‘ಕೇಡುಬುದ್ಧಿಯಿಂದ ಕೂಡಿರುವ, ಹಾನಿ ಮಾಡುವ ಉದ್ದೇಶದ, ಅಧ್ಯಯನವನ್ನೇ ನಡೆಸದೆ ಸಿದ್ಧಪಡಿಸಿದ ವರದಿಯು ಅದಾನಿ ಸಮೂಹ, ಅದರ ಹೂಡಿಕೆದಾರರು ಹಾಗೂ ಷೇರುದಾರರ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿದೆ. ಈ ವರದಿಯಿಂದಾಗಿ ಭಾರತದ ಷೇರುಪೇಟೆಗಳಲ್ಲಿ ಉಂಟಾದ ಅನಿಶ್ಚಿತತೆಯು ಕಳವಳಕಾರಿಯಾದುದು ಹಾಗೂ ದೇಶದ ಪ್ರಜೆಗಳಿಗೆ ಅನಗತ್ಯವಾಗಿ ನೋವು ಉಂಟುಮಾಡುವಂಥದ್ದು’ ಎಂದು ಅದಾನಿ ಸಮೂಹದ ಮುಖ್ಯಸ್ಥ ಜತಿನ್ ಜಲುಂಧ್ವಾಲಾ ಪ್ರಕಟಣೆಯಲ್ಲಿ ಹೇಳಿದ್ದಾರೆ.