ಈ ವಿಚಾರವಾಗಿ ತಾವು ಪ್ರಧಾನಿ ಹಾಗೂ ಪ್ರಧಾನಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿರುವುದಾಗಿಯೂ ಗಡ್ಕರಿ ತಿಳಿಸಿದ್ದಾರೆ. ಉಕ್ಕು ಉದ್ಯಮದ ಎಲ್ಲ ಕಂಪನಿಗಳು ತಮ್ಮದೇ ಆದ ಕಬ್ಬಿಣದ ಅದಿರು ಗಣಿ ಹೊಂದಿವೆ. ಅವು ಕಾರ್ಮಿಕರ ಅಥವಾ ಇಂಧನ ವೆಚ್ಚದಲ್ಲಿ ಹೆಚ್ಚಳ ಕಂಡಿಲ್ಲ. ಹೀಗಿದ್ದರೂ, ಉಕ್ಕು ಉದ್ಯಮವು ಬೆಲೆ ಹೆಚ್ಚಿಸುತ್ತಿರುವುದು ಹೇಗೆ ಎಂದು ಗಡ್ಕರಿ ಪ್ರಶ್ನಿಸಿದರು.