ಅರ್ಜಿದಾರ ಜಯಾ ಠಾಕೂರ್ ಪರ ಹಾಜರಾಗಿದ್ದ ವಕೀಲರು, ಸೆಬಿಯ ವೈಫಲ್ಯದ ಬಗ್ಗೆ ಪೀಠವು ಏನನ್ನೂ ಹೇಳಲಿಲ್ಲ ಎಂದಾಗ, ವಕೀಲರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ ಪೀಠವು, ‘ಆರೋಪ ಮಾಡುವಾಗ ಎಚ್ಚರವಿರಲಿ. ಇದು ಷೇರು ಮಾರುಕಟ್ಟೆಯಲ್ಲಿನ ಭಾವನೆಗಳ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಎಲ್ಲ ಆರೋಪಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ’ ಎಂದೂ ಹೇಳಿದೆ.