ನವದೆಹಲಿ (ಪಿಟಿಐ): ‘ಸರ್ಕಾರಿ ಸ್ವಾಮ್ಯದಭಾರತ್ ಸಂಚಾರ್ ನಿಗಮ ನಿಯಮಿತದಲ್ಲಿ (ಬಿಎಸ್ಎನ್ಎಲ್) ಇರುವ 54 ಸಾವಿರ ಸಿಬ್ಬಂದಿಯನ್ನು ಕಡಿತ ಮಾಡುವ ಯಾವುದೇ ಪ್ರಸ್ತಾವಕ್ಕೂ ಅನುಮತಿ ನೀಡಿಲ್ಲ’ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
‘ಸಿಬ್ಬಂದಿ ಕಡಿತ ಮಾಡುವ ಪ್ರಸ್ತಾವಕ್ಕೆ ಅನುಮೋದನ ನೀಡಲಾಗಿಲ್ಲ ಎಂದು ಬಿಎಸ್ಎನ್ಎಲ್ಗೆ ತಿಳಿಸಲಾಗಿದೆ’ ಎಂದು ರಾಜ್ಯಸಭೆಗೆ ಲಿಖಿತ ರೂಪದ ಉತ್ತರ ನೀಡಿದ್ದಾರೆ.
45,597 ಕಾರ್ಯನಿರ್ವಾಹಕ ಮತ್ತು 1,17,305 ಕಾರ್ಯನಿರ್ವಾಹಕೇತರರನ್ನೂ ಒಳಗೊಂಡು ಒಟ್ಟಾರೆ 1,63,902 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಸ್ವತ್ತುಗಳನ್ನು ನಗದೀಕರಣಗೊಳಿಸಲು ಮತ್ತು ಗುಜರಾತ್ ಮಾದರಿಯಂತೆ ಕೆಲವು ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ ರೂಪಿಸಲು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆಗಳು ಸರ್ಕಾರದಅನುಮತಿ ಕೇಳಿದ್ದವು.