‘ಬ್ಯಾಂಕ್ಗಳ ಬಳಿ ಹೆಚ್ಚುವರಿಯಾಗಿ ಇರುವ ₹ 7 ಲಕ್ಷ ಕೋಟಿ ಮೊತ್ತದ ನಗದು, ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕ್ಗಳಿಗೆ ದೀರ್ಘಾವಧಿ ಸಾಲ ನೀಡುವ ಆರ್ಬಿಐ ನಿರ್ಧಾರ ಮತ್ತು ಇನ್ನಷ್ಟು ಬಡ್ಡಿ ದರ ಕಡಿತದ ನಿರೀಕ್ಷೆಯಿಂದ ಬಾಂಡ್ ಮಾರುಕಟ್ಟೆಯಲ್ಲಿ ನಗದುತನ ಕಂಡು ಬರಲಿದೆ. ಸದ್ಯದ ಸವಾಲಿನ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ವಹಿವಾಟು ಸಹಜಸ್ಥಿತಿಯಲ್ಲಿ ಇರಲಿದೆ. ಹೂಡಿಕೆದಾರರ ಹಿತರಕ್ಷಿಸಲು ಉದ್ದಿಮೆಯು ಬದ್ಧವಾಗಿದೆ. ಆತಂಕಕ್ಕೆ ಒಳಗಾಗಿ ಹೂಡಿಕೆ ಮರಳಿಸಿ ಹಣ ಹಿಂದೆ ಪಡೆಯುವ ಅಗತ್ಯ ಇಲ್ಲ‘ ಎಂದು ‘ಎಂಎಂಎಫ್ಐ’ ಅಧ್ಯಕ್ಷ ನಿಲೇಶ್ ಶಾ ಹೇಳಿದ್ದಾರೆ.