<p><strong>ನವದೆಹಲಿ</strong>: ಹೆಸರು ಬದಲಾವಣೆಯಿಂದ ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಾದ ಸ್ವರೂಪ (ಮನರೇಗಾ) ‘ವಿಬಿ–ಜಿ–ರಾಮ್–ಜಿ‘ಗೆ ಕೇಂದ್ರದ ಬಜೆಟ್ನಲ್ಲಿ ಹೆಚ್ಚಿನ ಹಣ ತೆಗೆದಿರಿಸಲಾಗಿದೆ.</p><p>ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ವಿಬಿ–ಜಿ–ರಾಮ್–ಜಿ ಎಂದು ಹೆಸರು ಬದಲಾವಣೆ ಮಾಡಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.</p><p>ಸದ್ಯ ಈ ಯೋಜನೆ ಹೊಸ ರೂಪದಲ್ಲಿ ಇನ್ನು ಅನುಷ್ಠಾನಗೊಂಡಿಲ್ಲ. ಅಲ್ಲಿವರೆಗೂ ಬಾಕಿ ಕಾಮಗಾರಿ, ಕೆಲಸಗಳು ಮನರೇಗಾ ಯೋಜನೆ ಹೆಸರಿನಲ್ಲಿಯೇ ಮುಂದುವರೆಯಲಿವೆ.</p><p>ಈ ಬದಲಾವಣೆ ರಾಷ್ಟ್ರದ ತುಂಬ ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನುದಾನ ಕಡಿತಗೊಳಿಸಲಾಗುತ್ತದೆ, ರಾಜ್ಯಗಳಿಗೆ ಹೆಚ್ಚು ಹೊಣೆ ವರ್ಗಾಯಿಸಲಾಗುತ್ತದೆ ಎಂಬ ಆತಂಕ ರಾಜ್ಯಗಳನ್ನು ಕಾಡುತ್ತಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಬಿ–ಜಿ–ರಾಮ್–ಜಿಗೆ ಬಜೆಟ್ನಲ್ಲಿ ಈ ಸಾರಿ ಗಮನಾರ್ಹವಾಗಿ ಅನುದಾನ ಹೆಚ್ಚಿಸಿದ್ದಾರೆ.</p><p>ಒಕ್ಕೂಟ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ವಿಬಿ–ಜಿ–ರಾಮ್–ಜಿ ಯೋಜನೆಗೆ ಈ ಸಾರಿಯ ಬಜೆಟ್ನಲ್ಲಿ ₹95,692 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. 2025–26 ನೇ ಸಾಲಿನ ಬಜೆಟ್ನಲ್ಲಿ ₹88 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಆದರೆ ಹಂಚಿಕೆಯಾಗಿದ್ದು 86 ಸಾವಿರ ಕೋಟಿ.</p>.<p>ಒಟ್ಟಾರೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಈ ಸಾರಿ ₹1.86 ಲಕ್ಷ ಕೋಟಿ ಹಂಚಿಕೆಯಾಗಿದೆ.</p><p>ವಿಬಿ–ಜಿ–ರಾಮ್–ಜಿ ಯೋಜನೆಯ ಹಂಚಿಕೆಯಾದ ₹95,692 ಕೋಟಿ ಹಣದಲ್ಲಿ ಬಾಕಿ ಇರುವ ಮನರೇಗಾ ಯೋಜನೆಯ ಕಾಮಗಾರಿ, ಕೆಲಸಗಳಿಗೆ ₹30 ಸಾವಿರ ಕೋಟಿ ಮೀಸಲಿದೆ.</p><p>ಕಳೆದ ಸಾರಿಯ ಬಜೆಟ್ಗಿಂತ ಈ ಸಾರಿ ಸುಮಾರು 10 ಸಾವಿರ ಕೋಟಿ ಹೆಚ್ಚು ಹಣವನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒದಗಿಸಿದರೂ ಹೊಸ ನಿಯಮಾವಳಿಗಳ ಪ್ರಕಾರ ನಿಗದಿತ ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎನ್ನಲಾಗಿದೆ.</p><p>ವಿಬಿ–ಜಿ–ರಾಮ್–ಜಿ ಯೋಜನೆಯಲ್ಲಿ ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯನ್ ರಾಜ್ಯಗಳನ್ನು ಹೊರತುಪಡಿಸಿ 60:40 ಅನುಪಾತದಲ್ಲಿ (60 ಭಾಗ ಕೇಂದ್ರ, 40 ಭಾಗ ರಾಜ್ಯ) ವೆಚ್ಚ ಮಾಡಬೇಕಾಗುತ್ತದೆ. ಮೊದಲು ಇದು 90:10 ರಷ್ಟಿತ್ತು. ಈಗ ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯನ್ ರಾಜ್ಯಗಳು ಮಾತ್ರ ಶೇ 10 ಖರ್ಚು ಮಾಡಬೇಕಾಗುತ್ತದೆ.