<p><strong>ಕೊಲಂಬೊ</strong>: ‘ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕರಿಸುವ ನಿರ್ಧಾರ ನಮ್ಮ ಸರ್ಕಾರದ್ದು. ನಮ್ಮ ನಿಯಂತ್ರಣದಲ್ಲೇನೂ ಇಲ್ಲ’ ಎಂದು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅವರು ತಮ್ಮ ದೇಶದ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಧ್ವನಿಗೂಡಿಸಿದ್ದಾರೆ.</p><p>ಪಾಕಿಸ್ತಾನ ಸರ್ಕಾರ ಕಳೆದ ಭಾನುವಾರ ಫೆ.15ರ ಪಂದ್ಯ ಬಹಿಷ್ಕರಿಸುವ ನಿರ್ಧಾರ ತಳೆದಿತ್ತು. ‘ಸರ್ಕಾರ ಏನು ಹೇಳುತ್ತದೆಯೊ ಅದನ್ನು ಪಾಲಿಸುತ್ತೇವೆ’ ಎಂದು ಅವರು ನಾಯಕರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.</p><p>‘ನಾಕೌಟ್ನಲ್ಲಿ ಮತ್ತೆ ಎದುರಾಗುವ ಸಂದರ್ಭ ಬಂದರೆ ನಮ್ಮ ಸರ್ಕಾರ ಏನು ಹೇಳುತ್ತದೆಯೊ ಅದರಂತೆ ನಡೆಯುತ್ತೇವೆ’ ಎಂದು ಸಲ್ಮಾನ್ ಹೇಳಿದ್ದಾರೆ.</p><p>ಹೋದ ವಿಶ್ವಕಪ್ನಲ್ಲಿ ಅಮೆರಿಕಕ್ಕೆ ಸೋತ ಬಗ್ಗೆ ಕೇಳಿದಾಗ, ‘ಹೌದು ನಾವು ಸೋತಿದ್ದೆವು. ಆದರೆ ಅದು ಇತಿಹಾಸ. ಇದು ಹೊಸ ವಿಶ್ವಕಪ್. ನಮ್ಮ ತಂಡ ಹೊಸದು. ಹೊಸ ಸಂಯೋಜನೆ ಹೊಂದಿದೆ. ನಾವು ಆಡಲು ಕಾತರರಾಗಿದ್ದೇವೆ’ ಎಂದಿದ್ದಾರೆ.</p>.ನಮ್ಮ ವಿಮಾನ ಬುಕ್ ಆಗಿದೆ, ನಾವು ಕೊಲೊಂಬೊಗೆ ಹೋಗುತ್ತೇವೆ: ಸೂರ್ಯಕುಮಾರ್ ಯಾದವ್.<div><blockquote>ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸುವ ನಿರ್ಧಾರ ಸೂಕ್ತವಾದುದು. ಪ್ರಜ್ಞಾಪೂರ್ವಕವಾಗಿ ಕೈಗೊಂಡ ನಿರ್ಧಾರ. ನಾವು ಬಾಂಗ್ಲಾದೇಶದ ಬೆನ್ನಿಗಿದ್ದೇವೆ.</blockquote><span class="attribution">– ಶಹಬಾಜ್ ಶರೀಫ್, ಪಾಕ್ ಪ್ರಧಾನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ</strong>: ‘ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕರಿಸುವ ನಿರ್ಧಾರ ನಮ್ಮ ಸರ್ಕಾರದ್ದು. ನಮ್ಮ ನಿಯಂತ್ರಣದಲ್ಲೇನೂ ಇಲ್ಲ’ ಎಂದು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅವರು ತಮ್ಮ ದೇಶದ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಧ್ವನಿಗೂಡಿಸಿದ್ದಾರೆ.</p><p>ಪಾಕಿಸ್ತಾನ ಸರ್ಕಾರ ಕಳೆದ ಭಾನುವಾರ ಫೆ.15ರ ಪಂದ್ಯ ಬಹಿಷ್ಕರಿಸುವ ನಿರ್ಧಾರ ತಳೆದಿತ್ತು. ‘ಸರ್ಕಾರ ಏನು ಹೇಳುತ್ತದೆಯೊ ಅದನ್ನು ಪಾಲಿಸುತ್ತೇವೆ’ ಎಂದು ಅವರು ನಾಯಕರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.</p><p>‘ನಾಕೌಟ್ನಲ್ಲಿ ಮತ್ತೆ ಎದುರಾಗುವ ಸಂದರ್ಭ ಬಂದರೆ ನಮ್ಮ ಸರ್ಕಾರ ಏನು ಹೇಳುತ್ತದೆಯೊ ಅದರಂತೆ ನಡೆಯುತ್ತೇವೆ’ ಎಂದು ಸಲ್ಮಾನ್ ಹೇಳಿದ್ದಾರೆ.</p><p>ಹೋದ ವಿಶ್ವಕಪ್ನಲ್ಲಿ ಅಮೆರಿಕಕ್ಕೆ ಸೋತ ಬಗ್ಗೆ ಕೇಳಿದಾಗ, ‘ಹೌದು ನಾವು ಸೋತಿದ್ದೆವು. ಆದರೆ ಅದು ಇತಿಹಾಸ. ಇದು ಹೊಸ ವಿಶ್ವಕಪ್. ನಮ್ಮ ತಂಡ ಹೊಸದು. ಹೊಸ ಸಂಯೋಜನೆ ಹೊಂದಿದೆ. ನಾವು ಆಡಲು ಕಾತರರಾಗಿದ್ದೇವೆ’ ಎಂದಿದ್ದಾರೆ.</p>.ನಮ್ಮ ವಿಮಾನ ಬುಕ್ ಆಗಿದೆ, ನಾವು ಕೊಲೊಂಬೊಗೆ ಹೋಗುತ್ತೇವೆ: ಸೂರ್ಯಕುಮಾರ್ ಯಾದವ್.<div><blockquote>ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸುವ ನಿರ್ಧಾರ ಸೂಕ್ತವಾದುದು. ಪ್ರಜ್ಞಾಪೂರ್ವಕವಾಗಿ ಕೈಗೊಂಡ ನಿರ್ಧಾರ. ನಾವು ಬಾಂಗ್ಲಾದೇಶದ ಬೆನ್ನಿಗಿದ್ದೇವೆ.</blockquote><span class="attribution">– ಶಹಬಾಜ್ ಶರೀಫ್, ಪಾಕ್ ಪ್ರಧಾನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>