ನವದೆಹಲಿ: ಬಹುಶಃಸುದೀರ್ಘ ಬಜೆಟ್ ಭಾಷಣ ಇದೇ ಆಗಿರಬೇಕು. ಆದರೆ, ಆ ಬಜೆಟ್ ಒಳಗೆ ಯಾವುದೇ ಉತ್ತಮ ಅಂಶಗಳೂ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದರು.
ಸಂಸತ್ ಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಾರ್ಯತಂತ್ರದ ಕಲ್ಪನೆ ಅಥವಾ ಯಾವುದೇ ಸದೃಢ ಅಂಶವನ್ನು ಈ ಬಜೆಟ್ ಹೊಂದಿಲ್ಲ. ಮುಖ್ಯವಾಗಿ ಯುವ ಜನತೆಗೆ ಹೆಚ್ಚು ಅಗತ್ಯವಿರುವ ಉದ್ಯೋಗ ಕುರಿತು ಏನೂ ಹೇಳಿಲ್ಲ’ ಎಂದರು.
Rahul Gandhi on Budget: The main issue facing is unemployment. I didn't see any strategic idea that would help our youth get jobs. I saw tactical stuff but no central idea. It describes govt well, lot of repetition,rambling-it is mindset of govt, all talk, but nothing happening. pic.twitter.com/IJv5LdYJsW
‘ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿದೆ. ಯುವಜನರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಯಾವುದೇ ಗಟ್ಟಿ ಯೋಜನೆ ಈ ಬಜೆಟ್ನಲ್ಲಿ ಕಾಣಲಿಲ್ಲ. ಈ ದೇಶದ ಯುವಜನತೆಗೆ ನಿಖರವಾಗಿ ಗೊತ್ತಿದೆ. ಇಲ್ಲಿ ಯಾವುದೇ ಉದ್ಯೋಗಗಳು ಉಳಿದಿಲ್ಲ.ಅವರಿಗೆ ಸಹಾಯವಾಗುವಂತಹುದು ಏನು ನಡೆಯುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.