</p><p>ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಹಂಚಿಕೆಯಾಗಿರುವ ಹಣದಲ್ಲಿ ಸುಮಾರು ಶೇ 50 ರಷ್ಟು ಉದ್ಯೋಗ ಖಾತ್ರಿ ಯೋಜನೆಗಾಗಿಯೇ ಖರ್ಚಾಗುತ್ತದೆ.</p><p>ಇನ್ನು, ಸಚಿವಾಲಯದ ಭೂ ಸಂಪನ್ಮೂಲ ಇಲಾಖೆಗೆ ₹2,654 ಕೋಟಿ, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಗೆ ₹19 ಸಾವಿರ ಕೋಟಿ, ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ಗಾಗಿ (DAY-NRLM) ₹19,200 ಕೋಟಿ ಹಾಗೂ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಗಾಗಿ ₹54 ಸಾವಿರ ಕೋಟಿ ಹಣವನ್ನು ಈ ಬಜೆಟ್ನಲ್ಲಿ ಮೀಸಲಿಡಲಾಗಿದೆ.</p><p>ಹಿಂದಿನ ಅವಧಿಯ ಬಜೆಟ್ಗೆ ಹೋಲಿಸಿದರೆ ಈ ಇಲಾಖೆಗಳಿಗೆ ಹಣ ಹಂಚಿಕೆಯಲ್ಲಿ ಬಹುತೇಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಯಾವುದೇ ಹೊಸ ಯೋಜನೆಗಳೂ ಸದ್ದು ಮಾಡಿಲ್ಲ.</p>.ಬಜೆಟ್ ಪ್ರತಿ ಸೋರಿಕೆಯಾಗಿತ್ತು; ಯಾವ ವರ್ಷ ಗೊತ್ತಾ?.ದಾಖಲೆಯ ಸತತ 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್: ಇವರೇ ಮೊದಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹೆಸರು ಬದಲಾವಣೆಯಿಂದ ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಾದ ಸ್ವರೂಪ (ಮನರೇಗಾ) ‘ವಿಬಿ–ಜಿ–ರಾಮ್–ಜಿ‘ಗೆ ಕೇಂದ್ರದ ಬಜೆಟ್ನಲ್ಲಿ ಹೆಚ್ಚಿನ ಹಣ ತೆಗೆದಿರಿಸಲಾಗಿದೆ.</p><p>ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ವಿಬಿ–ಜಿ–ರಾಮ್–ಜಿ ಎಂದು ಹೆಸರು ಬದಲಾವಣೆ ಮಾಡಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.</p><p>ಸದ್ಯ ಈ ಯೋಜನೆ ಹೊಸ ರೂಪದಲ್ಲಿ ಇನ್ನು ಅನುಷ್ಠಾನಗೊಂಡಿಲ್ಲ. ಅಲ್ಲಿವರೆಗೂ ಬಾಕಿ ಕಾಮಗಾರಿ, ಕೆಲಸಗಳು ಮನರೇಗಾ ಯೋಜನೆ ಹೆಸರಿನಲ್ಲಿಯೇ ಮುಂದುವರೆಯಲಿವೆ.</p><p>ಈ ಬದಲಾವಣೆ ರಾಷ್ಟ್ರದ ತುಂಬ ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನುದಾನ ಕಡಿತಗೊಳಿಸಲಾಗುತ್ತದೆ, ರಾಜ್ಯಗಳಿಗೆ ಹೆಚ್ಚು ಹೊಣೆ ವರ್ಗಾಯಿಸಲಾಗುತ್ತದೆ ಎಂಬ ಆತಂಕ ರಾಜ್ಯಗಳನ್ನು ಕಾಡುತ್ತಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಬಿ–ಜಿ–ರಾಮ್–ಜಿಗೆ ಬಜೆಟ್ನಲ್ಲಿ ಈ ಸಾರಿ ಗಮನಾರ್ಹವಾಗಿ ಅನುದಾನ ಹೆಚ್ಚಿಸಿದ್ದಾರೆ.</p><p>ಒಕ್ಕೂಟ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ವಿಬಿ–ಜಿ–ರಾಮ್–ಜಿ ಯೋಜನೆಗೆ ಈ ಸಾರಿಯ ಬಜೆಟ್ನಲ್ಲಿ ₹95,692 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. 