<p><strong>ಶಿರಸಿ:</strong> ನಗರದಲ್ಲಿ ಹಸಿ ಅಡಿಕೆ ದರ ಶನಿವಾರ ಸಂಜೆ ಪ್ರತಿ ಕ್ವಿಂಟಲ್ಗೆ ₹7 ಸಾವಿರ ದರ ತಲುಪಿದೆ. ಟಿಎಸ್ಎಸ್ ಆವಾರದಲ್ಲಿ ನಡೆಯುತ್ತಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಈ ಮೊತ್ತ ದಾಖಲಾಯಿತು.</p>.<p>ಮೊದಲ ಬಾರಿಗೆ ದಿನಕ್ಕೆ ಎರಡು ಬಾರಿ ಟೆಂಡರ್ ಪ್ರಕ್ರಿಯೆಯನ್ನು ಟಿಎಸ್ಎಸ್ ಸಂಸ್ಥೆ ನಡೆಸಿತು. ಸಂಜೆ ಟೆಂಡರ್ನಲ್ಲಿ ಹಸಿ ಅಡಿಕೆ ₹7,001 ದರದಲ್ಲಿ ಮಾರಾಟಗೊಂಡಿದೆ. ಸುಮಾರು 3 ಕ್ವಿಂಟಲ್ನಷ್ಟು ಅಡಿಕೆಗೆ ಈ ದರ ಲಭಿಸಿತು. ಎರಡನೇ ಅವಧಿಯ ಟೆಂಡರ್ನಲ್ಲಿ 100 ಕ್ವಿಂಟಲ್ಗೂ ಹೆಚ್ಚು ತೂಕದ ಅಡಿಕೆ ಮಾರಾಟಗೊಂಡಿತು ಎಂದು ಪ್ರತಿನಿಧಿಯೊಬ್ಬರು ಹೇಳಿದರು. ನ.5ರಿಂದ ಶಿರಸಿ ಮಾರುಕಟ್ಟೆಯಲ್ಲಿ ಟೆಂಡರ್ ಮೂಲಕ ಅಡಿಕೆ ಖರೀದಿ ಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಶೇ 60ಕ್ಕಿಂತ ಹೆಚ್ಚು ಹಸಿ ಅಡಿಕೆ ಫಸಲನ್ನೇ ರೈತರು ಮಾರಾಟ ನಡೆಸಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಜನವರಿ ಆರಂಭದಿಂದ ಸರಾಸರಿ ₹6,000ರಿಂದ ₹6,500 ದರಕ್ಕೆ ಅಡಿಕೆ ಮಾರಾಟವಾಗುತ್ತಿದೆ. ದರ ಹೆಚ್ಚಿರುವುದು ಆಶಾಭಾವ ಮೂಡಿದೆ ಎಂದು ಅಡಿಕೆ ತಂದ ರೈತ ಅನಂತ ನಾಯ್ಕ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ನಗರದಲ್ಲಿ ಹಸಿ ಅಡಿಕೆ ದರ ಶನಿವಾರ ಸಂಜೆ ಪ್ರತಿ ಕ್ವಿಂಟಲ್ಗೆ ₹7 ಸಾವಿರ ದರ ತಲುಪಿದೆ. ಟಿಎಸ್ಎಸ್ ಆವಾರದಲ್ಲಿ ನಡೆಯುತ್ತಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಈ ಮೊತ್ತ ದಾಖಲಾಯಿತು.</p>.<p>ಮೊದಲ ಬಾರಿಗೆ ದಿನಕ್ಕೆ ಎರಡು ಬಾರಿ ಟೆಂಡರ್ ಪ್ರಕ್ರಿಯೆಯನ್ನು ಟಿಎಸ್ಎಸ್ ಸಂಸ್ಥೆ ನಡೆಸಿತು. ಸಂಜೆ ಟೆಂಡರ್ನಲ್ಲಿ ಹಸಿ ಅಡಿಕೆ ₹7,001 ದರದಲ್ಲಿ ಮಾರಾಟಗೊಂಡಿದೆ. ಸುಮಾರು 3 ಕ್ವಿಂಟಲ್ನಷ್ಟು ಅಡಿಕೆಗೆ ಈ ದರ ಲಭಿಸಿತು. ಎರಡನೇ ಅವಧಿಯ ಟೆಂಡರ್ನಲ್ಲಿ 100 ಕ್ವಿಂಟಲ್ಗೂ ಹೆಚ್ಚು ತೂಕದ ಅಡಿಕೆ ಮಾರಾಟಗೊಂಡಿತು ಎಂದು ಪ್ರತಿನಿಧಿಯೊಬ್ಬರು ಹೇಳಿದರು. ನ.5ರಿಂದ ಶಿರಸಿ ಮಾರುಕಟ್ಟೆಯಲ್ಲಿ ಟೆಂಡರ್ ಮೂಲಕ ಅಡಿಕೆ ಖರೀದಿ ಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಶೇ 60ಕ್ಕಿಂತ ಹೆಚ್ಚು ಹಸಿ ಅಡಿಕೆ ಫಸಲನ್ನೇ ರೈತರು ಮಾರಾಟ ನಡೆಸಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಜನವರಿ ಆರಂಭದಿಂದ ಸರಾಸರಿ ₹6,000ರಿಂದ ₹6,500 ದರಕ್ಕೆ ಅಡಿಕೆ ಮಾರಾಟವಾಗುತ್ತಿದೆ. ದರ ಹೆಚ್ಚಿರುವುದು ಆಶಾಭಾವ ಮೂಡಿದೆ ಎಂದು ಅಡಿಕೆ ತಂದ ರೈತ ಅನಂತ ನಾಯ್ಕ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>