<p><strong>ನವದೆಹಲಿ</strong>: ಮಾರುತಿ ಸುಜುಕಿ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಖಟ್ಟರ್ (79) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.</p>.<p>2002ರಲ್ಲಿ ಸರ್ಕಾರವು ಕಂಪನಿಯಲ್ಲಿ ತಾನು ಹೊಂದಿದ್ದ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದ ನಂತರ ‘ಮಾರುತಿ’ಯ ಬೆಳವಣಿಗೆಗೆ ಅಡಿಪಾಯ ಹಾಕಿದವರಲ್ಲಿ ಒಬ್ಬರೆಂದು ಕಟ್ಟರ್ ಅವರನ್ನು ಪರಿಗಣಿಸಲಾಗಿದೆ.</p>.<p>ಅವರು 1993ರ ಜುಲೈನಲ್ಲಿ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿ ಮಾರುತಿ ಉದ್ಯೋಗ್ ಲಿಮಿಟೆಡ್ ಸೇರಿದರು. ಬಳಿಕ ಆರು ವರ್ಷಗಳಲ್ಲಿ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಏರಿದರು. 1999ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಅವರಿಗೆ ಬಡ್ತಿ ನೀಡಲಾಯಿತು. 2002ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಮರುನೇಮಕ ಆದರು. 2007ರಲ್ಲಿ ನಿವೃತ್ತಿ ಹೊಂದಿದರು.</p>.<p>ಮಾರುತಿ ಕಂಪನಿಯಲ್ಲಿನ ಹುದ್ದೆಗೂ ಮುನ್ನ ಐಎಎಸ್ ಅಧಿಕಾರಿಯಾಗಿ 37 ವರ್ಷಗಳ ಕರ್ತವ್ಯ ನಿಭಾಯಿಸಿದ್ದರು.</p>.<p>ಮಾರುತಿಯಿಂದ ಹೊರಬಂದ ಬಳಿಕ ಪ್ರೇಮ್ಜಿ ಇನ್ವೆಸ್ಟ್ ಮತ್ತು ಗಜ ಕ್ಯಾಪಿಟಲ್ನಂತಹ ಹೂಡಿಕೆದಾರರ ಜೊತೆಗೂಡಿ ಕಾರ್ನೇಷನ್ ಆಟೊ ಎನ್ನುವ ಕಾರು ಸೇವಾ ಸಂಸ್ಥೆ ಸ್ಥಾಪಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಾರುತಿ ಸುಜುಕಿ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಖಟ್ಟರ್ (79) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.</p>.<p>2002ರಲ್ಲಿ ಸರ್ಕಾರವು ಕಂಪನಿಯಲ್ಲಿ ತಾನು ಹೊಂದಿದ್ದ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದ ನಂತರ ‘ಮಾರುತಿ’ಯ ಬೆಳವಣಿಗೆಗೆ ಅಡಿಪಾಯ ಹಾಕಿದವರಲ್ಲಿ ಒಬ್ಬರೆಂದು ಕಟ್ಟರ್ ಅವರನ್ನು ಪರಿಗಣಿಸಲಾಗಿದೆ.</p>.<p>ಅವರು 1993ರ ಜುಲೈನಲ್ಲಿ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿ ಮಾರುತಿ ಉದ್ಯೋಗ್ ಲಿಮಿಟೆಡ್ ಸೇರಿದರು. ಬಳಿಕ ಆರು ವರ್ಷಗಳಲ್ಲಿ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಏರಿದರು. 1999ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಅವರಿಗೆ ಬಡ್ತಿ ನೀಡಲಾಯಿತು. 2002ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಮರುನೇಮಕ ಆದರು. 2007ರಲ್ಲಿ ನಿವೃತ್ತಿ ಹೊಂದಿದರು.</p>.<p>ಮಾರುತಿ ಕಂಪನಿಯಲ್ಲಿನ ಹುದ್ದೆಗೂ ಮುನ್ನ ಐಎಎಸ್ ಅಧಿಕಾರಿಯಾಗಿ 37 ವರ್ಷಗಳ ಕರ್ತವ್ಯ ನಿಭಾಯಿಸಿದ್ದರು.</p>.<p>ಮಾರುತಿಯಿಂದ ಹೊರಬಂದ ಬಳಿಕ ಪ್ರೇಮ್ಜಿ ಇನ್ವೆಸ್ಟ್ ಮತ್ತು ಗಜ ಕ್ಯಾಪಿಟಲ್ನಂತಹ ಹೂಡಿಕೆದಾರರ ಜೊತೆಗೂಡಿ ಕಾರ್ನೇಷನ್ ಆಟೊ ಎನ್ನುವ ಕಾರು ಸೇವಾ ಸಂಸ್ಥೆ ಸ್ಥಾಪಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>