ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನತೆಯ ಸಹಾಯಕ್ಕೆ ಬರದ ಕೇಂದ್ರ ಬಜೆಟ್‌: ರಾಹುಲ್‌ ಗಾಂಧಿ

Last Updated 1 ಫೆಬ್ರುವರಿ 2020, 11:34 IST
ಅಕ್ಷರ ಗಾತ್ರ

ನವದೆಹಲಿ: ಬಹುಶಃಸುದೀರ್ಘ ಬಜೆಟ್‌ ಭಾಷಣ ಇದೇ ಆಗಿರಬೇಕು. ಆದರೆ, ಆ ಬಜೆಟ್‌ ಒಳಗೆ ಯಾವುದೇ ಉತ್ತಮ ಅಂಶಗಳೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟೀಕಿಸಿದರು.

ಸಂಸತ್‌ ಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಾರ್ಯತಂತ್ರದ ಕಲ್ಪನೆ ಅಥವಾ ಯಾವುದೇ ಸದೃಢ ಅಂಶವನ್ನು ಈ ಬಜೆಟ್‌ ಹೊಂದಿಲ್ಲ. ಮುಖ್ಯವಾಗಿ ಯುವ ಜನತೆಗೆ ಹೆಚ್ಚು ಅಗತ್ಯವಿರುವ ಉದ್ಯೋಗ ಕುರಿತು ಏನೂ ಹೇಳಿಲ್ಲ’ ಎಂದರು.

‘ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿದೆ. ಯುವಜನರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಯಾವುದೇ ಗಟ್ಟಿ ಯೋಜನೆ ಈ ಬಜೆಟ್‌ನಲ್ಲಿ ಕಾಣಲಿಲ್ಲ. ಈ ದೇಶದ ಯುವಜನತೆಗೆ ನಿಖರವಾಗಿ ಗೊತ್ತಿದೆ. ಇಲ್ಲಿ ಯಾವುದೇ ಉದ್ಯೋಗಗಳು ಉಳಿದಿಲ್ಲ.ಅವರಿಗೆ ಸಹಾಯವಾಗುವಂತಹುದು ಏನು ನಡೆಯುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT