<p><strong>ಬೆಂಗಳೂರು:</strong> ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಶಯದಡಿ ಕರ್ನಾಟಕದಾದ್ಯಂತ ಮತ್ತಷ್ಟು ಹೊಸ ಮಳಿಗೆಗಳನ್ನು ತೆರೆಯುವ ಮೂಲಕ ರಾಮ್ರಾಜ್ ಕಾಟನ್ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದು ರಾಮ್ರಾಜ್ ಕಾಟನ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್. ನಾಗರಾಜನ್ ಹೇಳಿದರು.</p>.<p>ನಗರದ ಕೆಂಪೇಗೌಡ ರಸ್ತೆಯಲ್ಲಿ ಭಾನುವಾರ ನಡೆದ ಹೊಸ ಮಳಿಗೆಯ ಉದ್ಘಾಟನೆ ಬಳಿಕ ಮಾತನಾಡಿದ ಅವರು, ‘ಸಂಸ್ಥೆಯು ಸ್ಥಾಪನೆಗೊಂಡು 42 ವರ್ಷಗಳಾಗಿವೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿ ದೇಶದ ವಿವಿಧೆಡೆ ಮತ್ತು ವಿದೇಶಗಳಲ್ಲೂ ಮಳಿಗೆ ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.</p>.<p>ಇಲ್ಲಿಯವರೆಗೆ ಸಂಸ್ಥೆಯಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ಕಲ್ಪಿಸಲಾಗಿದೆ. ಪರೋಕ್ಷವಾಗಿ ಇಷ್ಟೇ ಸಂಖ್ಯೆಯ ಜನರಿಗೆ ಉದ್ಯೋಗ ಸಿಕ್ಕಿದೆ. ಪ್ರಸ್ತುತ ದೇಶದಾದ್ಯಂತ 350 ಮಳಿಗೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ 65 ಮಳಿಗೆಗಳಿವೆ ಎಂದು ವಿವರಿಸಿದರು.</p>.<p>ಸಂಸ್ಥೆಯಿಂದ ತಯಾರಿಸುವ ಉಡುಪುಗಳನ್ನು ಶ್ರೀಲಂಕಾ, ಸಿಂಗಪುರ, ಮಲೇಷ್ಯಾ ಸೇರಿ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದರು.</p>.<p>ರಾಮ್ರಾಜ್ ದೇಶದ ನಂಬಿಕೆಯ ಬ್ರ್ಯಾಂಡ್ ಆಗಿದೆ. ಮಹಾತ್ಮಗಾಂಧಿ ಅವರು ಧೋತಿ ಧರಿಸುವ ಮೂಲಕ ಸ್ವದೇಶಿ ಉಡುಪಿನ ಮಹತ್ವ ಸಾರಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ದ್ಯೋತಕ ಆಗಿದೆ. ಈ ಪರಂಪರೆಯನ್ನು ಬೆಳೆಸಲು ಸಂಸ್ಥೆಯು ಒತ್ತು ನೀಡುತ್ತಿದೆ ಎಂದು ತಿಳಿಸಿದರು.</p>.<p>ಈ ಬಾರಿಯ ಯುಗಾದಿ ಹಬ್ಬಕ್ಕೆ ಆಕರ್ಷಕ ಧೋತಿಗಳು ಹಾಗೂ ಹಲವು ಬಗೆಯ ಉಡುಪುಗಳಿವೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಆನ್ಲೈನ್ನಲ್ಲೂ ಖರೀದಿಸಬಹುದಾಗಿದೆ ಎಂದು ಹೇಳಿದರು.</p>.