<p><strong>ಅಹಮದಾಬಾದ್:</strong> ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ವಿಮಾ ಕ್ಲೇಮ್ಗಳನ್ನು ಇತ್ಯರ್ಥಪಡಿಸುವ ವಿಚಾರದಲ್ಲಿ ವಿಮಾ ಕಂಪನಿಗಳಿಗೆ ಹೊಸ ಸಮಸ್ಯೆಗಳು ಎದುರಾಗಿವೆ.</p>.<p>ವಿಮಾ ಪಾಲಿಸಿ ಹೊಂದಿದ್ದವರಷ್ಟೇ ಅಲ್ಲದೆ ಅವರು ನಾಮನಿರ್ದೇಶನ ಮಾಡಿದ್ದವರು ಕೂಡ ಮೃತಪಟ್ಟಿರುವುದು ಕಂಪನಿಗಳಿಗೆ ಸಮಸ್ಯೆ ತಂದಿತ್ತಿದೆ. ದುರಂತದಲ್ಲಿ ಇಡೀ ಕುಟುಂಬ ಜೀವ ಕಳೆದುಕೊಂಡ ನಿದರ್ಶನವೂ ಇದೆ. </p>.<p>ಮೃತ ಪ್ರಯಾಣಿಕರಿಗೆ ಹಾಗೂ ವಿಮಾನವು ಅಪ್ಪಳಿಸಿದ ಕಟ್ಟಡದಲ್ಲಿ ಇದ್ದು ಜೀವ ಕಳೆದುಕೊಂಡವರಿಗೆ ವಿಮಾ ಸೌಲಭ್ಯ ನೀಡುವಲ್ಲಿ ವಿಳಂಬ ಆಗಬಾರದು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಎಡಿಎಐ) ಹೇಳಿದೆ.</p>.<p class="title">ಇದರ ಅನ್ವಯ, ದೇಶದ ಪ್ರಮುಖ ವಿಮಾ ಕಂಪನಿಗಳು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಸಹಾಯಕೇಂದ್ರ ಆರಂಭಿಸಿವೆ.</p>.<p class="title">ವಿಮೆ ಪಡೆದ ವ್ಯಕ್ತಿಯು ತಮ್ಮ ಸಂಗಾತಿಯನ್ನು ನಾಮನಿರ್ದೇಶನ ಮಾಡಿದ್ದರು. ಆದರೆ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಎಲ್ಐಸಿ ಅಧಿಕಾರಿ ಆಶಿಷ್ ಶುಕ್ಲಾ ತಿಳಿಸಿದ್ದಾರೆ.</p>.<p class="title">ಕಂಪನಿಯೊಂದರ ನಿರ್ದೇಶಕ ಹಾಗೂ ಅವರು ನಾಮನಿರ್ದೇಶನ ಮಾಡಿದ್ದ ಪತ್ನಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಇಫ್ಕೊ ಟೋಕಿಯೊ ವಿಮಾ ಕಂಪನಿಯ ಅಧಿಕಾರಿ ಮನ್ಪ್ರೀತ್ ಸಿಂಗ್ ಸಭರ್ವಾಲ್ ಹೇಳಿದ್ದಾರೆ. ಇದೇ ಬಗೆಯ ಪರಿಸ್ಥಿತಿಯು ಟಾಟಾ ಎಐಎ ವಿಮಾ ಕಂಪನಿಗೂ ಎದುರಾಗಿದೆ.</p>.<p class="title">ವಿಮೆ ಖರೀದಿಸಿರುವ ವ್ಯಕ್ತಿ ಹಾಗೂ ನಾಮನಿರ್ದೇಶನ ಆಗಿರುವ ವ್ಯಕ್ತಿ ಮೃತಪಟ್ಟಾಗ ಕ್ಲೇಮ್ ಇತ್ಯರ್ಥಪಡಿಸುವುದು ಕಷ್ಟವಾಗುತ್ತದೆ ಎಂದು ಕಂಪನಿಗಳ ಪ್ರತಿನಿಧಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ವಿಮಾ ಕ್ಲೇಮ್ಗಳನ್ನು ಇತ್ಯರ್ಥಪಡಿಸುವ ವಿಚಾರದಲ್ಲಿ ವಿಮಾ ಕಂಪನಿಗಳಿಗೆ ಹೊಸ ಸಮಸ್ಯೆಗಳು ಎದುರಾಗಿವೆ.