ನಾಗವಾರಪಾಳ್ಯ, ಕಗ್ಗದಾಸಪುರ, ವಿದ್ಯಾರಣ್ಯಪುರದ ಕೊಳೆಗೇರಿ ನಿವಾಸಿಗಳು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ತೃತೀಯ ಲಿಂಗಿಗಳಿಗೆ ಒಟ್ಟು ₹ 5 ಲಕ್ಷ ಮೌಲ್ಯದ 500 ದಿನಸಿ ಕಿಟ್ಗಳನ್ನು ವಿತರಿಸಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ‘ಸಮಾಜದ ದುರ್ಬಲ ವರ್ಗಗಳಿಗೆ ನೆರವಾಗುವುದು ನಮ್ಮ ಭಾಗ್ಯ. ಇಂತಹ ಕುಟುಂಬಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವೂ ಹೌದು’ ಎಂದು ‘ಭೀಮ’ದ ನಿರ್ದೇಶಕ ವಿಷ್ಣುಶರಣ್ ಕೆ. ಭಟ್ ಹೇಳಿದ್ದಾರೆ.