<p>ಮಳಿಗೆ ಉದ್ಘಾಟಿಸಿದ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೇಶೀಯ ಸಂಸ್ಕೃತಿಯು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ರಾಮ್ರಾಜ್ ಕೊಡುಗೆಯು ದೊಡ್ಡದಿದೆ’ ಎಂದು ಶ್ಲಾಘಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಶಯದಡಿ ಕರ್ನಾಟಕದಾದ್ಯಂತ ಮತ್ತಷ್ಟು ಹೊಸ ಮಳಿಗೆಗಳನ್ನು ತೆರೆಯುವ ಮೂಲಕ ರಾಮ್ರಾಜ್ ಕಾಟನ್ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ’ ಎಂದು ರಾಮ್ರಾಜ್ ಕಾಟನ್ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್. ನಾಗರಾಜನ್ ಹೇಳಿದರು.</p>.<p>ನಗರದ ಕೆಂಪೇಗೌಡ ರಸ್ತೆಯಲ್ಲಿ ಭಾನುವಾರ ನಡೆದ ಹೊಸ ಮಳಿಗೆಯ ಉದ್ಘಾಟನೆ ಬಳಿಕ ಮಾತನಾಡಿದ ಅವರು, ‘ಸಂಸ್ಥೆಯು ಸ್ಥಾಪನೆಗೊಂಡು 42 ವರ್ಷಗಳಾಗಿವೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿ ದೇಶದ ವಿವಿಧೆಡೆ ಮತ್ತು ವಿದೇಶಗಳಲ್ಲೂ ಮಳಿಗೆ ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.</p>.<p>ಇಲ್ಲಿಯವರೆಗೆ ಸಂಸ್ಥೆಯಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ಕಲ್ಪಿಸಲಾಗಿದೆ. ಪರೋಕ್ಷವಾಗಿ ಇಷ್ಟೇ ಸಂಖ್ಯೆಯ ಜನರಿಗೆ ಉದ್ಯೋಗ ಸಿಕ್ಕಿದೆ. ಪ್ರಸ್ತುತ ದೇಶದಾದ್ಯಂತ 350 ಮಳಿಗೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ 65 ಮಳಿಗೆಗಳಿವೆ ಎಂದು ವಿವರಿಸಿದರು.</p>.<p>ಸಂಸ್ಥೆಯಿಂದ ತಯಾರಿಸುವ ಉಡುಪುಗಳನ್ನು ಶ್ರೀಲಂಕಾ, ಸಿಂಗಪುರ, ಮಲೇಷ್ಯಾ ಸೇರಿ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದರು.</p>.<p>ರಾಮ್ರಾಜ್ ದೇಶದ ನಂಬಿಕೆಯ ಬ್ರ್ಯಾಂಡ್ ಆಗಿದೆ. ಮಹಾತ್ಮಗಾಂಧಿ ಅವರು ಧೋತಿ ಧರಿಸುವ ಮೂಲಕ ಸ್ವದೇಶಿ ಉಡುಪಿನ ಮಹತ್ವ ಸಾರಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ದ್ಯೋತಕ ಆಗಿದೆ. ಈ ಪರಂಪರೆಯನ್ನು ಬೆಳೆಸಲು ಸಂಸ್ಥೆಯು ಒತ್ತು ನೀಡುತ್ತಿದೆ ಎಂದು ತಿಳಿಸಿದರು.</p>.<p>ಈ ಬಾರಿಯ ಯುಗಾದಿ ಹಬ್ಬಕ್ಕೆ ಆಕರ್ಷಕ ಧೋತಿಗಳು ಹಾಗೂ ಹಲವು ಬಗೆಯ ಉಡುಪುಗಳಿವೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಆನ್ಲೈನ್ನಲ್ಲೂ ಖರೀದಿಸಬಹುದಾಗಿದೆ ಎಂದು ಹೇಳಿದರು.</p>.<p>ಮಳಿಗೆ ಉದ್ಘಾಟಿಸಿದ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೇಶೀಯ ಸಂಸ್ಕೃತಿಯು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ರಾಮ್ರಾಜ್ ಕೊಡುಗೆಯು ದೊಡ್ಡದಿದೆ’ ಎಂದು ಶ್ಲಾಘಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>