<p><strong>ಭದ್ರಾವತಿ: </strong>ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲು ಭಾರತೀಯ ಉಕ್ಕು ಪ್ರಾಧಿಕಾರವು ಗುರುವಾರ ಅಧಿಕೃತವಾಗಿ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿ, ಪ್ರಕಟಣೆ ಹೊರಡಿಸಿದೆ.</p>.<p>ಉಕ್ಕು ಪ್ರಾಧಿಕಾರ ವ್ಯಾಪ್ತಿಯ ದುರ್ಗಾಪುರ, ಸೇಲಂ ಹಾಗೂ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿ ಖರೀದಿಸುವ ಸಂಬಂಧ ಬಿಡ್ ಕರೆಯಲಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 1 ಕಡೆಯ ದಿನವಾಗಿದೆ.</p>.<p>ವಿಐಎಸ್ಎಲ್ ಕಾರ್ಖಾನೆ ಮಾರಾಟಕ್ಕೆ 2007ರಿಂದ ಪ್ರಕ್ರಿಯೆಯ ಅರಂಭವಾಗಿತ್ತು. 12 ವರ್ಷಗಳ ನಂತರ ಇದೀಗ ಅಧಿಕೃತವಾಗಿ ಮಾರಾಟಕ್ಕೆ ಚಾಲನೆ ದೊರೆತಿದೆ.</p>.<p>ಸಂಸದ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ಸಂಸತ್ತಿನಲ್ಲಿ ಶೂನ್ಯವೇಳೆಯಲ್ಲಿ ಕಾರ್ಖಾನೆ ಹಾಗು ಕಾರ್ಮಿಕರ ರಕ್ಷಣೆಗಾಗಿ ಮಾಡಿದ ಮನವಿಯ 48 ಗಂಟೆಯೊಳಗೇ ಮಾರಾಟಕ್ಕೆ ಪ್ರಕಟಣೆ ಹೊರಬಿದ್ದಿದೆ.</p>.<p>‘ರಾಜ್ಯ ಸರ್ಕಾರ 1989 ರಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರದ ಉಕ್ಕು ಪ್ರಾಧಿಕಾರಕ್ಕೆ ಕೇವಲ ₹1ಕ್ಕೆ ಹಸ್ತಾಂತರಿಸುವ ಮೂಲಕ ಸುಮಾರು ₹75,000 ಕೋಟಿ ಬಂಡವಾಳ ಹೂಡಿಕೆ ಭರವಸೆ ಪಡೆದಿತ್ತು. ಆದರೆ ಇಲ್ಲಿ ತನಕ ಸಿಕ್ಕಿರುವುದು ಕೇವಲ ₹125 ಕೋಟಿ ಮೊತ್ತ’ ಎಂಬ ಮಾತನ್ನು ಹೇಳಿದ ಮೊದಲ ಸಂಸದ ರಾಘವೇಂದ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯ ಗುರುವಾರ ಮಧ್ಯಾಹ್ನದಿಂದ ಸ್ಥಗಿತವಾಗಿದೆ.</p>.<p>ಸಂಸತ್ತಿನಲ್ಲಿ ಸವಿಸ್ತಾರವಾಗಿ ಅಂದು ಮಾತನಾಡಿದ್ದ ಸಂಸದರು, ‘ಕಳೆದ 30 ವರ್ಷದಿಂದ ಯಾವುದೇ ಬಂಡವಾಳ ಹೂಡದೆ ಲಾಭ ನಿರೀಕ್ಷೆ ಮಾಡುವುದು ಸರಿಯಲ್ಲ. ಅಲ್ಲಿನ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಬ್ಲಾಸ್ಟ್ ಫರ್ನೇಸ್ ಉತ್ಪಾದನೆ ಆರಂಭಿಸಿ’ಎಂದು ಆಗ್ರಹಿಸಿದ್ದರು.