<p><strong>ಬೆಂಗಳೂರು:</strong> ‘ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಅನು ಗುಣವಾಗಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವುದಕ್ಕೆ ಆಕರ್ಷಕ ಉತ್ತೇಜನಾ ಕೊಡುಗೆಗಳನ್ನು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.</p>.<p>‘ರೈತರ ವರಮಾನವನ್ನು 2022ರ ಒಳಗಾಗಿ ಎರಡು ಪಟ್ಟು ಹೆಚ್ಚಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ಇದಕ್ಕೆ ಪೂರಕವಾಗಿಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್ಕೆಸಿಸಿಐ) ಬೆಂಗಳೂರಿನಲ್ಲಿ 2020ರ ಏಪ್ರಿಲ್ 22-26ರವರೆಗೆ ಆಗ್ರೊ ಫುಡ್ಟೆಕ್ ಆಯೋಜಿಸಿರುವುದು ಶ್ಲಾಘನೀಯ' ಎಂದರು.</p>.<p>ಎಫ್ಕೆಸಿಸಿಐನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಎಕ್ಸ್ಪೊದ ಲಾಂಛನ ಬಿಡುಗಡೆ ಮಾಡಿ, ಜಾಲತಾಣಕ್ಕೆ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬ್ರೋಷರ್ ಬಿಡುಗಡೆ ಮಾಡಿದರು.</p>.<p class="Subhead"><strong>ಎರಡು ವರ್ಷಕ್ಕೊಮ್ಮೆ ಎಕ್ಸ್ಪೊ:</strong> ‘2020ರ ಏಪ್ರಿಲ್ನ ಬಳಿಕಪ್ರತಿ ಎರಡು ವರ್ಷಕ್ಕೊಮ್ಮೆ ಎಕ್ಸ್ಪೊ ನಡೆಸಲಾಗು ವುದು. ಇಸ್ರೇಲ್, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಭಾಗವಹಿಸುವುದಾಗಿ ಹೇಳಿವೆ’ ಎಂದು ಎಫ್ಕೆಸಿಸಿಐನ ಅಧ್ಯಕ್ಷ ಸಿ.ಆರ್. ಜನಾರ್ಧನ್ ತಿಳಿಸಿದರು.</p>.<p>‘ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಹರಿಸಲಾಗುವುದು. ಯುವಜನತೆಯನ್ನು ಕೃಷಿಯೆಡೆಗೆ ಸೆಳೆಯುವುದು ಇದರ ಮೂಲ ಉದ್ದೇಶವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಅನು ಗುಣವಾಗಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವುದಕ್ಕೆ ಆಕರ್ಷಕ ಉತ್ತೇಜನಾ ಕೊಡುಗೆಗಳನ್ನು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.</p>.<p>‘ರೈತರ ವರಮಾನವನ್ನು 2022ರ ಒಳಗಾಗಿ ಎರಡು ಪಟ್ಟು ಹೆಚ್ಚಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ಇದಕ್ಕೆ ಪೂರಕವಾಗಿಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್ಕೆಸಿಸಿಐ) ಬೆಂಗಳೂರಿನಲ್ಲಿ 2020ರ ಏಪ್ರಿಲ್ 22-26ರವರೆಗೆ ಆಗ್ರೊ ಫುಡ್ಟೆಕ್ ಆಯೋಜಿಸಿರುವುದು ಶ್ಲಾಘನೀಯ' ಎಂದರು.</p>.<p>ಎಫ್ಕೆಸಿಸಿಐನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಎಕ್ಸ್ಪೊದ ಲಾಂಛನ ಬಿಡುಗಡೆ ಮಾಡಿ, ಜಾಲತಾಣಕ್ಕೆ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬ್ರೋಷರ್ ಬಿಡುಗಡೆ ಮಾಡಿದರು.</p>.<p class="Subhead"><strong>ಎರಡು ವರ್ಷಕ್ಕೊಮ್ಮೆ ಎಕ್ಸ್ಪೊ:</strong> ‘2020ರ ಏಪ್ರಿಲ್ನ ಬಳಿಕಪ್ರತಿ ಎರಡು ವರ್ಷಕ್ಕೊಮ್ಮೆ ಎಕ್ಸ್ಪೊ ನಡೆಸಲಾಗು ವುದು. ಇಸ್ರೇಲ್, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಭಾಗವಹಿಸುವುದಾಗಿ ಹೇಳಿವೆ’ ಎಂದು ಎಫ್ಕೆಸಿಸಿಐನ ಅಧ್ಯಕ್ಷ ಸಿ.ಆರ್. ಜನಾರ್ಧನ್ ತಿಳಿಸಿದರು.</p>.<p>‘ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಹರಿಸಲಾಗುವುದು. ಯುವಜನತೆಯನ್ನು ಕೃಷಿಯೆಡೆಗೆ ಸೆಳೆಯುವುದು ಇದರ ಮೂಲ ಉದ್ದೇಶವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>