‘ಈ ವಿಚಾರದಲ್ಲಿ ನಾವು ಸಹಮತ ಹೊಂದಿಲ್ಲ. ಸ್ಪಷ್ಟವಾಗಿ ಹೇಳಬೇಕು ಎಂದಾದರೆ, ಭಾರತವು ಶಕ್ತಿಶಾಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ. ಅದು ಪ್ರವರ್ಧಮಾನಕ್ಕೆ ಬರುತ್ತಿರುವ ಸೂಪರ್ಪವರ್ ದೇಶ. ಅದಕ್ಕೆ ಒಳ್ಳೆಯ ಭವಿಷ್ಯವಿದೆ. ಭಾರತದ ಭವಿಷ್ಯವನ್ನು ಅದಾನಿ ಸಮೂಹವು ಹಿಂದಕ್ಕೆ ಎಳೆದು ನಿಲ್ಲಿಸಿದೆ ಎಂಬುದು ನಮ್ಮ ನಂಬಿಕೆ. ಸಮೂಹವು ತನ್ನ ಮೇಲೆ ಭಾರತದ ಧ್ವಜವನ್ನು ಹೊದ್ದುಕೊಂಡು, ದೇಶವನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ’ ಎಂದು ಕಿಡಿಕಾರಿದೆ.