ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಮೆಂಟ್, ಉಕ್ಕು ಉದ್ಯಮದಿಂದ ಬೆಲೆ ಹೆಚ್ಚಳ ಕೂಟ’

Last Updated 10 ಜನವರಿ 2021, 16:46 IST
ಅಕ್ಷರ ಗಾತ್ರ

ಮುಂಬೈ: ಉಕ್ಕು ಮತ್ತು ಸಿಮೆಂಟ್ ಉದ್ಯಮದ ದೊಡ್ಡ ಕಂಪನಿಗಳು ಬೆಲೆ ಹೆಚ್ಚಿಸಲು ಕೂಟ ರಚಿಸಿಕೊಂಡಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.

ಈ ವಿಚಾರವಾಗಿ ತಾವು ಪ್ರಧಾನಿ ಹಾಗೂ ಪ್ರಧಾನಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿರುವುದಾಗಿಯೂ ಗಡ್ಕರಿ ತಿಳಿಸಿದ್ದಾರೆ. ಉಕ್ಕು ಉದ್ಯಮದ ಎಲ್ಲ ಕಂಪನಿಗಳು ತಮ್ಮದೇ ಆದ ಕಬ್ಬಿಣದ ಅದಿರು ಗಣಿ ಹೊಂದಿವೆ. ಅವು ಕಾರ್ಮಿಕರ ಅಥವಾ ಇಂಧನ ವೆಚ್ಚದಲ್ಲಿ ಹೆಚ್ಚಳ ಕಂಡಿಲ್ಲ. ಹೀಗಿದ್ದರೂ, ಉಕ್ಕು ಉದ್ಯಮವು ಬೆಲೆ ಹೆಚ್ಚಿಸುತ್ತಿರುವುದು ಹೇಗೆ ಎಂದು ಗಡ್ಕರಿ ಪ್ರಶ್ನಿಸಿದರು.

‘ಈ ಸಮಸ್ಯೆಗೆ ಪರಿಹಾರ ಕಾಣುವ ಹಾದಿಯಲ್ಲಿ ನಾವಿದ್ದೇವೆ. ಉಕ್ಕು ಮತ್ತು ಸಿಮೆಂಟ್ ಉದ್ಯಮಕ್ಕೆ ನಿಯಂತ್ರಕರು ಬೇಕು ಎಂಬ ಆಗ್ರಹವನ್ನು ಪರಿಶೀಲಿಸಲಾಗುವುದು. ಇದರ ಬಗ್ಗೆ ನಾನು ಹಣಕಾಸು ಸಚಿವಾಲಯ ಹಾಗೂ ಪ್ರಧಾನಿ ಜೊತೆ ಮಾತನಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT