ರಫ್ತು ಮಾಡಿದಾಗ ರೈತರಿಗೆ ಸಾಮಾನ್ಯವಾಗಿ ಕ್ವಿಂಟಲ್ಗೆ ₹1,900ರವರೆಗೆ ಸಿಗುತ್ತದೆ. ಆದರೆ ಸರ್ಕಾರವು ₹2,410 ನೀಡಿ ಖರೀದಿಸುತ್ತಿದೆ. ರಫ್ತಿನ ಮೇಲೆ ಸುಂಕ ವಿಧಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ಎನ್ಸಿಸಿಎಫ್ ಹಾಗೂ ನಾಫೆಡ್ ಸಂಸ್ಥೆಗಳಿಗೆ ರೈತರಿಂದ ಈರುಳ್ಳಿ ಖರೀದಿಸಲು ಸೂಚಿಸಲಾಗಿದೆ ಎಂದು ಗೋಯಲ್ ಹೇಳಿದ್ದಾರೆ. ಈ ಎರಡು ಸಂಸ್ಥೆಗಳು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಈರುಳ್ಳಿ ಖರೀದಿ ಪುನರಾರಂಭಿಸಿವೆ.