2025–26 ನೇ ಸಾಲಿನ ಬಜೆಟ್ನಲ್ಲಿ ₹88 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಆದರೆ ಹಂಚಿಕೆಯಾಗಿದ್ದು 86 ಸಾವಿರ ಕೋಟಿ.</p>.<p>ಒಟ್ಟಾರೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಈ ಸಾರಿ ₹1.86 ಲಕ್ಷ ಕೋಟಿ ಹಂಚಿಕೆಯಾಗಿದೆ.</p><p>ವಿಬಿ–ಜಿ–ರಾಮ್–ಜಿ ಯೋಜನೆಯ ಹಂಚಿಕೆಯಾದ ₹95,692 ಕೋಟಿ ಹಣದಲ್ಲಿ ಬಾಕಿ ಇರುವ ಮನರೇಗಾ ಯೋಜನೆಯ ಕಾಮಗಾರಿ, ಕೆಲಸಗಳಿಗೆ ₹30 ಸಾವಿರ ಕೋಟಿ ಮೀಸಲಿದೆ.</p><p>ಕಳೆದ ಸಾರಿಯ ಬಜೆಟ್ಗಿಂತ ಈ ಸಾರಿ ಸುಮಾರು 10 ಸಾವಿರ ಕೋಟಿ ಹೆಚ್ಚು ಹಣವನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒದಗಿಸಿದರೂ ಹೊಸ ನಿಯಮಾವಳಿಗಳ ಪ್ರಕಾರ ನಿಗದಿತ ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎನ್ನಲಾಗಿದೆ.</p><p>ವಿಬಿ–ಜಿ–ರಾಮ್–ಜಿ ಯೋಜನೆಯಲ್ಲಿ ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯನ್ ರಾಜ್ಯಗಳನ್ನು ಹೊರತುಪಡಿಸಿ 60:40 ಅನುಪಾತದಲ್ಲಿ (60 ಭಾಗ ಕೇಂದ್ರ, 40 ಭಾಗ ರಾಜ್ಯ) ವೆಚ್ಚ ಮಾಡಬೇಕಾಗುತ್ತದೆ. ಮೊದಲು ಇದು 90:10 ರಷ್ಟಿತ್ತು. ಈಗ ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯನ್ ರಾಜ್ಯಗಳು ಮಾತ್ರ ಶೇ 10 ಖರ್ಚು ಮಾಡಬೇಕಾಗುತ್ತದೆ.</p><p>ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಹಂಚಿಕೆಯಾಗಿರುವ ಹಣದಲ್ಲಿ ಸುಮಾರು ಶೇ 50 ರಷ್ಟು ಉದ್ಯೋಗ ಖಾತ್ರಿ ಯೋಜನೆಗಾಗಿಯೇ ಖರ್ಚಾಗುತ್ತದೆ.</p><p>ಇನ್ನು, ಸಚಿವಾಲಯದ ಭೂ ಸಂಪನ್ಮೂಲ ಇಲಾಖೆಗೆ ₹2,654 ಕೋಟಿ, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಗೆ ₹19 ಸಾವಿರ ಕೋಟಿ, ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ಗಾಗಿ (DAY-NRLM) ₹19,200 ಕೋಟಿ ಹಾಗೂ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಗಾಗಿ ₹54 ಸಾವಿರ ಕೋಟಿ ಹಣವನ್ನು ಈ ಬಜೆಟ್ನಲ್ಲಿ ಮೀಸಲಿಡಲಾಗಿದೆ.</p><p>ಹಿಂದಿನ ಅವಧಿಯ ಬಜೆಟ್ಗೆ ಹೋಲಿಸಿದರೆ ಈ ಇಲಾಖೆಗಳಿಗೆ ಹಣ ಹಂಚಿಕೆಯಲ್ಲಿ ಬಹುತೇಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಯಾವುದೇ ಹೊಸ ಯೋಜನೆಗಳೂ ಸದ್ದು ಮಾಡಿಲ್ಲ.</p>.ಬಜೆಟ್ ಪ್ರತಿ ಸೋರಿಕೆಯಾಗಿತ್ತು; ಯಾವ ವರ್ಷ ಗೊತ್ತಾ?.ದಾಖಲೆಯ ಸತತ 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್: ಇವರೇ ಮೊದಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>