‘ರಾಜ್ಯ ಸರ್ಕಾರ 1989 ರಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರದ ಉಕ್ಕು ಪ್ರಾಧಿಕಾರಕ್ಕೆ ಕೇವಲ ₹1ಕ್ಕೆ ಹಸ್ತಾಂತರಿಸುವ ಮೂಲಕ ಸುಮಾರು ₹75,000 ಕೋಟಿ ಬಂಡವಾಳ ಹೂಡಿಕೆ ಭರವಸೆ ಪಡೆದಿತ್ತು. ಆದರೆ ಇಲ್ಲಿ ತನಕ ಸಿಕ್ಕಿರುವುದು ಕೇವಲ ₹125 ಕೋಟಿ ಮೊತ್ತ’ ಎಂಬ ಮಾತನ್ನು ಹೇಳಿದ ಮೊದಲ ಸಂಸದ ರಾಘವೇಂದ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯ ಗುರುವಾರ ಮಧ್ಯಾಹ್ನದಿಂದ ಸ್ಥಗಿತವಾಗಿದೆ.