ, ಇದು ಯಾರ ಗಮನಕ್ಕೂ ಬಂದಿಲ್ಲ. ರಾಜಕಾಲುವೆಗಳ ನಿರ್ವಹಣೆಗೆಂದೇ ₹38 ಕೋಟಿಯನ್ನು ವ್ಯಯಿಸಲಾಗಿದೆ’ ಎಂದರು.</p>.<p>ಹೂಳು ತೆಗೆಯುವ ಕಾರ್ಯದಲ್ಲಿ ಖಂಡಿತಾ ಅವ್ಯವಹಾರವಾಗಿದೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಅವರು ದೂರು ನೀಡಿದ್ದಾರೆ.</p>.<p>‘ಹೂಳೆತ್ತುವ ಕಾರ್ಯದ ಗುತ್ತಿಗೆ ಪಡೆದವರು, ಪ್ರತಿಯೊಂದು ವಲಯಕ್ಕೂ ಸುಮಾರು 800 ಕಾರ್ಮಿಕರನ್ನು ಒದಗಿಸಿ ಕೆಲಸ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದರೆ, ಒಟ್ಟು 8 ವಲಯಗಳಿಂದ 6,400 ಮಂದಿ ಈ ಕಾರ್ಯ ನಿರ್ವಹಿಸಿದಂತಾಗುತ್ತದೆ. ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು’ ಎಂದು ಅವರು ಒತ್ತಾಯಿಸಿದರು.<br />ಜಿಯೊ ಸ್ಟ್ಯಾಂಪ್–ಸೆನ್ಸರ್ ನೆರವು</p>.<p>ಮಳೆ ಹಾನಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕಾರಿಗಳು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.</p>.<p>‘ಮಳೆ ಹಾನಿ ಪರಿಹಾರ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಒಂದನ್ನು ರಚಿಸಲಾಗಿದೆ. ಜಿಯೊ ಸ್ಟ್ಯಾಂಪ್ ಆ್ಯಪ್ ಮೂಲಕ ಫೋಟೊ ತೆಗೆದು ಈ ಗ್ರೂಪ್ನಲ್ಲಿ ಹಾಕಲಾಗುತ್ತಿದೆ. ಈ ಆ್ಯಪ್ ಮೂಲಕ ತೆಗೆದ ಫೋಟೊದಲ್ಲಿ ಸ್ಥಳದ ಮಾಹಿತಿ, ಸಮಯ ಎಲ್ಲವೂ ದಾಖಲಾಗುತ್ತಿದೆ. ಯಾವ ಮೋರಿ ಮೊದಲು ಹೇಗಿತ್ತು, ಹೂಳು ಎತ್ತಿದ ಮೇಲೆ ಹೇಗಾಗಿದೆ ಎಂಬ ಚಿತ್ರಣ ಇದರಲ್ಲಿ ಸಿಗುತ್ತದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಹೇಳಿದರು.</p>.<p><strong>ಸೆನ್ಸರ್ ಅಳವಡಿಕೆ:</strong>‘ನಗರದ ನಾಲ್ಕು ದಿಕ್ಕುಗಳಲ್ಲಿ ಸೆನ್ಸರ್ ಅಳವಡಿಸಿ, ಮೊಬೈಲ್ ಫೋನ್ಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ನಗರದ ದಕ್ಷಿಣ ಭಾಗದಲ್ಲಿ ಮಳೆ ಬಂದಾಗ, ಉತ್ತರದಲ್ಲಿ ಇರುವುದಿಲ್ಲ. ಅದೇ ರೀತಿ, ಪೂರ್ವ ಭಾಗದಲ್ಲಿ ಮಳೆ ಇರದಿದ್ದರೂ, ಪಶ್ಚಿಮದಲ್ಲಿ ಸುರಿಯುತ್ತಿರುತ್ತದೆ. ಈ ಸೆನ್ಸರ್ಗಳನ್ನು ಅಳವಡಿಸುವುದರಿಂದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಮೊಬೈಲ್ಗೆ ರವಾನೆಯಾಗುತ್ತದೆ. ಒಂದೊಂದು ವಲಯದಲ್ಲಿ 10 ಕಾರ್ಮಿಕರನ್ನು ನಿಯೋಜಿಸುವ ಬದಲು, ಯಾವ ಭಾಗದಲ್ಲಿ ಮಳೆ ಬರುತ್ತದೆಯೋ ಎಲ್ಲರನ್ನೂ ಅಲ್ಲಿಗೇ ಕಳುಹಿಸಿದರೆ ಪರಿಹಾರ ಕಾರ್ಯ ಸುಲಭವಾಗುತ್ತದೆ’ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>