ರಾಜ್ಯದ ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದ್ದು, ಧಾರವಾಡ–ಕಿತ್ತೂರು-ಬೆಳಗಾವಿ ಹೊಸ ಮಾರ್ಗ ನಿರ್ಮಾಣ ಹಾಗೂ ಗದಗ-ಯಲವಿಗಿ, ತುಮಕೂರು-ದಾವಣಗೆರೆ ನೂತನ ಮಾರ್ಗಗಳಿಗೆ ಅನುದಾನ ಘೋಷಿಸಲಾಗಿದೆ. ಕಳಸಾ ಬಂಡೂರಿ ನೀರಾವರಿ ಯೋಜನೆಗೆ ₹1,000 ಕೋಟಿ, ಮಾವು ಬೆಳೆ ಮಾರುಕಟ್ಟೆಗೆ ಬೆಂಬಲ, ಧಾರವಾಡ ಕಸೂತಿ ಸೀರೆಗಳ ಕಲೆಗೆ ವಿಶೇಷ ಪ್ರೋತ್ಸಾಹ ಮತ್ತು ನವಲಗುಂದ ಜಮಖಾನೆ ಕ್ಲಸ್ಟರ್ ಸ್ಥಾಪನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದು ಗಮನಾರ್ಹ ಎಂದಿದ್ದಾರೆ.