</p>.<p>ವಿಮಾ ಪಾಲಿಸಿ ಹೊಂದಿದ್ದವರಷ್ಟೇ ಅಲ್ಲದೆ ಅವರು ನಾಮನಿರ್ದೇಶನ ಮಾಡಿದ್ದವರು ಕೂಡ ಮೃತಪಟ್ಟಿರುವುದು ಕಂಪನಿಗಳಿಗೆ ಸಮಸ್ಯೆ ತಂದಿತ್ತಿದೆ. ದುರಂತದಲ್ಲಿ ಇಡೀ ಕುಟುಂಬ ಜೀವ ಕಳೆದುಕೊಂಡ ನಿದರ್ಶನವೂ ಇದೆ. </p>.<p>ಮೃತ ಪ್ರಯಾಣಿಕರಿಗೆ ಹಾಗೂ ವಿಮಾನವು ಅಪ್ಪಳಿಸಿದ ಕಟ್ಟಡದಲ್ಲಿ ಇದ್ದು ಜೀವ ಕಳೆದುಕೊಂಡವರಿಗೆ ವಿಮಾ ಸೌಲಭ್ಯ ನೀಡುವಲ್ಲಿ ವಿಳಂಬ ಆಗಬಾರದು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಎಡಿಎಐ) ಹೇಳಿದೆ.</p>.<p class="title">ಇದರ ಅನ್ವಯ, ದೇಶದ ಪ್ರಮುಖ ವಿಮಾ ಕಂಪನಿಗಳು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಸಹಾಯಕೇಂದ್ರ ಆರಂಭಿಸಿವೆ.</p>.<p class="title">ವಿಮೆ ಪಡೆದ ವ್ಯಕ್ತಿಯು ತಮ್ಮ ಸಂಗಾತಿಯನ್ನು ನಾಮನಿರ್ದೇಶನ ಮಾಡಿದ್ದರು. ಆದರೆ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಎಲ್ಐಸಿ ಅಧಿಕಾರಿ ಆಶಿಷ್ ಶುಕ್ಲಾ ತಿಳಿಸಿದ್ದಾರೆ.</p>.<p class="title">ಕಂಪನಿಯೊಂದರ ನಿರ್ದೇಶಕ ಹಾಗೂ ಅವರು ನಾಮನಿರ್ದೇಶನ ಮಾಡಿದ್ದ ಪತ್ನಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಇಫ್ಕೊ ಟೋಕಿಯೊ ವಿಮಾ ಕಂಪನಿಯ ಅಧಿಕಾರಿ ಮನ್ಪ್ರೀತ್ ಸಿಂಗ್ ಸಭರ್ವಾಲ್ ಹೇಳಿದ್ದಾರೆ. ಇದೇ ಬಗೆಯ ಪರಿಸ್ಥಿತಿಯು ಟಾಟಾ ಎಐಎ ವಿಮಾ ಕಂಪನಿಗೂ ಎದುರಾಗಿದೆ.</p>.<p class="title">ವಿಮೆ ಖರೀದಿಸಿರುವ ವ್ಯಕ್ತಿ ಹಾಗೂ ನಾಮನಿರ್ದೇಶನ ಆಗಿರುವ ವ್ಯಕ್ತಿ ಮೃತಪಟ್ಟಾಗ ಕ್ಲೇಮ್ ಇತ್ಯರ್ಥಪಡಿಸುವುದು ಕಷ್ಟವಾಗುತ್ತದೆ ಎಂದು ಕಂಪನಿಗಳ ಪ್ರತಿನಿಧಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>