</p>.<p>ರಾಷ್ಟ್ರದ ಪ್ರಥಮ ಸಾರ್ವಜನಿಕ ಉದ್ದಿಮೆ ಎಂಬ ಕೀರ್ತಿಗೆ ಪಾತ್ರವಾಗಿ ನೂರನೇ ವರ್ಷದ ಸಂಭ್ರಮಾಚರಣೆ ನಡೆಸುವ ಹೊಸ್ತಿಲಲ್ಲಿ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿರುವುದು ಅಸಂತೋಷಕ್ಕೆ ಕಾರಣವಾಗಿದೆ.</p>.<p><strong>ಸಾರ್ವಜನಿಕ ಉದ್ದಿಮೆ ಉಳಿಯಬೇಕು: </strong>ಟೆಂಡರ್ ಪ್ರಕ್ರಿಯೆಯನ್ನು ಈ ಕೂಡಲೇ ಹಿಂದಕ್ಕೆ ಪಡೆದು ಸಾರ್ವಜನಿಕ ಉದ್ದಿಮೆಯಾಗಿ ಉಳಿಸಬೇಕು. ಅದಕ್ಕೆ ಅಗತ್ಯ ಹೋರಾಟ ಮಾಡಲು ಸಿದ್ಧವಿದ್ದೇವೆ -<strong>ಬಿ.ಕೆ.ಸಂಗಮೇಶ್ವರ, ಭದ್ರಾವತಿ ಶಾಸಕ.</strong></p>.<p><strong>ಕಾರ್ಖಾನೆ ಮತ್ತು ಕಾರ್ಮಿಕರ ಹಿತ ಕಾಯುತ್ತೇವೆ:</strong>ಷೇರು ವಿಕ್ರಯದಿಂದ ಹೊರತರುವ ಪ್ರಯತ್ನವನ್ನು 10 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಕಾರ್ಖಾನೆ ಮತ್ತು ಕಾರ್ಮಿಕರ ಹಿತ ಕಾಯವ ಕೆಲಸ ಮಾಡುತ್ತೇವೆ - <strong>ಸಂಸದ ಬಿ.ವೈ.ರಾಘವೇಂದ್ರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲು ಭಾರತೀಯ ಉಕ್ಕು ಪ್ರಾಧಿಕಾರವು ಗುರುವಾರ ಅಧಿಕೃತವಾಗಿ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿ, ಪ್ರಕಟಣೆ ಹೊರಡಿಸಿದೆ.</p>.<p>ಉಕ್ಕು ಪ್ರಾಧಿಕಾರ ವ್ಯಾಪ್ತಿಯ ದುರ್ಗಾಪುರ, ಸೇಲಂ ಹಾಗೂ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿ ಖರೀದಿಸುವ ಸಂಬಂಧ ಬಿಡ್ ಕರೆಯಲಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 1 ಕಡೆಯ ದಿನವಾಗಿದೆ.</p>.<p>ವಿಐಎಸ್ಎಲ್ ಕಾರ್ಖಾನೆ ಮಾರಾಟಕ್ಕೆ 2007ರಿಂದ ಪ್ರಕ್ರಿಯೆಯ ಅರಂಭವಾಗಿತ್ತು. 12 ವರ್ಷಗಳ ನಂತರ ಇದೀಗ ಅಧಿಕೃತವಾಗಿ ಮಾರಾಟಕ್ಕೆ ಚಾಲನೆ ದೊರೆತಿದೆ.</p>.<p>ಸಂಸದ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ಸಂಸತ್ತಿನಲ್ಲಿ ಶೂನ್ಯವೇಳೆಯಲ್ಲಿ ಕಾರ್ಖಾನೆ ಹಾಗು ಕಾರ್ಮಿಕರ ರಕ್ಷಣೆಗಾಗಿ ಮಾಡಿದ ಮನವಿಯ 48 ಗಂಟೆಯೊಳಗೇ ಮಾರಾಟಕ್ಕೆ ಪ್ರಕಟಣೆ ಹೊರಬಿದ್ದಿದೆ.