<p><strong>ಬೆಂಗಳೂರು: </strong>ಕೋವಿಡ್–19ಯಿಂದ ಸಮಸ್ಯೆಗೆ ಒಳಗಾಗಿರುವ ತನ್ನೆಲ್ಲಾ ಗ್ರಾಹಕರಿಗೂ ಅಗತ್ಯವಾದ ಸಾಲದ ನೆರವು ನೀಡುವುದಾಗಿ ಕೆನರಾ ಬ್ಯಾಂಕ್ ಘೋಷಿಸಿದೆ.</p>.<p>ವೇತನ, ವಿದ್ಯುತ್ ಬಿಲ್, ಬಾಡಿಗೆ ಹೀಗೆ ಇನ್ನಿತರ ಅಗತ್ಯಗಳಿಗೆ ಸಂಬಂಧಿಸಿದಂತೆ ಹಣ ಪಾವತಿಸಲು ಸುಲಭ ಮತ್ತು ತ್ವರಿತವಾದ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದೆ.</p>.<p>ಕೃಷಿ, ಸ್ವ ಸಹಾಯ ಗುಂಪುಗಳು ಮತ್ತು ರಿಟೇಲ್ ವಲಯಗಳಲ್ಲಿ ಹೀಗೆ ಇದುವರೆಗೆ₹4,300 ಕೋಟಿ ಮೊತ್ತದ ಆರು ಲಕ್ಷ ಸಾಲ ವಿತರಣೆ ಮಾಡಲಾಗಿದೆ.</p>.<p>ಅರ್ಹ ಸಾಲದಾತರನ್ನು ಗುರುತಿಸಿ, ಸಾಲ ನೀಡಲು ಎಸ್ಎಂಎಸ್, ಕಾಲ್ ಸೆಂಟರ್, ಇ–ಮೇಲ್ ಮತ್ತು ವೈಯಕ್ತಿಕ ಕರೆಯ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.</p>.<p>2020ರ ಮಾರ್ಚ್ನಿಂದ ಇಲ್ಲಿಯವರೆಗೆಕಾರ್ಪೊರೇಟ್ ಮತ್ತು ಎಂಎಸ್ಎಂಇ ವಲಯಗಳಿಗೆ ₹ 60 ಸಾವಿರ ಕೋಟಿಗೂ ಅಧಿಕ ಮುಂಗಡ ಸಾಲ ನೀಡಲಾಗಿದೆ.</p>.<p>‘ಲಾಕ್ಡೌನ್ನಿಂದ ಸಂಪೂರ್ಣವಾಗಿ ವಿನಾಯಿತಿ ದೊರೆತ ಬಳಿಕ ನಮ್ಮ ಗ್ರಾಹಕರಿಗೆ ಬ್ಯಾಂಕಿನ ಎಲ್ಲಾ ಸೌಲಭ್ಯಗಳೂ ಲಭ್ಯವಾಗಲಿದ್ದು, ಅವರ ವಹಿವಾಟು ಸುಧಾರಣೆಗೆ ಅನುಕೂಲವಾಗಲಿದೆ ಎಂದು ಬ್ಯಾಂಕ್ನ ಸಿಇಒ ಎಲ್.ವಿ. ಪ್ರಭಾಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೋವಿಡ್–19ಯಿಂದ ಸಮಸ್ಯೆಗೆ ಒಳಗಾಗಿರುವ ತನ್ನೆಲ್ಲಾ ಗ್ರಾಹಕರಿಗೂ ಅಗತ್ಯವಾದ ಸಾಲದ ನೆರವು ನೀಡುವುದಾಗಿ ಕೆನರಾ ಬ್ಯಾಂಕ್ ಘೋಷಿಸಿದೆ.</p>.<p>ವೇತನ, ವಿದ್ಯುತ್ ಬಿಲ್, ಬಾಡಿಗೆ ಹೀಗೆ ಇನ್ನಿತರ ಅಗತ್ಯಗಳಿಗೆ ಸಂಬಂಧಿಸಿದಂತೆ ಹಣ ಪಾವತಿಸಲು ಸುಲಭ ಮತ್ತು ತ್ವರಿತವಾದ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದೆ.</p>.<p>ಕೃಷಿ, ಸ್ವ ಸಹಾಯ ಗುಂಪುಗಳು ಮತ್ತು ರಿಟೇಲ್ ವಲಯಗಳಲ್ಲಿ ಹೀಗೆ ಇದುವರೆಗೆ₹4,300 ಕೋಟಿ ಮೊತ್ತದ ಆರು ಲಕ್ಷ ಸಾಲ ವಿತರಣೆ ಮಾಡಲಾಗಿದೆ.</p>.<p>ಅರ್ಹ ಸಾಲದಾತರನ್ನು ಗುರುತಿಸಿ, ಸಾಲ ನೀಡಲು ಎಸ್ಎಂಎಸ್, ಕಾಲ್ ಸೆಂಟರ್, ಇ–ಮೇಲ್ ಮತ್ತು ವೈಯಕ್ತಿಕ ಕರೆಯ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.</p>.<p>2020ರ ಮಾರ್ಚ್ನಿಂದ ಇಲ್ಲಿಯವರೆಗೆಕಾರ್ಪೊರೇಟ್ ಮತ್ತು ಎಂಎಸ್ಎಂಇ ವಲಯಗಳಿಗೆ ₹ 60 ಸಾವಿರ ಕೋಟಿಗೂ ಅಧಿಕ ಮುಂಗಡ ಸಾಲ ನೀಡಲಾಗಿದೆ.</p>.<p>‘ಲಾಕ್ಡೌನ್ನಿಂದ ಸಂಪೂರ್ಣವಾಗಿ ವಿನಾಯಿತಿ ದೊರೆತ ಬಳಿಕ ನಮ್ಮ ಗ್ರಾಹಕರಿಗೆ ಬ್ಯಾಂಕಿನ ಎಲ್ಲಾ ಸೌಲಭ್ಯಗಳೂ ಲಭ್ಯವಾಗಲಿದ್ದು, ಅವರ ವಹಿವಾಟು ಸುಧಾರಣೆಗೆ ಅನುಕೂಲವಾಗಲಿದೆ ಎಂದು ಬ್ಯಾಂಕ್ನ ಸಿಇಒ ಎಲ್.ವಿ. ಪ್ರಭಾಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>