<p class="title">ಜನಸಾಮಾನ್ಯರೂ ವಿಮಾನಯಾನ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದ ‘ಉಡಾನ್’ (ಉಡೆ ದೇಶ್ ಕಾ ಆಮ್ ನಾಗರಿಕ್–ದೇಶದ ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡಲಿ) ಯೋಜನೆಯನ್ನು ಬಜೆಟ್ನಲ್ಲಿ ಪರಿಷ್ಕರಿಸಲಾಗಿದ್ದು, 120 ಹೊಸ ಪ್ರದೇಶಗಳಿಗೆ ಮುಂದಿನ 10 ವರ್ಷಗಳಲ್ಲಿ ವಾಯುಯಾನ ಸಾಧ್ಯವಾಗಲಿದೆ.</p>.<p class="title">ಆದಾಗ್ಯೂ ಉಡಾನ್ ಯೋಜನೆಗೆ ಮೀಸಲಿಟ್ಟಿರುವ ಹಣವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 32ರಷ್ಟು ಕಡಿಮೆಯಾಗಿದೆ. ₹540 ಕೋಟಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹800 ಕೋಟಿ ಮೀಸಲಿಡಲಾಗಿತ್ತು. </p>.<p class="title">ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ನಾಗರಿಕರು ವಿಮಾನ ಸಂಚಾರ ಮಾಡಲು ಈ ಯೋಜನೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ. </p>.<p class="title">ಬಿಹಾರದಲ್ಲಿ ಸುಸ್ಥಿರವಾದ ‘ಹಸಿರು ವಿಮಾನನಿಲ್ದಾಣಗಳು’ ತಲೆಎತ್ತಲಿವೆ ಎಂದೂ ಹಣಕಾಸು ಸಚಿವರು ಪ್ರಕಟಿಸಿದರು. </p>.<p class="title">‘ಉಡಾನ್’ ಯೋಜನೆಯು ಇದುವರೆಗೆ 88 ಪ್ರದೇಶಗಳಿಗೆ ವಾಯುಯಾನ ಸಂಪರ್ಕ ಕಲ್ಪಿಸಿದ್ದು, 169 ವಿಮಾನಗಳು ಅವುಗಳ ನಡುವೆ ಸಂಚರಿಸುತ್ತಿವೆ. ಮುಂದಿನ ವರ್ಷಗಳಲ್ಲಿ ಪರ್ವತ ಪ್ರದೇಶಗಳು, ಈಶಾನ್ಯ ರಾಜ್ಯಗಳ ಸ್ಥಳಗಳಲ್ಲಿಯೂ ವಿಮಾನನಿಲ್ದಾಣಗಳು, ಹೆಲಿಪ್ಯಾಡ್ಗಳನ್ನು ನಿರ್ಮಿಸುವ ಗುರಿ ಇದೆ ಎಂದು ತಿಳಿಸಿದರು. </p>.<p class="title">ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ₹2,400 ಕೋಟಿ ಬಜೆಟ್ ಮೀಸಲಿಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಜನಸಾಮಾನ್ಯರೂ ವಿಮಾನಯಾನ ಮಾಡಲು ಅನುಕೂಲ ಕಲ್ಪಿಸುವ ಉದ್ದೇಶದ ‘ಉಡಾನ್’ (ಉಡೆ ದೇಶ್ ಕಾ ಆಮ್ ನಾಗರಿಕ್–ದೇಶದ ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡಲಿ) ಯೋಜನೆಯನ್ನು ಬಜೆಟ್ನಲ್ಲಿ ಪರಿಷ್ಕರಿಸಲಾಗಿದ್ದು, 120 ಹೊಸ ಪ್ರದೇಶಗಳಿಗೆ ಮುಂದಿನ 10 ವರ್ಷಗಳಲ್ಲಿ ವಾಯುಯಾನ ಸಾಧ್ಯವಾಗಲಿದೆ.</p>.<p class="title">ಆದಾಗ್ಯೂ ಉಡಾನ್ ಯೋಜನೆಗೆ ಮೀಸಲಿಟ್ಟಿರುವ ಹಣವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 32ರಷ್ಟು ಕಡಿಮೆಯಾಗಿದೆ. ₹540 ಕೋಟಿಯನ್ನು ಈ ಯೋಜನೆಗೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ₹800 ಕೋಟಿ ಮೀಸಲಿಡಲಾಗಿತ್ತು. </p>.<p class="title">ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ನಾಗರಿಕರು ವಿಮಾನ ಸಂಚಾರ ಮಾಡಲು ಈ ಯೋಜನೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ. </p>.<p class="title">ಬಿಹಾರದಲ್ಲಿ ಸುಸ್ಥಿರವಾದ ‘ಹಸಿರು ವಿಮಾನನಿಲ್ದಾಣಗಳು’ ತಲೆಎತ್ತಲಿವೆ ಎಂದೂ ಹಣಕಾಸು ಸಚಿವರು ಪ್ರಕಟಿಸಿದರು. </p>.<p class="title">‘ಉಡಾನ್’ ಯೋಜನೆಯು ಇದುವರೆಗೆ 88 ಪ್ರದೇಶಗಳಿಗೆ ವಾಯುಯಾನ ಸಂಪರ್ಕ ಕಲ್ಪಿಸಿದ್ದು, 169 ವಿಮಾನಗಳು ಅವುಗಳ ನಡುವೆ ಸಂಚರಿಸುತ್ತಿವೆ. ಮುಂದಿನ ವರ್ಷಗಳಲ್ಲಿ ಪರ್ವತ ಪ್ರದೇಶಗಳು, ಈಶಾನ್ಯ ರಾಜ್ಯಗಳ ಸ್ಥಳಗಳಲ್ಲಿಯೂ ವಿಮಾನನಿಲ್ದಾಣಗಳು, ಹೆಲಿಪ್ಯಾಡ್ಗಳನ್ನು ನಿರ್ಮಿಸುವ ಗುರಿ ಇದೆ ಎಂದು ತಿಳಿಸಿದರು. </p>.<p class="title">ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ₹2,400 ಕೋಟಿ ಬಜೆಟ್ ಮೀಸಲಿಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>