</p>.<p>‘ರಾಜ್ಯ ಸರ್ಕಾರ 1989 ರಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರದ ಉಕ್ಕು ಪ್ರಾಧಿಕಾರಕ್ಕೆ ಕೇವಲ ₹1ಕ್ಕೆ ಹಸ್ತಾಂತರಿಸುವ ಮೂಲಕ ಸುಮಾರು ₹75,000 ಕೋಟಿ ಬಂಡವಾಳ ಹೂಡಿಕೆ ಭರವಸೆ ಪಡೆದಿತ್ತು. ಆದರೆ ಇಲ್ಲಿ ತನಕ ಸಿಕ್ಕಿರುವುದು ಕೇವಲ ₹125 ಕೋಟಿ ಮೊತ್ತ’ ಎಂಬ ಮಾತನ್ನು ಹೇಳಿದ ಮೊದಲ ಸಂಸದ ರಾಘವೇಂದ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯ ಗುರುವಾರ ಮಧ್ಯಾಹ್ನದಿಂದ ಸ್ಥಗಿತವಾಗಿದೆ.</p>.<p>ಸಂಸತ್ತಿನಲ್ಲಿ ಸವಿಸ್ತಾರವಾಗಿ ಅಂದು ಮಾತನಾಡಿದ್ದ ಸಂಸದರು, ‘ಕಳೆದ 30 ವರ್ಷದಿಂದ ಯಾವುದೇ ಬಂಡವಾಳ ಹೂಡದೆ ಲಾಭ ನಿರೀಕ್ಷೆ ಮಾಡುವುದು ಸರಿಯಲ್ಲ. ಅಲ್ಲಿನ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಬ್ಲಾಸ್ಟ್ ಫರ್ನೇಸ್ ಉತ್ಪಾದನೆ ಆರಂಭಿಸಿ’ಎಂದು ಆಗ್ರಹಿಸಿದ್ದರು.</p>.<p>ರಾಷ್ಟ್ರದ ಪ್ರಥಮ ಸಾರ್ವಜನಿಕ ಉದ್ದಿಮೆ ಎಂಬ ಕೀರ್ತಿಗೆ ಪಾತ್ರವಾಗಿ ನೂರನೇ ವರ್ಷದ ಸಂಭ್ರಮಾಚರಣೆ ನಡೆಸುವ ಹೊಸ್ತಿಲಲ್ಲಿ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿರುವುದು ಅಸಂತೋಷಕ್ಕೆ ಕಾರಣವಾಗಿದೆ.</p>.<p><strong>ಸಾರ್ವಜನಿಕ ಉದ್ದಿಮೆ ಉಳಿಯಬೇಕು: </strong>ಟೆಂಡರ್ ಪ್ರಕ್ರಿಯೆಯನ್ನು ಈ ಕೂಡಲೇ ಹಿಂದಕ್ಕೆ ಪಡೆದು ಸಾರ್ವಜನಿಕ ಉದ್ದಿಮೆಯಾಗಿ ಉಳಿಸಬೇಕು. ಅದಕ್ಕೆ ಅಗತ್ಯ ಹೋರಾಟ ಮಾಡಲು ಸಿದ್ಧವಿದ್ದೇವೆ -<strong>ಬಿ.ಕೆ.ಸಂಗಮೇಶ್ವರ, ಭದ್ರಾವತಿ ಶಾಸಕ.</strong></p>.<p><strong>ಕಾರ್ಖಾನೆ ಮತ್ತು ಕಾರ್ಮಿಕರ ಹಿತ ಕಾಯುತ್ತೇವೆ:</strong>ಷೇರು ವಿಕ್ರಯದಿಂದ ಹೊರತರುವ ಪ್ರಯತ್ನವನ್ನು 10 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಕಾರ್ಖಾನೆ ಮತ್ತು ಕಾರ್ಮಿಕರ ಹಿತ ಕಾಯವ ಕೆಲಸ ಮಾಡುತ್ತೇವೆ - <strong>ಸಂಸದ ಬಿ.ವೈ.ರಾಘವೇಂದ್ರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>