<p><strong>ಬೆಂಗಳೂರು</strong>: ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಕಂಪನಿ (ಎನ್ಬಿಎಫ್ಸಿ) ಬಜಾಜ್ ಫೈನಾನ್ಸ್ ಲಿಮಿಟೆಡ್ ಈ ಬಾರಿಯ ಹಬ್ಬದ ಋತುವಿನಲ್ಲಿ ನೀಡಿರುವ ಗ್ರಾಹಕ ಸಾಲದ ಮೊತ್ತವು ಹಿಂದಿನ ವರ್ಷದ ಹಬ್ಬದ ಋತುವಿನಲ್ಲಿ ನೀಡಿದ ಗ್ರಾಹಕ ಸಾಲದ ಮೊತ್ತಕ್ಕೆ ಹೋಲಿಸಿದರೆ ಶೇಕಡ 29ರಷ್ಟು ಹೆಚ್ಚಳವಾಗಿದೆ.</p>.<p>ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿಗೆ ಪಡೆದಿರುವ ಸಾಲದ ಮೊತ್ತದಲ್ಲಿನ ಏರಿಕೆಯು, ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಜಿಎಸ್ಟಿ ದರದಲ್ಲಿ ತಂದ ಪರಿಷ್ಕರಣೆ, ವೈಯಕ್ತಿಕ ತೆರಿಗೆಯಲ್ಲಿ ಜಾರಿಗೆ ತಂದ ವಿನಾಯಿತಿಗಳ ಧನಾತ್ಮಕ ಪರಿಣಾಮವನ್ನು ತೋರಿಸುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. </p>.<p>ಸೆಪ್ಟೆಂಬರ್ 22ರಿಂದ ಅಕ್ಟೋಬರ್ 26ರ ನಡುವಿನ ಅವಧಿಯಲ್ಲಿ ಬಜಾಜ್ ಫೈನಾನ್ಸ್ ಕಂಪನಿಯು 63 ಲಕ್ಷ ಹೊಸ ಸಾಲ ವಿತರಣೆ ಮಾಡಿರುವುದಾಗಿ ಹೇಳಿದೆ.</p>.<p>‘ಸರ್ಕಾರವು ಜಾರಿಗೆ ತಂದ ಜಿಎಸ್ಟಿ ಸುಧಾರಣೆಗಳು ಹಾಗೂ ವೈಯಕ್ತಿಕ ತೆರಿಗೆ ಹಂತಗಳಲ್ಲಿನ ಬದಲಾವಣೆಗಳು ದೇಶದಲ್ಲಿ ಬೇಡಿಕೆಗೆ ಹೊಸದಾಗಿ ಉತ್ತೇಜನ ನೀಡುವ ಕೆಲಸ ಮಾಡಿವೆ. ಈ ಕ್ರಮಗಳ ಕಾರಣದಿಂದಾಗಿ ದೇಶದ ಮಧ್ಯಮ ಹಾಗೂ ಕಡಿಮೆ ಆದಾಯದ ಕುಟುಂಬಗಳು ಹಬ್ಬದ ಸಂದರ್ಭದಲ್ಲಿ ಹೆಚ್ಚು ವಿಶ್ವಾಸದಿಂದ ಖರ್ಚು ಮಾಡುವಂತಾಗಿದೆ’ ಎಂದು ಕಂಪನಿಯ ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಕಂಪನಿ (ಎನ್ಬಿಎಫ್ಸಿ) ಬಜಾಜ್ ಫೈನಾನ್ಸ್ ಲಿಮಿಟೆಡ್ ಈ ಬಾರಿಯ ಹಬ್ಬದ ಋತುವಿನಲ್ಲಿ ನೀಡಿರುವ ಗ್ರಾಹಕ ಸಾಲದ ಮೊತ್ತವು ಹಿಂದಿನ ವರ್ಷದ ಹಬ್ಬದ ಋತುವಿನಲ್ಲಿ ನೀಡಿದ ಗ್ರಾಹಕ ಸಾಲದ ಮೊತ್ತಕ್ಕೆ ಹೋಲಿಸಿದರೆ ಶೇಕಡ 29ರಷ್ಟು ಹೆಚ್ಚಳವಾಗಿದೆ.</p>.<p>ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿಗೆ ಪಡೆದಿರುವ ಸಾಲದ ಮೊತ್ತದಲ್ಲಿನ ಏರಿಕೆಯು, ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಜಿಎಸ್ಟಿ ದರದಲ್ಲಿ ತಂದ ಪರಿಷ್ಕರಣೆ, ವೈಯಕ್ತಿಕ ತೆರಿಗೆಯಲ್ಲಿ ಜಾರಿಗೆ ತಂದ ವಿನಾಯಿತಿಗಳ ಧನಾತ್ಮಕ ಪರಿಣಾಮವನ್ನು ತೋರಿಸುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. </p>.<p>ಸೆಪ್ಟೆಂಬರ್ 22ರಿಂದ ಅಕ್ಟೋಬರ್ 26ರ ನಡುವಿನ ಅವಧಿಯಲ್ಲಿ ಬಜಾಜ್ ಫೈನಾನ್ಸ್ ಕಂಪನಿಯು 63 ಲಕ್ಷ ಹೊಸ ಸಾಲ ವಿತರಣೆ ಮಾಡಿರುವುದಾಗಿ ಹೇಳಿದೆ.</p>.<p>‘ಸರ್ಕಾರವು ಜಾರಿಗೆ ತಂದ ಜಿಎಸ್ಟಿ ಸುಧಾರಣೆಗಳು ಹಾಗೂ ವೈಯಕ್ತಿಕ ತೆರಿಗೆ ಹಂತಗಳಲ್ಲಿನ ಬದಲಾವಣೆಗಳು ದೇಶದಲ್ಲಿ ಬೇಡಿಕೆಗೆ ಹೊಸದಾಗಿ ಉತ್ತೇಜನ ನೀಡುವ ಕೆಲಸ ಮಾಡಿವೆ. ಈ ಕ್ರಮಗಳ ಕಾರಣದಿಂದಾಗಿ ದೇಶದ ಮಧ್ಯಮ ಹಾಗೂ ಕಡಿಮೆ ಆದಾಯದ ಕುಟುಂಬಗಳು ಹಬ್ಬದ ಸಂದರ್ಭದಲ್ಲಿ ಹೆಚ್ಚು ವಿಶ್ವಾಸದಿಂದ ಖರ್ಚು ಮಾಡುವಂತಾಗಿದೆ’ ಎಂದು ಕಂಪನಿಯ ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>